ಹೊಸಮನೆಯಲ್ಲಿ ವಿದ್ಯುತ್‌ ಕಂಬದ ಕಂಬಿಗಳಿಂದ ಅಪಾಯ | ಗುತ್ತಿಗೆ ಆಧಾರದಲ್ಲಿ ವೈದ್ಯರ ನೇಮಕಕ್ಕೆ ಸಂದರ್ಶನ – 1 MIN NEWS

151123-Electric-Pole-rod-in-Hosamane-road.webp

SHIVAMOGGA LIVE NEWS | 15 NOVEMBER 2023 ವಿದ್ಯುತ್‌ ಕಂಬದ ಸರಳುಗಳಿಂದ ಅಪಾಯ SHIMOGA : ಸ್ಮಾರ್ಟ್‌ ಸಿಟಿ ಯೋಜನೆ ಅಡಿ ಭೂಗತ ಕೇಬಲ್‌ ಅಳವಡಿಸಲಾಗಿದ್ದು ವಿವಿಧ ಬಡಾವಣೆಯಲ್ಲಿ ವಿದ್ಯುತ್‌ ಕಂಬಗಳನ್ನು ತೆರವು ಮಾಡಲಾಗಿದೆ. ಆದರೆ ಹೊಸಮನೆ 1ನೇ ಅಡ್ಡರಸ್ತೆಯ ಗಜಾನನ ಏಜನ್ಸಿ ಮುಂಭಾಗ ವಿದ್ಯುತ್‌ ಕಂಬ ತೆರವು ಮಾಡಲಾಗಿದೆ. ಆದರೆ ಕೆಳ ಭಾಗದಲ್ಲಿ ಕಬ್ಬಿಣದ ಸರಳು ಹಾಗೆ ಬಿಡಲಾಗಿದೆ. ಈ ಸಂಬಂಧ ಸ್ಥಳೀಯರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸಂಪೂರ್ಣವಾಗಿ ತೆರವು ಮಾಡಿಬೇಕು ಎಂದು ಆಗ್ರಹಿಸಿದ್ದಾರೆ. ಸಿಎಂ, ಸಚಿವರ … Read more

VIVOದಿಂದ 100X ಜೂಮ್‌ ಕ್ಯಾಮರಾ ಮೊಬೈಲ್‌, REALMEಯಿಂದ 1 ಟಿಬಿ ಸ್ಟೋರೇಜ್‌ನ ಫೋನ್‌

SMART-PHONE-NEWS.webp

SHIVAMOGGA LIVE NEWS | 15 NOVEMBER 2023 SMART PHONE NEWS | ತಂತ್ರಜ್ಞಾನ ಕ್ಷೇತ್ರದಲ್ಲಿ ಹೊಸ ಆವಿಷ್ಕಾರ, ವಿನೂತನ ಅಪ್‌ಡೇಟ್‌ಗಳ ಕುರಿತ ಸಂಕ್ಷಿಪ್ತ ಮಾಹಿತಿ ಇಲ್ಲಿ ಲಭ್ಯ. ಲಾಂಚ್‌ ಆಯ್ತು VIVO X100 ಸೀರಿಸ್‌ ಚೀನಾ ದೇಶದಲ್ಲಿ VIVO X100 ಮತ್ತು VIVO X100 PRO ಸ್ಮಾರ್ಟ್‌ ಫೋನ್‌ಗಳು ಲಾಂಚ್‌ ಆಗಿವೆ. ಈ ಸ್ಮಾರ್ಟ್‌ ಫೋನ್‌ಗಳು ಮೀಡಿಯಾ ಟೆಕ್‌ ಡೈಮೆನ್ಸಿಟಿ 9300 ಪ್ರೊಸೆಸರ್‌ ಹೊಂದಿವೆ. 100mm ಜೂಮ್‌ ಲೆನ್ಸ್‌ನ ಕ್ಯಾಮರಾ ಇದೆ. 4.3x ಆಪ್ಟಿಕಲ್‌ ಜೂಮ್‌ … Read more

ಭದ್ರಾವತಿಯಲ್ಲಿ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ ಡೆಂಗಿ, ಯಾವ್ಯಾವ ವರ್ಷ ಎಷ್ಟಿತ್ತು ಪ್ರಕರಣ?

151123-Mosquito-Dengue-cases-in-bhadravathi.webp

SHIVAMOGGA LIVE NEWS | 15 NOVEMBER 2023 BHADRAVATHI : ನಗರದಲ್ಲಿ ವರ್ಷದಿಂದ ವರ್ಷಕ್ಕೆ ಡೆಂಗಿ (Dengue) ಪ್ರಕರಣ ಹೆಚ್ಚಾಗುತ್ತಿದ್ದು ಜನರಲ್ಲಿ ಆತಂಕ ಮೂಡಿಸಿದೆ. ಈ ಮಧ್ಯೆ ನಗರಸಭೆ ವತಿಯಿಂದ ಜಾಗೃತಿ ಮೂಡಿಸಲಾಗುತ್ತಿದ್ದು, ಜನ ಎಚ್ಚೆತ್ತುಕೊಂಡರೆ ಡೆಂಗಿಯಿಂದ ಪರಾಗಬಹುದಾಗಿದೆ. ವರ್ಷದಿಂದ ವರ್ಷಕ್ಕೆ ಹೆಚ್ಚಳ ಭದ್ರಾವತಿಯಲ್ಲಿ ಈ ವರ್ಷ ಜನರಿಯಿಂದ ಅಕ್ಟೋಬರ್‌ ತಿಂಗಳ ಕೊನೆಯವರೆಗೆ 82 ಡೆಂಗಿ (Dengue) ಪ್ರಕರಣ ವರದಿಯಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 72 ಪ್ರಕರಣ ಇತ್ತು. 2021ರಲ್ಲಿ 78 ಡೆಂಗಿ ಪ್ರಕರಣಗಳು … Read more

ಕುತೂಹಲ ಕೆರಳಿಸಿದ Whatsapp Voice Chat, ಏನಿದು ಫೀಚರ್‌? ಇಲ್ಲಿದೆ 4 ಪ್ರಮುಖ ಪಾಯಿಂಟ್‌

whatsapp-feature-news-thumbnail.webp

SHIVAMOGGA LIVE NEWS | 15 NOVEMBER 2023 WHATSAPP | ವಿಭಿನ್ನ ಅಪ್‌ಡೇಟ್‌ ಮೂಲಕ ವಾಟ್ಸಪ್‌ ತನ್ನ ಬಳಕೆದಾರರಿಗೆ ಮತ್ತಷ್ಟು ಹತ್ತಿರವಾಗುತ್ತಿದೆ. ಈಗ ವಾಯ್ಸ್‌ ಚ್ಯಾಟ್‌ ಸಂಬಂಧ ಮಹತ್ವದ ಅಪ್‌ಡೇಟ್‌ ಬಿಡುಗಡೆ ಮಾಡಿದೆ. ಆಂಡ್ರಾಯ್ಡ್‌ ಮತ್ತು ಐಒಎಸ್‌ ಎರಡು ಬಗೆಯಲ್ಲು ಅಪ್‌ಡೇಟ್‌ ರಿಲೀಸ್‌ ಮಾಡಲಾಗಿದೆ. ವಾಯ್ಸ್‌ ಚ್ಯಾಟ್‌ ಅಪ್‌ಡೇಟ್‌ ಬಗ್ಗೆ ಬಳಕೆದಾರರು ಕೂಡ ಖುಷಿಯಾಗಿದ್ದಾರೆ. Voice Chat ಕುರಿತು ಇಲ್ಲಿದೆ 4 ಪ್ರಮುಖಾಂಶ ವಾಟ್ಸಪ್‌ನಲ್ಲಿ ಈವರೆಗೂ ಇದ್ದ ಗ್ರೂಪ್‌ ಕಾಲ್‌ ರೀತಿಯಲ್ಲೇ ಇರಲಿದೆ Voice Chat. ಆದರೆ … Read more

ಶಿವಮೊಗ್ಗದ ರೈಲಿನಲ್ಲಿ ಸಿಕ್ತು ಮೊಬೈಲ್‌ | ಸುರಭಿ ಕೇಂದ್ರಕ್ಕೆ ಅಪ್ರಾಪ್ತೆ ಶಿಫ್ಟ್‌ | ಖಾಲಿ ಹುದ್ದೆಗೆ ನೇರ ಸಂದರ್ಶನ – 1 MIN NEWS

11-AM-FATAFAT-NEWS.webp

SHIVAMOGGA LIVE NEWS | 15 NOVEMBER 2023 ರೈಲಿನಲ್ಲಿ ಸಿಕ್ಕ ಮೊಬೈಲ್‌ ವಾರಸುದಾರನ ಕೈಗೆ SHIMOGA : ರೈಲಿನಲ್ಲಿ ಸಿಕ್ಕ ಸ್ಮಾರ್ಟ್‌ ಫೋನ್‌ ಅನ್ನು ವಾರಸುದಾರರಿಗೆ ಹಿಂತಿರುಗಿಸಲಾಗಿದೆ. ಮೈಸೂರು ತಾಳಗುಪ್ಪ ರೈಲಿನಲ್ಲಿ ರೆಡ್‌ಮೀ ಮೊಬೈಲ್‌ ಪತ್ತೆಯಾಗಿತ್ತು. ರೈಲ್ವೆ ಪೊಲೀಸರು ವಾರಸುದಾರನನ್ನು ಪತ್ತೆ ಹಚ್ಚಿ ಮೊಬೈಲ್‌ ಹಿಂತಿರುಗಿಸಿದ್ದಾರೆ. ಶಿವಮೊಗ್ಗ ರೈಲ್ವೆ ನಿಲ್ದಾಣದಲ್ಲಿ ಆರ್‌ಪಿಎಫ್‌ ಪೊಲೀಸರು ಮೊಬೈಲ್‌ ಹಿಂತಿರುಗಿಸಿದ್ದಾರೆ. ರೈಲ್ವೆ ನಿಲ್ದಾಣದಲ್ಲಿ ಅಪ್ರಾಪ್ತೆ ರಕ್ಷಣೆ SHIMOGA : ರೈಲ್ವೆ ನಿಲ್ದಾಣದಲ್ಲಿ 15 ವರ್ಷದ ಬಾಲಕಿಯನ್ನು ರೈಲ್ವೆ ಪೊಲೀಸರು ರಕ್ಷಿಸಿದ್ದಾರೆ. ನಿಲ್ದಾಣದಲ್ಲಿ … Read more

ಚಿಕ್ಕಲ್‌ ಬಳಿ ಮಲ್ಲೇಶ್‌ ಕೊಲೆ, ಹೇಗಾಯ್ತು ಘಟನೆ? ಹತ್ಯೆಗೆ ಕಾರಣವೇನು?

Mallesh-incident-near-Guddekal-temple-Railway-Flyover.

SHIVAMOGGA LIVE NEWS | 15 NOVEMBER 2023 SHIMOGA : ಚಿಕ್ಕಲ್‌ನಲ್ಲಿ ಕಳೆದ ರಾತ್ರಿ ನಡೆದ ಹತ್ಯೆ ಪ್ರಕರಣದ ತನಿಖೆ ಬಿರುಸುಗೊಂಡಿದೆ. ವೈಯಕ್ತಿಕ ಕಾರಣಕ್ಕೆ ಮಲ್ಲೇಶ್‌ (35) ಎಂಬಾತನನ್ನು ಕೊಚ್ಚಿ ಕೊಲೆ ಮಾಡಲಾಗಿದೆ ಎಂದು ತಿಳಿದು ಬಂದಿದೆ. ಹೇಗಾಯ್ತು ಘಟನೆ? ಬೈಕ್‌ನಲ್ಲಿ ತೆರಳುತ್ತಿದ್ದ ಮಲ್ಲೇಶ್‌ ಮೇಲೆ ಮತ್ತೊಂದು ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು ದಾಳಿ ಮಾಡಿದ್ದಾರೆ. ಮಲ್ಲೇಶ್‌ ಕುತ್ತಿಗೆ ಮತ್ತು ಹೊಟ್ಟೆಗೆ ಬರ್ಬರವಾಗಿ ಇರಿದು ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ. ಘಟನೆಯಿಂದ ಸ್ಥಳದಲ್ಲಿ ಕೆಲಕಾಲ ಆತಂಕ ವಾತಾವರಣ ನಿರ್ಮಾಣವಾಗಿತ್ತು. … Read more

ಮುಳ್ಳು ಹಂದಿ ಬೇಟೆ, ಚರ್ಮ, ಮಾಂಸ ಸಹಿತ ಸಿಕ್ಕಿಬಿದ್ದ ನಾಲ್ವರು

141123-Forest-Officials-Raid-at-Sagara-Aralikoppa-village.webp

SHIVAMOGGA LIVE NEWS | 14 NOVEMBER 2023 SAGARA : ಮುಳ್ಳು ಹಂದಿ ಬೇಟೆಯಾಡಿ ಅದರ ಚರ್ಮ, ಮಾಂಸವನ್ನು ಬಳಕೆ ಮಾಡಿದ ಆರೋಪದ ಮೇರೆಗೆ ಅರಣ್ಯ ಇಲಾಖೆ ಸಿಬ್ಬಂದಿ ನಾಲ್ವರನ್ನು ಬಂಧಿಸಿದೆ. ತಾಲ್ಲೂಕಿನ ಕಲ್ಮನೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗದ್ದೆಮನೆ ಗ್ರಾಮದಲ್ಲಿ ಘಟನೆ ಸಂಭವಿಸಿದೆ. ಈಶ್ವರ, ರಾಘವೇಂದ್ರ, ಪ್ರಭಾಕರ್, ಶ್ರೀಧರ್ ಬಂಧಿತರು. ಆರೋಪಿಗಳ ಬಳಿ ಇದ್ದ ಮುಳ್ಳು ಹಂದಿ ಮಾಂಸ, ಚರ್ಮ ವಶಕ್ಕೆ ಪಡೆಯಲಾಗಿದೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ವಲಯ ಅರಣ್ಯಾಧಿಕಾರಿ ಪಿ. ಅರವಿಂದ್, ಅಶೋಕ್, … Read more

ಗಾಜನೂರಿನಲ್ಲಿ ಕಿಂಗ್‌ ಫಿಶರ್‌ ಬಿಯರ್‌ಗಾಗಿ ಮದ್ಯದಂಗಡಿ ಬಾಗಿಲು ಮುರಿದ ಕಳ್ಳರು

House-Theft-in-Shimoga.

SHIVAMOGGA LIVE NEWS | 14 NOVEMBER 2023 SHIMOGA : ಎಂಎಸ್‌ಐಎಲ್‌ ಮದ್ಯದ ಅಂಗಡಿಯ ಬಾಗಿಲು ಮುರಿದು ಕಿಂಗ್‌ ಫಿಶರ್‌ (Kingfisher) ಬಿಯರ್‌ ಟಿನ್‌ ಇರುವ ಬಾಕ್ಸ್‌ ಕಳ್ಳತನ ಮಾಡಲಾಗಿದೆ. ಶಿವಮೊಗ್ಗ ತಾಲೂಕು ಗಾಜನೂರಿನ ಮುಳ್ಳುಕೆರೆ ರಸ್ತೆಯಲ್ಲಿರುವ ವೀರಾಪುರದಲ್ಲಿ ಘಟನೆ ಸಂಭವಿಸಿದೆ. ವೆಂಕಟೇಶ್‌ ಅವರು ನ.9ರಂದು ರಾತ್ರಿ 10 ಗಂಟೆಗೆ ಎಂಎಸ್‌ಐಎಲ್‌ ಮದ್ಯದ ಅಂಗಡಿಯ ಬಾಗಿಲು ಹಾಕಿ ತೆರಳಿದ್ದರು. ಮರುದಿನ ಬೆಳಗ್ಗೆ ಅಂಗಡಿ ಬಳಿ ಬಂದಾಗ ರೋಲಿಂಗ್‌ ಶೆಟರ್‌ ಮುರಿದಿತ್ತು. ಪರಿಶೀಲಿಸಿದಾಗ 15 ಸಾವಿರ ರೂ. … Read more

ಕಾರ್ಮಿಕನ ಕಾಲಿನ 2 ಬೆರಳು ಕಟ್‌, 2 ಕೈ ಕತ್ತರಿಸಲು ಸಿದ್ಧವಾದ ಡಾಕ್ಟರ್‌, ಮೂವರ ವಿರುದ್ಧ ಕೇಸ್‌, ಏನಿದು ಪ್ರಕರಣ?

crime name image

SHIVAMOGGA LIVE NEWS | 14 NOVEMBER 2023 SHIMOGA : ಮನೆಯೊಂದರ ಪೇಂಟಿಂಗ್‌ ಕೆಲಸದ ವೇಳೆ ಕಾರ್ಮಿಕನಿಗೆ ವಿದ್ಯುತ್‌ ಶಾಕ್‌ (Shock) ತಗುಲಿದ್ದು ಗಂಭೀರ ಗಾಯಗೊಂಡಿದ್ದಾನೆ. ಆತನನ್ನು ಮಣಿಪಾಲದ ಆಸ್ಪತ್ರೆಗೆ ದಾಖಲಿಸಿದ್ದು ಕಾಲಿನ ಎರಡು ಬೆರಳು ಕತ್ತರಿಸಲಾಗಿದೆ. ಎರಡು ಕೈಗಳನ್ನು ಕೂಡ ಕತ್ತರಿಸಿ ತೆಗೆಯಬೇಕಾಗುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ ಎಂದು ದೂರಿನಲ್ಲಿ ಆಪಾದಿಸಲಾಗಿದೆ. ಏನಿದು ಪ್ರಕರಣ? ಅಶೋಕ ನಗರದ ಚೇತನ್‌ ಕುಮಾರ್‌ (30) ಎಂಬಾತನನ್ನು ಪೇಂಟಿಂಗ್‌ ಕೆಲಸಕ್ಕೆಂದು ಮೇಸ್ತ್ರಿಯೊಬ್ಬರು ಗುಡ್ಡದ ಅರಕೆರೆಗೆ ಕರೆದೊಯ್ದಿದ್ದರು. ಅಲ್ಯುಮೀನಿಯಂ ಸ್ಟಿಕ್‌ … Read more

ಅಬಕಾರಿ ಅಧಿಕಾರಿಗಳ ದಾಳಿ | ಈಡಿಗ ವಧು ವರರ ಅನ್ವೇಷಣ ಕೇಂದ್ರ | ದೆಹಲಿಗೆ ಗೌತಮಪುರ ವಿದ್ಯಾರ್ಥಿಗಳು

1-PM-FATAFAT-NEWS.webp

SHIVAMOGGA LIVE NEWS | 14 NOVEMBER 2023 ಸಾಗರದಲ್ಲಿ ಅಬಕಾರಿ ಅಧಿಕಾರಿಗಳ ದಾಳಿ, 3 ಅರೆಸ್ಟ್‌ SAGARA : ನಗರದ ಅಣಲೆಕೊಪ್ಪ, ಎಸ್.ಎನ್.ನಗರ, ವರದಹಳ್ಳಿ ರಸ್ತೆಯಲ್ಲಿ ದಾಳಿ ನಡೆಸಿದ ಅಬಕಾರಿ ಸಿಬ್ಬಂದಿ ಗಾಂಜಾ ಮಾರಾಟ ಮಾಡುತ್ತಿದ್ದ ಮೂವರನ್ನು ಬಂಧಿಸಿದ್ದಾರೆ. ಅವರಿಂದ 600 ಗ್ರಾಂ ಒಣ ಗಾಂಜಾ ವಶಕ್ಕೆ ಪಡೆಯಲಾಗಿದೆ. ಅಣಲೆಕೊಪ್ಪದ ರಾಘವೇಂದ್ರ, ಸೈಯದ್ ಇರ್ಫಾನ್, ಸೈಯದ್ ಅಸ್ಲಂ ಬಂಧಿತರು. ಮತ್ತೊಬ್ಬ ಆರೋಪಿ ಆರೀಫ್ ಪರಾರಿಯಾಗಿದ್ದಾನೆ. ಅಬಕಾರಿ ಇನ್ಸ್‌ಪೆಕ್ಟರ್‌ ಸಂದೀಪ್ ಎಲ್.ಸಿ, ಸಂತೋಷ್ ರಡ್ಡೇರ್, ಶಿವಪ್ರಸಾದ್, ವಾಸವಿ, ಸಿಬ್ಬಂದಿ … Read more