SHIMOGA CRIME | ಸೆಕ್ಯೂರಿಟಿ ಗಾರ್ಡ್ ಕೈಕಾಲು ಕಟ್ಟಿ, ದೇವಸ್ಥಾನದ ಐದು ಹುಂಡಿ ಒಡೆದ ಖತರ್ನಾಕ್ ಕಳ್ಳರು

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

ಶಿವಮೊಗ್ಗ ಲೈವ್.ಕಾಂ | SHIMOGA | 25 ನವೆಂಬರ್ 2019

ದೇವಸ್ಥಾನದ ಸೆಕ್ಯೂರಿಟಿ ಗಾರ್ಡ್ ಮೇಲೆ ಹಲ್ಲೆ ನಡೆಸಿ, ಆತನ ಕೈಕಾಲು ಕಟ್ಟಿ ಹಾಕಿ, ಹುಂಡಿ ಒಡೆದು ಹಣ ಕಳ್ಳತನ ಮಾಡಲಾಗಿದೆ. ಖತರ್ನಾಕ್ ಕಳ್ಳರ ಕೈಚಳಕ ದೇವಸ್ಥಾನದ ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದೆ.

ಮಧ್ಯರಾತ್ರಿ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಕಳ್ಳರ ಕುರಿತು ಪೊಲೀಸರಿಗೆ ಮಾಹಿತಿ ಲಭ್ಯವಾಗಿದ್ದು, ಕೂಡಲೇ ಬಂಧಿಸುವುದಾಗಿ ತಿಳಿಸಿದ್ದಾರೆ.

ಕಳ್ಳತನ ಆಗಿದ್ದು ಯಾವ ದೇವಸ್ಥಾನದಲ್ಲಿ?

ಶ್ರೀ ಶಿರಡಿ ಸಾಯಿ ಬಾಬಾ ಮಂದಿರದಲ್ಲಿ ಕಳ್ಳರು ಕೈಚಳಕ ತೋರಿಸಿದ್ದಾರೆ. ಶಿವಮೊಗ್ಗ ಭದ್ರಾವತಿ ರಸ್ತೆಯಲ್ಲಿ, ಬಿದರೆ ಬಳಿ ಇರುವ ದೇವಸ್ಥಾನದಲ್ಲಿ ಘಟನೆ ನಡೆದಿದೆ. ನಾಲ್ಕರಿಂದ ಐದು ಕಳ್ಳರು ಭಾಗಿ ಆಗಿರುವ ಶಂಕೆ ಇದೆ.

55471895 581137215699526 7805819085832323072 n.jpg? nc cat=104& nc ohc=II53kjaxs5EAQkqJGeQjzFtQCUVB JMhC9aU4kiH oiRDElvNokmO3CuA& nc ht=scontent.fblr11 1

ಸೆಕ್ಯೂರಿಟ ಮೇಲೆ ಅಟ್ಯಾಕ್

ರಾತ್ರಿ 3 ಗಂಟೆ ಹೊತ್ತಿಗೆ ಕಳ್ಳತನ ಮಾಡಿರುವ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ದೇವಸ್ಥಾನದ ಆವರಣದೊಳಗೆ ಬಂದ ಕಳ್ಳರು, ಮೊದಲು ಸೆಕ್ಯೂರಿಟಿ ಗಾರ್ಡ್ ಮೇಲೆ ಅಟ್ಯಾಕ್ ಮಾಡಿದ್ದಾರೆ. ಸೆಕ್ಯೂರಿಟಿ ಗಾರ್ಡ್ ಪ್ರಕಾಶ್ (62) ಅವರ ಮೇಲೆ ಹಲ್ಲೆ ನಡೆಸಿ, ಮರಕ್ಕೆ ಕಟ್ಟಿ ಹಾಕಿದ್ದಾರೆ.

77240227 982847612076659 1276939007401394176 n.jpg? nc cat=106& nc ohc=CLF4t5t I5EAQlSjg SloJRt2nXaC71t9Hbs2X4AoTamDVuvLaf mWKRw& nc ht=scontent.fblr11 1

ಬಾಗಿಲು ಬಳಿಯ ಗ್ಲಾಸ್ ಪೀಸ್ ಪೀಸ್

ಸಾಯಿ ಮಂದಿರದ ಮುಖ್ಯ ದ್ವಾರಕ್ಕೆ ಗ್ಲಾಸ್ ಅಳವಡಿಸಲಾಗಿದೆ. ಇದನ್ನು ಒಡೆದಿರುವ ಕಳ್ಳರು ಬಾಗಿಲು ತೆಗೆದು ದೇವಸ್ಥಾನದ ಒಳಗೆ ಹೋಗಿದ್ದಾರೆ. ಒಳಗಿದ್ದ ಮೂರು ಸಣ್ಣ ಮತ್ತು ಎರಡು ದೊಡ್ಡ ಹುಂಡಿಗಳನ್ನು ಒಡೆದು, ಕಾಣಿಕೆ ಹಣವನ್ನು ದೋಚಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

75513509 734999633646616 7700410297646841856 n.jpg? nc cat=109& nc ohc=8LRWTHLsZyUAQka2P57NNIEMQMID3eXBHu9pFGAXoJXi8fEEAY2AKusuw& nc ht=scontent.fblr11 1

ಘಟನೆ ಬೆಳಕಿಗೆ ಬಂದಿದ್ದು ಹೇಗೆ?

ಮಧ್ಯರಾತ್ರಿ ಘಟನೆ ನಡೆದಿದ್ದು, ಬೆಳಗ್ಗೆ ಎಲ್ಲರಿಗೂ ಗೊತ್ತಾಗಿದೆ. ಮರಕ್ಕೆ ಕಟ್ಟಿದ್ದ ಹಗ್ಗದಿಂದ ಸೆಕ್ಯೂರಿಟಿ ಗಾರ್ಡ್ ಪ್ರಕಾಶ್ ಬಿಡಿಸಿಕೊಂಡಿದ್ದಾರೆ. ಅಲ್ಲಿಂದ ತಪ್ಪಿಸಿಕೊಂಡು ಹೋಗಿ, ಮಂದಿರದ ಪ್ರಮುಖರು ಮತ್ತು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸದ್ಯ ಪ್ರಕಾಶ್ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಚಿಕಿತ್ಸೆ ನಡೆಯುತ್ತಿದೆ.

78243122 982847592076661 7443286720352616448 n.jpg? nc cat=106& nc ohc= vSaox8CHvUAQlwC8AII1hbR4n 77LS9jdpGyNBQuTSeZntUaqdC3wuIw& nc ht=scontent.fblr11 1

ಕಳ್ಳರು ಕದ್ದ ಹಣವೆಷ್ಟು?

ಹುಂಡಿ ಒಡೆದಿರುವ ಕಳ್ಳರಿಗೆ ಸುಮಾರು 60 ರಿಂದ 70 ಸಾವಿರದಷ್ಟು ಕಾಣಿಕೆ ಹಣ ಸಿಕ್ಕಿರಬಹುದು ಎಂದು ಶಂಕಿಸಲಾಗಿದೆ. ಆದರೆ ಈ ಕುರಿತು ಪ್ರತಿಕ್ರಿಯೆ ನೀಡಲು ದೇವಸ್ಥಾನದ ಆಡಳಿತ ಮಂಡಳಿ ನಿರಾಕರಿಸಿದೆ.

77267722 982847628743324 1259580111095595008 n.jpg? nc cat=109& nc ohc=aXOuGgwDsqsAQlpKJwZ9t6 vGPBsYUxFcT4Ooawjitk61wGJbSlyiqFwA& nc ht=scontent.fblr11 1

ಘಟನೆ ಮಾಹಿತಿ ತಿಳಿಯುತ್ತಿದ್ದಂತೆ ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂಬಂಧ ಪ್ರಕರಣ ದಾಖಲು ಮಾಡಿಕೊಂಡು, ತನಿಖೆ ಕೈಗೊಂಡಿದ್ದಾರೆ.

ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ – 7411700200

ಸುದ್ದಿಗಾಗಿ ಕರೆ ಮಾಡಿ – 9964634494

ಈ ಮೇಲ್ ಐಡಿ | shivamoggalive@gmail.com

Theft has been reported in Shree Shiradi Sai Mandira in near Bidare village in Shimoga. Thieves attacked the security guard, broke the doors of the sai mandir. A complaint has been reported in Shimoga Rural Police Station.

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment