ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ | 25 ಸೆಪ್ಟೆಂಬರ್ 2019
![ಕಸ್ತೂರಬಾ ಕಾಲೇಜು ಬಳಿ ಯುವಕನ ಮೇಲೆ ಮಾರಕಾಸ್ತ್ರಗಳಿಂದ ದಾಳಿ, ಕಾರಣವೇನು ಗೊತ್ತಾ? 1 71053142 930302700664484 3871352906363961344 n.jpg? nc cat=109& nc oc=AQm43a lj8UotMIYvWYSDacXZlLoHNpQE1yctTqm6HxxFQyffmYpSuh Du5D1ZsHTXs& nc ht=scontent.fblr1 3](https://scontent.fblr1-3.fna.fbcdn.net/v/t1.0-9/71053142_930302700664484_3871352906363961344_n.jpg?_nc_cat=109&_nc_oc=AQm43a_lj8UotMIYvWYSDacXZlLoHNpQE1yctTqm6HxxFQyffmYpSuh_Du5D1ZsHTXs&_nc_ht=scontent.fblr1-3.fna&oh=a5f0e48676d0589af95d64efea3a0f09&oe=5E04B96B)
ಕಸ್ತೂರಬಾ ಕಾಲೇಜು ಮುಂಭಾಗ ಯುವಕನೊಬ್ಬನ ಮೇಲೆ ಮಾರಕಾಸ್ತ್ರಗಳಿಂದ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದಾರೆ. ಕೈ ಮತ್ತು ಬೆನ್ನಿಗೆ ಗಾಯವಾಗಿದ್ದು, ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಜಾಹೀರಾತು ಶಿವಮೊಗ್ಗದಲ್ಲಿ ಮನೆ ಸಾಲ ಮತ್ತು ಇತರೆ ಲೋನ್ಗಳನ್ನು ಪಡೆಯುವುದು ಈಗ ಸುಲಭ. ಕರೆ ಮಾಡಿ 9972194422
![ಕಸ್ತೂರಬಾ ಕಾಲೇಜು ಬಳಿ ಯುವಕನ ಮೇಲೆ ಮಾರಕಾಸ್ತ್ರಗಳಿಂದ ದಾಳಿ, ಕಾರಣವೇನು ಗೊತ್ತಾ? 2 Prashanth GPS copy](https://shivamoggalive.com/wp-content/uploads/2019/09/Prashanth-GPS-copy.jpg)
ಸುಮನ್ ಗಾಯಗೊಂಡಿರುವ ಯುವಕ. ಮಂಗಳವಾರ ರಾತ್ರಿ ಸುಮನ್ ಬೈಕ್’ನಲ್ಲಿ ತೆರಳುತ್ತಿದ್ದಾಗ, ಕಸ್ತೂರಬಾ ಕಾಲೇಜು ಬಳಿ ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ. ಎರಡು ಬೈಕ್’ನಲ್ಲಿ ಹಿಂದಿನಿಂದ ಬಂದು ಅಟ್ಯಾಕ್ ಮಾಡಲಾಗಿದೆ.
ಸುಮನ್ ಎಡಗೈಗೆ ಗಂಭೀರ ಗಾಯವಾಗಿದೆ. ಬೆನ್ನಿನ ಮೇಲು ತರಚಿದ ಗಾಯವಾಗಿದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಸುಮನ್, ‘ಹಿಂದೂ ಮಹಾಸಭಾ ಗಣಪತಿ ವಿಸರ್ಜನೆ ವೇಳೆ ಘೋಷಣೆ ಕೂಗಿಸಿದ್ದ ವಿಚಾರವಾಗಿ ಕೆಲವರು ದಾಳಿ ನಡೆಸಿದ್ದಾರೆ’ ಎಂದು ತಿಳಿಸಿದ್ದಾನೆ. ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ – 7411700200
ಸುದ್ದಿಗಾಗಿ ಕರೆ ಮಾಡಿ – 9964634494
ಈ ಮೇಲ್ ಐಡಿ | [email protected]
ಶಿವಮೊಗ್ಗ ಲೈವ್.ಕಾಂ
U are will be helping all shivamogga people’s