ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 16 MAY 2024
SHIMOGA : ದೆಹಲಿ ಮತ್ತು ಅಹಮದಾಬಾದ್ಗೆ ಲಾರಿಯಲ್ಲಿ ಕಳುಹಿಸಿದ್ದ ಅಡಿಕೆ ಪೈಕಿ 10 ಕ್ವಿಂಟಾಲ್ ಅಡಿಕೆ ಕಳುವಾಗಿದೆ (THEFT). ಈ ಸಂಬಂಧ ಲಾರಿ ಚಾಲಕರ ವಿರುದ್ಧವೆ ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜಾಹೀರಾತು ಶಿವಮೊಗ್ಗದಲ್ಲಿ ಮನೆ ಸಾಲ ಮತ್ತು ಇತರೆ ಲೋನ್ಗಳನ್ನು ಪಡೆಯುವುದು ಈಗ ಸುಲಭ. ಕರೆ ಮಾಡಿ 9972194422
ಏ.9ರಂದು ಅಹಮದಾಬಾದ್ಗೆ 24,500 ಕೆ.ಜಿ ಅಡಿಕೆ ಕಳುಹಿಸಲಾಗಿತ್ತು. ಏ.18ರಂದು ದೆಹಲಿಗೆ 24,500 ಕೆ.ಜಿ ಅಡಿಕೆ ರವಾನಿಸಲಾಗಿತ್ತು. ಆದರೆ ದೆಹಲಿ ಮತ್ತು ಅಹಮದಾಬಾದ್ನ ಅಡಿಕೆ ವ್ಯಾಪಾರಿಗಳು ತೂಕ ಕಡಿಮೆಯಾಗಿದೆ ಎಂದು ಆರೋಪಿಸಿದ್ದರು. ಈ ಹಿನ್ನೆಲೆ ಟ್ರಾನ್ಸ್ಪೋರ್ಟ್ ಮ್ಯಾನೇಜರ್ ಎರಡು ಲಾರಿಗಳ ಚಾಲಕರ ವಿಚಾರಣೆ ಮಾಡಿದಾಗ ಅಡಿಕೆ ಕಳ್ಳತನ ಪ್ರಕರಣ ಬೆಳಕಿಗೆ ಬಂದಿದೆ.
ಇದನ್ನೂ ಓದಿ – ಅಡಿಕೆ ಧಾರಣೆ | 16 ಮೇ 2024 | ಇವತ್ತು ಯಾವ್ಯಾವ ಮಾರುಕಟ್ಟೆಯಲ್ಲಿ ಎಷ್ಟಿದೆ ಅಡಿಕೆ ರೇಟ್?
ಲಾರಿ ಚಾಲಕರು ಪ್ರತಿ ಚೀಲದಿಂದ ಒಂದೆರಡು ಕೆ.ಜಿಯಷ್ಟು ಅಡಿಕೆ ಕಳ್ಳತನ ಮಾಡಿ, ಮಾರಾಟ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ ಎಂದು ಟ್ರಾನ್ಸ್ಪೋರ್ಟ್ ಮ್ಯಾನೇಜರ್ ಶೇಕ್ ಉಮರ್ ಫಾರೂಕ್ ದೂರಿನಲ್ಲಿ ಆರೋಪಿಸಿದ್ದಾರೆ. ಅಂದಾಜು 2.50 ಲಕ್ಷ ರೂ. ಮೌಲ್ಯದ 10 ಕ್ವಿಂಟಾಲ್ ಅಡಿಕೆ ಕಳ್ಳತನವಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಜಯನಗರ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಶಿವಮೊಗ್ಗ ಲೈವ್.ಕಾಂ