ಶಿವಮೊಗ್ಗ ಲೈವ್.ಕಾಂ | SHIMOGA NEWS | 6 ನವೆಂಬರ್ 2021
ನಟ ಪುನೀತ್ ರಾಜಕುಮಾರ್ ಅವರಿಗೆ ಶಿವಮೊಗ್ಗದಲ್ಲಿ ಇವತ್ತು ಗೀತ ನಮನ ಸಲ್ಲಿಸಲಾಯಿತು. ಅನಿಕೇತನ ಟ್ರಸ್ಟ್ ವತಿಯಿಂದ ಕುವೆಂಪು ರಂಗಮಂದಿರದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಅಪ್ಪು ಅಮರ ಕಾರ್ಯಕ್ರಮಕ್ಕೆ ಮಕ್ಕಳು ಚಾಲನೆ ನೀಡಿದರು. ಬಳಿಕ ಪುನೀತ್ ರಾಜಕುಮಾರ್ ಅವರ ಸ್ಮರಣಾರ್ಥ ಮೌನಾಚರಣೆ ನಡೆಸಲಾಯಿತು.
ನಟ ಪುನೀತ್ ರಾಜಕುಮಾರ್ ಅವರ ಸಿನಿಮಾದ ವಿವಿಧ ಗೀತೆಗಳನ್ನು ಹಾಡಿ ಅವರನ್ನು ಸ್ಮರಿಸಿಕೊಳ್ಳಲಾಯಿತು. ಪ್ರತಿ ಹಾಡಿನ ನಡುವೆ, ಟ್ರಸ್ಟ್’ನ ಪ್ರಮುಖರಾದ ರಾಮೇಶ್ ಬಾಬು ಜಾಧವ್ ಅವರು ಪುನೀತ್ ರಾಜಕುಮಾರ್ ಅವರ ಸಿನಿಯಾನ, ಸಾಮಾಜಿಕ ಚಟುವಟಿಕೆ ಕುರಿತು ಮಾಹಿತಿ ಒದಗಿಸಿದರು.