ಅಡಿಕೆ ತೋಟಕ್ಕೆ ಅಳವಡಿಸಿದ್ದ ಪಂಪ್‌ಸೆಟ್‌, ತಾಮ್ರದ ತಂತಿ ರಾತ್ರೋರಾತ್ರಿ ನಾಪತ್ತೆ, ಎಲ್ಲಿ? ಆಗಿದ್ದೇನು?

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ

ಶಿವಮೊಗ್ಗ ಲೈವ್.ಕಾಂ | ಹೊಸನಗರ

ಹೊಸನಗರ ತಾಲೂಕಿನ ಕಣಿಕಿ ಬೇಳೂರು ಗ್ರಾಮದಲ್ಲಿ ಅಡಿಕೆ ತೋಟಕ್ಕೆ ಅಳವಡಿಸಿದ್ದ ನೀರು ಪಂಪ್‌ಸೆಟ್ ಹಾಗೂ ತಾಮ್ರದ ತಂತಿಯನ್ನು ಕಳ್ಳರು ದೋಚಿದ್ದಾರೆ. ಬಿ.ಎನ್. ಭಾಸ್ಕರ ಎಂಬುವವರಿಗೆ ಸೇರಿದ ತೋಟದಲ್ಲಿ ಕೃತ್ಯ ನಡೆದಿದೆ. ಸುದ್ದಿಯ ಮುಂದಿನ 2 ಪ್ಯಾರಾಗಳು ಕೆಳಗಿವೆ.

ಆಗಸ್ಟ್‌ 10ರ ರಾತ್ರಿ ತೋಟದ ಬಳಿ ಹೊಳೆಗೆ ಅಳವಡಿಸಿದ್ದ 2 ಹೆಚ್.ಪಿ ಪಂಪ್‌ಸೆಟ್ ಬಳಸಿ ಮನೆ ಬಳಕೆಗೆ ನೀರು ತುಂಬಿಸಿಕೊಳ್ಳಲಾಗಿತ್ತು. ಮರುದಿನ ಬೆಳಿಗ್ಗೆ ತೋಟಕ್ಕೆ ತೆರಳಿ ಪಂಪ್‌ಸೆಟ್ ಆನ್ ಮಾಡಿದಾಗ ನೀರು ಬರಲಿಲ್ಲ. ಪರಿಶೀಲನೆ ಮಾಡಿದಾಗ ಹೊಳೆ ಬದಿಯಲ್ಲಿದ್ದ ಪಂಪ್‌ಸೆಟ್ ಹಾಗೂ ವಿದ್ಯುತ್ ಬೋರ್ಡ್‌ನಿಂದ ಪಂಪ್‌ಸೆಟ್‌ವರೆಗೆ ಹಾಕಿದ್ದ ಕಾಪರ್ ವೈರ್ ಕಳವಾಗಿರುವುದು ಬೆಳಕಿಗೆ ಬಂದಿದೆ.

NAGARA-NEWS-GRAPHICS-BY-SHIVAMOGGA-LIVE

₹15,000 ಮೌಲ್ಯದ ಪಂಪ್‌ಸೆಟ್ ಹಾಗೂ ₹15,000 ಮೌಲ್ಯದ 200 ಅಡಿ ಉದ್ದದ ಕಾಪರ್ ವೈರ್ ಸೇರಿ ಒಟ್ಟು ₹30,000 ಮೌಲ್ಯದ ವಸ್ತುಗಳು ಕಳ್ಳತನವಾಗಿವೆ ಎಂದು ಆರೋಪಿಸಲಾಗಿದೆ. ಈ ಸಂಬಂಧ ಹೊಸನಗರ ತಾಲೂಕಿನ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.