ಶಿವಮೊಗ್ಗ ಲೈವ್.ಕಾಂ | THIRTHAHALLI | 24 ಡಿಸೆಂಬರ್ 2019
ಬಾವಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದ ಅಪ್ರಾಪತ್ತೆಯನ್ನು ಗ್ರಾಮಸ್ಥರು ರಕ್ಷಣೆ ಮಾಡಿದ್ದಾರೆ. ಅಕೆಯನ್ನು ಶಿಶು ಮತ್ತು ಮಕ್ಕಳ ಕಲ್ಯಾಣ ಸಮಿತಿಯ ವಶಕ್ಕೆ ಒಪ್ಪಿಸಿದ್ದಾರೆ. ಕುರುವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊರಬೈಲು ಗ್ರಾಮದಲ್ಲಿ ಘಟನೆ ನಡೆದಿದೆ.
ಆತ್ಮಹತ್ಯೆಗೆ ಯತ್ನಿಸಿದ್ದೇಕೆ?
ಅಪ್ರಾಪ್ತೆಯು ಶಿಕಾರಿಪುರ ತಾಲೂಕಿ ಗ್ರಾಮವೊಂದಕ್ಕೆ ಸೇರಿದವಳಾಗಿದ್ದಾಳೆ. ತಂದೆ ಮೃತರಾಗಿದ್ದಾರೆ. ತಾಯಿ ಮತ್ತು ಅಣ್ಣಂದಿರು ಮಾತ್ರ ಇದ್ದಾರೆ. ಅಣ್ಣಂದಿರು ಕೂಲಿ ಕೆಲಸ ಮಾಡುತ್ತಿದ್ದಾರೆ. ಅಪ್ರಾಪ್ತೆಯನ್ನು ಶಾಲೆಗೆ ಸೇರಿಸಿ ಓದಿಸುವುದಾಗಿ ತಿಳಿಸಿ ತೀರ್ಥಹಳ್ಳಿಯ ಹೊರಬೈಲಿನ ಜಮೀನ್ದಾರರೊಬ್ಬರು ಬಾಲಕಿಯನ್ನು ಮನೆಯಲ್ಲಿ ಉಳಿಸಿಕೊಂಡಿದ್ದರು. ಬಾಲಕಿಯ ತಾಯಿ ಇದೇ ಮನೆಯಲ್ಲಿ ಈ ಮೊದಲು ಕೆಲಸ ಮಾಡುತ್ತಿದ್ದರು. ಹಾಗಾಗಿ ಕಳೆದ ವರ್ಷ ಜಮೀನ್ದಾರ ಬಾಲಕಿಯನ್ನು 5ನೇ ತರಗತಿಗೆ ಸೇರಿಸಿದ್ದರು.
ಈ ವರ್ಷ ಶಾಲೆಗೆ ಸೇರಿಸದೆ ಜಮೀನ್ದಾರ ಮನೆ ಕೆಲಸ ಮಾಡಿಸುತ್ತಿದ್ದರು ಎಂದು ಬಾಲಕಿ ಆರೋಪಿಸಿದ್ದಾಳೆ. ಇದರಿಂದ ಮನನೊಂದು ಪರಿಚಯದವರೊಬ್ಬರ ಮನೆಗೆ ತೆರಳಿದ್ದಳು. ಅವರು ಜಮೀನ್ದಾರನಿಗೆ ಮಾಹಿತಿ ನೀಡಿದ್ದರು. ಶಾಲೆಗೆ ಸೇರಿಸದೆ ಮನೆ ಕೆಲಸ ಮಾಡಿಸಲಾಗುತ್ತಿದೆ ಎಂದು ಮನನೊಂದು ಆತ್ಮಹತ್ಯೆ ಯತ್ನಿಸಿದ್ದಾಗಿ ಬಾಲಕಿ ಹೇಳಿದ್ದಾಳೆ. ಈಕೆ ಆತ್ಮಹತ್ಯೆಗೆ ಯತ್ನಿಸಿದ್ದನ್ನು ಗಮನಿಸಿದ ಸ್ಥಳೀಯರು ಕೂಡಲೇ ರಕ್ಷಣೆ ಮಾಡಿ, ಪೊಲೀಸರಿಗೆ ಮಾಹಿತಿ ನೀಡಿದ್ದರು.
ಪ್ರಕರಣದ ತೀವ್ರ ಸ್ವರೂಪದ್ದಾದ ಹಿನ್ನೆಲೆ ಜಿಲ್ಲಾಧಿಕಾರಿ ಅವರು, ಬಾಲಕಿಯನ್ನು ಕೂಡಲೇ ಶಿವಮೊಗ್ಗದ ಬಾಲ ಮಂದಿರಕ್ಕೆ ಸೇರಿಸುವಂತೆ ಶಿಶು ಮತ್ತು ಮಹಿಳಾ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ – 7411700200
ಸುದ್ದಿಗಾಗಿ ಕರೆ ಮಾಡಿ – 9964634494
ಈ ಮೇಲ್ ಐಡಿ | [email protected]