SHIVAMOGGA LIVE NEWS | 7 SEPTEMBER 2023
SHIMOGA : ಸ್ನೇಹಿತೆಯರನ್ನು ಮನೆಗೆ ಬಿಡಲು ತೆರಳಿದ್ದ ಖಾಸಗಿ ಸಂಸ್ಥೆ ಡ್ಯೂಟಿ ಮ್ಯಾನೇಜರ್ ಸಂಜಯ್ ಕುಮಾರ್ ಎಂಬುವವರ ಮೇಲೆ ವ್ಯಕ್ತಿಯೊಬ್ಬ ಹಲ್ಲೆ (ASSAULT) ಮಾಡಿದ್ದಾನೆ. ಗಾಂಧಿ ಬಜಾರ್ ಸಿನಿಮಾ ರಸ್ತೆಯಲ್ಲಿ ಘಟನೆ ಸಂಭವಿಸಿದೆ.
ಇದನ್ನೂ ಓದಿ – ಭದ್ರಾವತಿ ಗ್ರಾಮಾಂತರ ಠಾಣೆಯಲ್ಲಿ ತಮಿಳುನಾಡು ಮುಖ್ಯಮಂತ್ರಿ ಪುತ್ರನ ವಿರುದ್ಧ ದೂರು
ಸಂಜಯ್ ಕುಮಾರ್ ಅವರ ಸ್ನೇಹಿತೆಗೆ ಹುಷಾರಿಲ್ಲದ ಕಾರಣ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿ ಸೆ.5ರ ರಾತ್ರಿ ಬೈಕಿನಲ್ಲಿ ಮನೆಗೆ ಕರೆತಂದು ಬಿಟ್ಟಿದ್ದರು. ಈ ವೇಳೆ ವ್ಯಕ್ತಿಯೊಬ್ಬ ಸಂಜಯ್ ಕುಮಾರ್ಗೆ ‘ನಮ್ಮ ಏರಿಯಾಗೆ ಹುಡುಗಿಯರನ್ನು ಕರೆತಂದು ಮಾತನಾಡುತ್ತಿದ್ದೀಯʼ ಎಂದು ಪ್ರಶ್ನಿಸಿ ಹಲ್ಲೆ (ASSAULT) ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಗಾಯಗೊಂಡಿದ್ದ ಸಂಜಯ್ ಕುಮಾರ್ನನ್ನು ಸೇಹಿತೆಯರು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಹಲ್ಲೆ ಸಂಬಂಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.