SHIVAMOGGA LIVE | 31 JULY 2023
ಬಾಕಿ ಹಣ ಕೇಳಿದ್ದಕ್ಕೆ ಬಾರ್ನಲ್ಲಿ ಕಿರಿಕ್, ಕಬ್ಬಿಣದ ಚೇರ್ನಿಂದ ಹಲ್ಲೆ
SHIMOGA : ಟಿವಿ, ಸ್ಟೇಬಲೈಸರ್ ಮಾರಾಟ ಮಾಡಿದ್ದು ಅದರ ಹಣ ಹಿಂತಿರುಗಿಸುವಂತೆ ಕೇಳಿದ್ದಕ್ಕೆ ವ್ಯಕ್ತಿಯೊಬ್ಬನ ಮೇಲೆ ಕಬ್ಬಿಣದ ಚೇರ್ನಿಂದ ಹಲ್ಲೆ (Assault) ನಡೆಸಿದ ಆರೋಪ ಕೇಳಿ ಬಂದಿದೆ. ನ್ಯೂ ಮಂಡ್ಲಿ ಗಂಧರ್ವನಗರದ ಚಾಲಕ ರವಿಕುಮಾರ್ ಮೇಲೆ ಹಲ್ಲೆಯಾಗಿದೆ. ತೌಸು ಎಂಬಾತನಿಗೆ ರವಿಕುಮಾರ್ ಟಿವಿ ಮತ್ತು ಸ್ಟೇಬಲೈಸರ್ ಮಾರಾಟ ಮಾಡಿದ್ದರು. 4 ಸಾವಿರ ರೂ. ಕೊಡಬೇಕಿದ್ದ ತೌಸು 1 ಸಾವಿರ ರೂ. ಮಾತ್ರ ನೀಡಿದ್ದ. 10 ದಿನ ಕಳೆದರು ಬಾಕಿ 3 ಸಾವಿರ ರೂ. ಹಣ ಕೊಟ್ಟಿರಲಿಲ್ಲ. ಜು.28ರಂದು ತೌಸು ಓ.ಟಿ.ರಸ್ತೆಯ ಬಾರ್ನಲ್ಲಿದ್ದಾಗ ರವಿಕುಮಾರ್ ಹಣ ಕೇಳಿದ್ದಾರೆ. ಆಗ ತೌಸು ಅವಾಚ್ಯವಾಗಿ ನಿಂದಿಸಿದ್ದು, ಆತನ ಜೊತೆಗಿದ್ದವನು ಕಬ್ಬಿಣದ ಚೇರ್ನಿಂದ ಹಲ್ಲೆ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ. ಘಟನೆ ಸಂಬಂಧ ದೊಡ್ಡಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ – ಕೊಡಚಾದ್ರಿ ಪ್ರವಾಸಿಗರಿಗೆ ಶಾಕ್ ನೀಡಿದ ವನ್ಯಜೀವಿ ವಿಭಾಗ, ಇವತ್ತಿನಿಂದ ಪ್ರವೇಶ ನಿಷೇಧ
ಶಂಕಿತರನ್ನು ಶಿವಮೊಗ್ಗ, ತೀರ್ಥಹಳ್ಳಿಗೆ ಕರೆತಂದ ಎನ್ಐಎ
SHIMOGA : ಮಂಗಳೂರು ಕುಕ್ಕರ್ ಬಾಂಬ್ ಸ್ಪೋಟ ಪ್ರಕರಣ ಸಂಬಂಧ
ಇದನ್ನೂ ಓದಿ – ಜಲಪಾತದ ಬಳಿ ಶರತ್ ಮೃತದೇಹ ಪತ್ತೆ, ಮನೆಗೆ ಬಂದ ಸಂಸದ ರಾಘವೇಂದ್ರಗೆ ಕುಟುಂಬದಿಂದ ‘ಒಂದು ಮನವಿʼ
ಅಪರಿಚಿತ ವಾಹನ ಡಿಕ್ಕಿ ವ್ಯಕ್ತಿ ಸಾವು
THIRTHAHALLI : ಅಪರಿಚಿತ ವಾಹನ ಡಿಕ್ಕಿಯಾಗಿ ಗಂಭೀರ