ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 21 OCTOBER 2023
SHIMOGA : ಬೈಕ್ ಹಾರನ್ (Horn) ಮಾಡಿದ ವಿಚಾರಕ್ಕೆ ಮಾತಿಗೆ ಮಾತು ಬೆಳೆದು ವ್ಯಕ್ತಿಯೊಬ್ಬರ ಮೇಲೆ ಮಾರಕಾಸ್ತ್ರದಿಂದ ದಾಳಿ ನಡೆಸಲಾಗಿದೆ. ನವುಲೆ ಕೆರೆ ಬಳಿ ದಾಳಿಯಾಗಿದೆ. ಬೈಕಿನಲ್ಲಿ ಬಂದ ಅಪರಿಚಿತರು ಕೃತ್ಯ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ.
ಜಾಹೀರಾತು ಶಿವಮೊಗ್ಗದಲ್ಲಿ ಮನೆ ಸಾಲ ಮತ್ತು ಇತರೆ ಲೋನ್ಗಳನ್ನು ಪಡೆಯುವುದು ಈಗ ಸುಲಭ. ಕರೆ ಮಾಡಿ 9972194422
ಏನಿದು ಪ್ರಕರಣ?
ವೆಂಕಟಾಪುರದ ಬಸ್ ಚಾಲಕ ಮಂಜುನಾಥ್ ಹೊಟೇಲ್ನಲ್ಲಿ ಊಟ ಮುಗಿಸಿ ತಮ್ಮ ಚಿಕ್ಕಪ್ಪನ ಮಗನೊಂದಿಗೆ ರಾತ್ರಿ 10 ಗಂಟೆ ಹೊತ್ತಿಗೆ ಬೈಕಿನಲ್ಲಿ ಮನೆಗೆ ತರಳುತ್ತಿದ್ದರು. ಮಥುರಾ ಪ್ಯಾರಡೈಸ್ ಸಮೀಪ ಯಮಹಾ ಬೈಕ್ ಒಂದರಲ್ಲಿ ಇಬ್ಬರು ಯುವಕರು ಅಡ್ಡಾದಿಡ್ಡಿ ಬೈಕ್ ಚಲಾಯಿಸುತ್ತಿದ್ದರು. ಹಾಗಾಗಿ, ಮಂಜುನಾಥ್ ಅವರು ದಾರಿಗಾಗಿ ಬೈಕ್ ಹಾರನ್ ಮಾಡಿದ್ದಾರೆ. ಇದರಿಂದ ಆಕ್ರೋಶಗೊಂಡ ಯಮಹಾ ಬೈಕಿನಲ್ಲಿದ್ದ ಯುವಕರು ಮಂಜುನಾಥ್ ಮತ್ತು ಅವರ ಚಿಕ್ಕಪ್ಪನ ಮಗನನ್ನು ಮಹಾವೀರ ಸರ್ಕಲ್ನಲ್ಲಿ ಅಡ್ಡಗಟಿ ಅವಾಚ್ಯವಾಗಿ ನಿಂದಿಸಿದ್ದಾರೆ.
ಸವಳಂಗ ರಸ್ತೆಯಲ್ಲಿ ತೆರಳುತ್ತಿದ್ದಾಗ ಕಮಲಾ ನರ್ಸಿಂಗ್ ಹೋಂ ಸಮೀಪ ಪುನಃ ಅಡ್ಡಗಟ್ಟಿ ನಿಂದಿಸಿದ್ದಾರೆ. ನವುಲೆ ಕೆರೆ ಬಳಿ ಮಾರಕಾಸ್ತ್ರದಿಂದ ಮಂಜುನಾಥ್ ಅವರ ಮೇಲೆ ದಾಳಿ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಗಾಯಗೊಂಡಿದ್ದ ಮಂಜುನಾಥ್ ಅವರನ್ನು ಅವರ ಚಿಕ್ಕಪ್ಪನ ಮಗ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡೆಸಿದ್ದರು.
ಇದನ್ನೂ ಓದಿ – ಶಿವಮೊಗ್ಗದಲ್ಲಿ ಗೋಮಾಂಸ ಮಾರಾಟ ಆರೋಪ, ಮನೆ ಮೇಲೆ ಪೊಲೀಸ್ ದಾಳಿ
ಕೊಲೆ ಮಾಡುವ ಉದ್ದೇಶದಿಂದ ಮಾರಕಾಸ್ತ್ರದಿಂದ ದಾಳಿ ನಡೆಸಲಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಇಬ್ಬರು ಅಪರಿಚಿತ ಯುವಕರ ವಿರುದ್ಧ ವಿನೋಬನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಿವಮೊಗ್ಗ ಲೈವ್.ಕಾಂ