SHIVAMOGGA LIVE NEWS | 3 JANUARY 2023
ರಿಪ್ಪನ್ ಪೇಟೆ: ಹೊಂಬುಜ ಜೈನಮಠದಲ್ಲಿ ಜ.6ರಂದು ಪಂಚಕಲ್ಯಾಣ ಪೂಜಾಮಹೋತ್ಸವ ಆಯೋಜಿಸಲಾಗಿದೆ. ಇದರ ಅಂಗವಾಗಿ ಶ್ರೀಮಠ, ಪದ್ಮಾವತಿ ಏಜುಕೇಷನ್ ಟ್ರಸ್ಟ್, ಆಲ್ ಇಂಡಿಯಾ ಯೂತ್ ಫೆಡರೇಷನ್, ಮಹಾವೀರ ಲಿಂಬ್ (limb) ಸೆಂಟರ್ ಹಾಗೂ ಹುಬ್ಬಳ್ಳಿ ಜೈನಧರ್ಮದ ಆಶ್ರಯದಲ್ಲಿ ಉಚಿತ ಕೃತಕ ಕಾಲು ಜೋಡಣಾ ಶಿಬಿರ ಏರ್ಪಡಿಸಲಾಗಿದೆ.
ಸ್ವಸ್ತಿಶ್ರೀ ಡಾ. ದೇವೇಂದ್ರ ಕೀರ್ತಿ ಭಟ್ಟಾರಕ ಶ್ರೀಗಳ ಸಾನ್ನಿಧ್ಯ ವಹಿಸುವರು. ಬೆಳಗ್ಗೆ 10ರಿಂದ ಮಧ್ಯಾಹ್ನ 2ರವರೆಗೆ ಶಿಬಿರ ಆಯೋಜಿಸಲಾಗಿದೆ. ಶಿವಮೊಗ್ಗ ಹಾಗೂ ಚಿಕ್ಕಮಗಳೂರು ಜಿಲ್ಲೆಯ ಫಲಾನುಭವಿಗಳು ಶಿಬಿರದ ಸದುಪಯೋಗ ಪಡೆದುಕೊಳ್ಳಬಹುದು. ಹೆಸರು ನೋಂದಣಿಗೆ ಜ.5 ಕಡೆಯ ದಿನ. ಹೆಚ್ಚಿನ ಮಾಹಿತಿಗೆ 08185-262722, 9448461867 ಸಂಪರ್ಕಿಸಬಹುದು.
ಇದನ್ನೂ ಓದಿ – ಹೊಸ ವರ್ಷ, ಶಿವಮೊಗ್ಗದ ಪ್ರವಾಸಿ ತಾಣಗಳಲ್ಲಿ ಜನಸಾಗರ, ಇಲ್ಲಿದೆ ಹೆಚ್ಚು ಜನ ಭೇಟಿ ನೀಡಿದ ಟಾಪ್ 3 ಟೂರಿಸ್ಟ್ ಸ್ಪಾಟ್