SHIVAMOGGA LIVE NEWS | 19 APRIL 2024
HOLEHONNURU : ಶ್ರೀರಾಮ ನವಮಿ ಪ್ರಯುಕ್ತ ಆಂಜನೇಯ ಸ್ವಾಮಿ ಬ್ರಹ್ಮ ರಥೋತ್ಸವ ಹಾಗೂ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ನೆರವೇರಿತು. ರಥದಲ್ಲಿ ಆಂಜನೇಯ ಸ್ವಾಮಿಯನ್ನು ಕಣ್ತುಂಬಿಕೊಂಡ ಭಕ್ತರು ಪೂಜೆ ಸಲ್ಲಿಸಿ, ರಥ ಎಳೆದು ಭಕ್ತಿ ಸಮರ್ಪಿಸಿದರು. ಇಷ್ಟಾರ್ಥ ಸಿದ್ದಿಗಾಗಿ ಕೆಲವರು ರಥದ ಕಳಸಕ್ಕೆ ಬಾಳೆಹಣ್ಣು ತೂರಿದರು. ವಿವಿಧ ಕಲಾ ತಂಡಗಳು, ನೃತ್ಯ ಮೇಳಗಳು ರಾಜ ಬೀದಿ ಉತ್ಸವಕ್ಕೆ ಮೆರಗು ನೀಡಿದವು. ದೊಡ್ಡ ಸಂಖ್ಯೆಯ ಭಕ್ತರು ರಥೋತ್ಸವದಲ್ಲಿ ಭಾಗವಹಿಸಿದ್ದರು. ಮಂಗಳವಾರ ಮಲ್ಲೇಶ್ವರ ಸ್ವಾಮಿ ದೇವಸ್ಥಾನದ ಬಳಿ ಕೆಂಡಾರ್ಚನೆಯೊಂದಿಗೆ ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಲಾಗಿತ್ತು. ಬುಧವಾರ ಉಚ್ಚಯ್ಯ ಉತ್ಸವ ನಡೆಯಿತು.
ಇದನ್ನೂ ಓದಿ – ಶಿವಮೊಗ್ಗದಲ್ಲಿ ರಾರಾಜಿಸಿದ ಕೇಸರಿ, ಹಸಿರು ಧ್ವಜಗಳು, ಮೊಳಗಿತು ರಾಘವೇಂದ್ರ ಪರ ಘೋಷಣೆ