ಶಿವಮೊಗ್ಗ: ಮಾಚೇನಹಳ್ಳಿಯ ಶಾಹಿ ಗಾರ್ಮೆಂಟ್ಸ್ನಲ್ಲಿ ನಿರ್ಮಾಣ ಹಂತದ ಕಟ್ಟಡದಲ್ಲಿ 10 ಅಡಿ ಮೇಲಿನಿಂದ ಬಂದ ಕ್ರೇನ್ ಮೆಷಿನ್ ಡಿಕ್ಕಿ ಹೊಡೆದು ಗಾರೆ ಕೆಲಸಗಾರರೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಹೊಳೆಬೆನವಳ್ಳಿ ತಾಂಡಾದ ನಾಗು ನಾಯ್ಕ (53) ಗಾಯಗೊಂಡವರು.➤ ಸುದ್ದಿಯ ಮುಂದಿನ 2 ಪ್ಯಾರಾಗಳು ಕೆಳಗಿವೆ.
ಜೂನ್ 16ರಂದು ಘಟನೆ ನಡೆದಿದ್ದು ತಡವಾಗಿ ಪ್ರಕರಣ ದಾಖಲಾಗಿದೆ. ನಾಗು ನಾಯ್ಕ ಕೆಲಸ ಮಾಡುತ್ತಿದ್ದಾಗ ಕ್ರೇನ್ ಡಿಕ್ಕಿಯಾಗಿದೆ. ಘಟನೆಯಲ್ಲಿ ಬಲಗಾಲಿಗೆ ಗಂಭೀರ ಸ್ವರೂಪದ ಗಾಯವಾಗಿದೆ. ಕೈ-ಕಾಲುಗಳಿಗೆ ತೀವ್ರ ಪೆಟ್ಟಾಗಿ ರಕ್ತಸ್ರಾವವಾಗಿದೆ. ತಕ್ಷಣ ಅವರನ್ನು ಭದ್ರಾವತಿಯ ದುರ್ಗಾ ಕ್ಲಿನಿಕ್ನಲ್ಲಿ ಪ್ರಾಥಮಿಕ ಚಿಕಿತ್ಸೆಗೆ ದಾಖಲಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಸುಬ್ಬಯ್ಯ ಆಸ್ಪತ್ರೆಗೆ ಕರೆತರಲಾಗಿತ್ತು.

ಸುರಕ್ಷತೆ ಕ್ರಮ ಕೈಗೊಳ್ಳದೆ ಕೆಲಸಕ್ಕೆ ನಿಯೋಜನೆ ಮಾಡಿಕೊಳ್ಳಲಾಗಿತ್ತು ಎಂದು ಆರೋಪಿಸಿ ನಾಗು ನಾಯ್ಕ ಅವರ ಪತ್ನಿ ನೀಡಿದ ದೂರಿನ ಹಿನ್ನೆಲೆ ತುಂಗಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ:➤ ವಿಚಾರಣಾಧೀನ ಕೈದಿ ಮಾತನಾಡಿಸಲು ಶಿವಮೊಗ್ಗದ ಜೈಲಿಗೆ ಬಂದಿದ್ದ ಮಹಿಳೆ, ಪುರುಷ ಜೈಲಿನಲ್ಲೇ ಅರೆಸ್ಟ್, ಕಾರಣವೇನು?