ಅನುಮಾನಾಸ್ಪದ ಬಾಕ್ಸ್‌, ರಾತ್ರಿ ಪೂರ್ತಿ ಸ್ಥಳದಲ್ಲೆ MLA ಮೊಕ್ಕಾಂ, ಕಾರ್ಯಾಚರಣೆ ಬಗ್ಗೆ ಹೇಳಿದ್ದೇನು?

061123-MLA-Channabasappa-visit-suspicious-box-spot-in-Shimoga-city.webp

SHIVAMOGGA LIVE NEWS | 6 NOVEMBER 2023 SHIMOGA : ಅನುಮಾನಾಸ್ಪದ ಬಾಕ್ಸ್‌ (BOX) ಪತ್ತೆಯಿಂದ ಹಿನ್ನೆಲೆ ಬಾಂಬ್‌ ನಿಷ್ಕ್ರಿಯ ದಳ ಇಡೀ ರಾತ್ರಿ ಕಾರ್ಯಾಚರಣೆ ನಡೆಸಿತು. ಕಾರ್ಯಾಚರಣೆ ಹಿನ್ನೆಲೆ ಶಾಸಕ ಎಸ್‌.ಎನ್‌.ಚನ್ನಬಸಪ್ಪ ಸ್ಥಳದಲ್ಲಿ ಬೀಡು ಬಿಟ್ಟಿದ್ದರು. ರಾತ್ರಿ ಕಾರ್ಯಾಚರಣೆ ಆರಂಭವಾದ ಹೊತ್ತಿಗೆ ಶಾಸಕ ಚನ್ನಬಸಪ್ಪ ಸ್ಥಳಕ್ಕೆ ಭೇಟಿ ನೀಡಿದರು. ಬೆಳಗಿನ ಜಾವ 4.30ರ ಹೊತ್ತಿಗೆ ಕಾರ್ಯಾಚರಣೆ ಅಂತ್ಯವಾಗುವವರೆಗೆ ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದರು. ಕಾರ್ಯಾಚರಣೆ ಸಂದರ್ಭ ಪೊಲೀಸ್‌ ಅಧಿಕಾರಿಗಳು, ಬಾಂಬ್‌ ನಿಷ್ಕ್ರಿಯ ದಳದ ಅಧಿಕಾರಿಗಳ ಜೊತೆಗೆ ಆಗಾಗ … Read more

ಶಿವಮೊಗ್ಗದಲ್ಲಿ ರಾತ್ರಿ ಸುರಿದ ಮಳೆಗೆ ವಾಲಿಕೊಂಡ ವಿದ್ಯುತ್ ಕಂಬ, ಸ್ಥಳೀಯರಲ್ಲಿ ಆತಂಕ

061123 Electric Pole bend during heavy rain in ravindra nagara

SHIVAMOGGA LIVE NEWS | 6 NOVEMBER 2023 SHIMOGA : ವಿದ್ಯುತ್‌ ಕಂಬವೊಂದು (Electric Pole) ಸಂಪೂರ್ಣ ವಾಲಿಕೊಂಡಿದ್ದು ರವೀಂದ್ರ ನಗರದಲ್ಲಿ ಆತಂಕ ಸೃಷ್ಟಿಸಿದೆ. ರವೀಂದ್ರ ನಗರ ಮೊದಲ ಕ್ರಾಸ್‌ನಲ್ಲಿ ವಿದ್ಯುತ್ ಕಂಬವೊಂದು ವಾಲಿಕೊಂಡಿದೆ. ನಿನ್ನೆ ರಾತ್ರಿ ಸುರಿದ ಭಾರಿ ಮಳೆಗೆ ಕಂಬ ವಾಲಿರುವ ಸಾಧ್ಯತೆ ಇದೆ. ಇದಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸುವ ಮಾರ್ಗದ ತಂತಿಗಳನ್ನು ಕತ್ತರಿಸಲಾಗಿದೆ. ಕಂಬ ಯಾವ ಸಮಯದಲ್ಲಾದರೂ ಬೀಳುವ ಸಾಧ್ಯತೆ ಇದ್ದು, ರವೀಂದ್ರನಗರ ನಿವಾಸಿಗಳನ್ನು ಭಯಕ್ಕೆ ದೂಡಿದೆ. ಇದನ್ನೂ ಓದಿ- ಅನುಮಾನಾಸ್ಪದ ಬಾಕ್ಸ್‌ ಕೇಸ್‌, … Read more

ಸಿಗಂದೂರು ದೇವಿಗೆ ಕನ್ನಡ ಧ್ವಜದ ಅಲಂಕಾರ, ನಾಡು, ನುಡಿಗಾಗಿ ವಿಶೇಷ ಪೂಜೆ

011123-Sigandur-Sri-Chowdeshwari-Kannada-flag-decoration-on-rajyotsava.webp

SHIVAMOGGA LIVE NEWS | 1 NOVEMBER 2023 SHIMOGA : ರಾಜ್ಯೋತ್ಸವದ ಹಿನ್ನೆಲೆ ಸಿಗಂದೂರು (Sigandur) ಶ್ರೀ ಚೌಡೇಶ್ವರಿ ದೇವಿಗೆ ನಾಡ ಧ್ವಜದ ಅಲಂಕಾರ ಮಾಡಲಾಗಿತ್ತು. ದೇಗುಲಕ್ಕೆ ಬಂದಿದ್ದ ಭಕ್ತರು ವಿಶೇಷ ಅಲಂಕಾರ ಕಣ್ತುಂಬಿಕೊಂಡು ಖುಷಿಪಟ್ಟರು. ವಿಶೇಷ ಅಲಂಕಾರ ನೆರವೇರಿಸಿ ಶ್ರೀ ಚೌಡೇಶ್ವರಿ ದೇವಿಗೆ ಪೂಜೆ ಸಲ್ಲಿಸಲಾಯಿತು. ಈ ಸಂದರ್ಭ ಪ್ರಧಾನ ಕಾರ್ಯದರ್ಶಿ ಹೆಚ್‌.ಆರ್.ರವಿಕುಮಾರ್‌, ವ್ಯವಸ್ಥಾಪಕ ಪ್ರಕಾಶ್‌ ಭಂಡಾರಿ, ದೇಗುಲದ ಸಿಬ್ಬಂದಿ ಮತ್ತು ಭಕ್ತರು ಇದ್ದರು. ಇದನ್ನೂ ಓದಿ- ಕರ್ನಾಟಕ ಸಂಘಕ್ಕೆ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಸಂಘ ಅಂದ್ರೆ … Read more

ಶಿವಮೊಗ್ಗ ತಂಡಕ್ಕೆ ಎರಡನೇ ಸ್ಥಾನ, ಅರಣ್ಯ ರಕ್ಷಕನಿಗೆ ಸನ್ಮಾನ, ಕುಂಸಿ ಮಲಾತೇಶ್‌ಗೆ ಪ್ರಥಮ ಸ್ಥಾನ

011123-shimoga-wins-second-place-in-government-employees-association-sports.webp

SHIVAMOGGA LIVE NEWS | 1 NOVEMBER 2023 SHIMOGA : ತುಮಕೂರಿನಲ್ಲಿ ನಡೆದ ಸರ್ಕಾರಿ ನೌಕರರ ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ (Sports) ಸಮಗ್ರ ಪ್ರಶಸ್ತಿಯಲ್ಲಿ ಶಿವಮೊಗ್ಗ ತಂಡ ದ್ವಿತೀಯ ಸ್ಥಾನ ಪಡೆದಿದೆ. ಸಮಗ್ರ ಪ್ರಶಸ್ತಿಯಲ್ಲಿ ಬೆಂಗಳೂರು ಪ್ರಥಮ, ಶಿವಮೊಗ್ಗ ದ್ವಿತೀಯ, ಹಾಸನ ತಂಡ ತೃತೀಯ ಸ್ಥಾನ ಪಡೆದಿದೆ. ಅರಣ್ಯ ರಕ್ಷಕನಿಗೆ ಅಭಿನಂದನೆ ಪವರ್‌ ಲಿಫ್ಟಿಂಗ್‌ನಲ್ಲಿ ಮೂರನೇ ಸ್ಥಾನ ಪಡೆದ ಉಂಬ್ಳೆಬೈಲು ಅರಣ್ಯ ವಲಯದ ಅರಣ್ಯ ರಕ್ಷಕ ಮಾಲತೇಶ್‌ ಸೂರ್ಯವಂಶಿ ಅವರಿಗೆ ಜಯ ಕರ್ನಾಟಕ ಸಂಘಟನೆ ವತಿಯಿಂದ ಸನ್ಮಾನಿಸಲಾಯಿತು. ಸಂಘಟನೆಯ … Read more

ಶಿವಮೊಗ್ಗದ ವಿವಿಧ ಗ್ರಾಮಗಳಲ್ಲಿ ಎರಡು ದಿನ ಕರೆಂಟ್‌ ಇರಲ್ಲ

power cut mescom ELECTRICITY

SHIVAMOGGA LIVE NEWS | 1 NOVEMBER 2023 SHIMOGA : ಮೆಸ್ಕಾಂ ಗ್ರಾಮೀಣ ಉಪವಿಭಾಗ ಮಾಚೇನಹಳ್ಳಿ 110/11 ಕೆವಿ ವಿದ್ಯುತ್ ವಿತರಣಾ ಕೇಂದ್ರದಿಂದ ಸರಬರಾಜಾರಾಗುವ ಮಾರ್ಗಗಳ ವ್ಯಾಪ್ತಿಯಲ್ಲಿ ನ.2 ಮತ್ತು 3ರಂದು ವಿದ್ಯುತ್‌ ವ್ಯತ್ಯಯವಾಗಲಿದೆ (Power cut) ಎಂದು ಮೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ. ಎಲ್ಲೆಲ್ಲಿ ವಿದ್ಯುತ್‌ ವ್ಯತ್ಯಯವಾಗುತ್ತೆ? ಬಿದರೆ, ನಿದಿಗೆ, ಓತಿಘಟ್ಟ, ಸಿದ್ದರಗುಡಿ, ಹಾರೇಕಟ್ಟೆ, ಸೋಗಾನೆ, ಆಚಾರಿ ಕ್ಯಾಂಪ್, ಹೊಸೂರು ರೆಡ್ಡಿ ಕ್ಯಾಂಪ್, ದುಮ್ಮಳ್ಳಿ, ಶುಗರ್ ಕಾಲೋನಿ ಹಾಗೂ ಸುತ್ತಮುತ್ತಲಿ ಗ್ರಾಮಗಳಲ್ಲಿ ಎರಡು ದಿನ ಮಧ್ಯಾಹ್ನ … Read more

ಶಿವಮೊಗ್ಗಕ್ಕೆ ಬಂದ ವಿಮಾನದಲ್ಲಿ ತಾಂತ್ರಿಕ ದೋಷ, ಪ್ರಯಾಣಿಕರಿಗೆ ಬೇಸರ

011123-indigo-flight-in-Shimoga-airport-hanger.webp

SHIVAMOGGA LIVE NEWS | 1 NOVEMBER 2023 SHIMOGA : ತಾಂತ್ರಿಕ ದೋಷದಿಂದಾಗಿ ಶಿವಮೊಗ್ಗ – ಬೆಂಗಳೂರಿಗೆ ವಿಮಾನ ಟೇಕಾಫ್‌ (Take off) ಆಗದೆ ಪ್ರಯಾಣಿಕರು ಪರದಾಡುವಂತಾಯಿತು. ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಆಗಮಿಸಿದ ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದೆ ಎಂದು ತಿಳಿದು ಬಂದಿದೆ. ಬೆಳಗ್ಗೆ 11.25ಕ್ಕೆ ಶಿವಮೊಗ್ಗ ವಿಮಾನ ನಿಲ್ದಾಣದಿಂದ ಬೆಂಗಳೂರಿಗೆ ವಿಮಾನ ಟೇಕ್‌ ಆಫ್‌ ಆಗಬೇಕಿತ್ತು. ಆದರೆ ತಾಂತ್ರಿಕ ದೋಷದಿಂದ ಹ್ಯಾಂಗರ್‌ ಜಾಗದಲ್ಲೇ ವಿಮಾನ ನಿಂತಿತ್ತು. ವಿಮಾನ ಹತ್ತಲು ಸಜ್ಜಾಗಿ ಬಂದಿದ್ದ ಸುಮಾರು 60 ಪ್ರಯಾಣಿಕರು … Read more

ಶ್ರದ್ಧಾ ಭಕ್ತಿಯಿಂದ ನೆರವೇರಿತು ಮೈಲಾರಲಿಂಗೇಶ್ವರ-ಮಾಲತೇಶ ಗಟ್‌ಪರವು

011123-Shikaripura-ghat-paravu-devotees-participated.webp

SHIVAMOGGA LIVE NEWS | 1 NOVEMBER 2023 SHIKARIPURA : ಮೈಲಾರಲಿಂಗೇಶ್ವರ, ಮಾಲತೇಶ ದೇವರ ಧಾರ್ಮಿಕ ಕಾರ್ಯಕ್ರಮ ಗಟ್‌ ಪರವು (paravu) ಶ್ರದ್ಧಾ ಭಕ್ತಿಯಿಂದ ನೆರವೇರಿತು. ದೊಡ್ಡ ಸಂಖ್ಯೆಯ ಭಕ್ತರು ಪರವುನಲ್ಲಿ ಭಾಗವಹಿಸಿದ್ದರು. ಶಿಕಾರಿಪುರದ ಮಾಸೂರು ರಸ್ತೆಯ ಶಿಬಾರಕಟ್ಟೆಯಲ್ಲಿ ಗಟ್‌ ಪರವು ನಡೆಯಿತು. ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲ್ಲೂಕಿನ ದೇವರಗುಡ್ಡ ಕ್ಷೇತ್ರದಲ್ಲಿ ನಡೆದ ಮಾಲತೇಶ ದೇವರ ಕಾರ್ಣಿಕೋತ್ಸವ ಅಂಗವಾಗಿ ಭಕ್ತರು ಹಾಗೂ ಗೊರವಯ್ಯನವರು ಗಟ್‌ಪರವು ನಡೆಸುವುದು ವಾಡಿಕೆ. ಗೊರವಯ್ಯ ಅವರು ಮತ್ತು ದೇವರು ಹೊತ್ತ ಮಹಿಳೆಯರ ನೇತೃತ್ವದಲ್ಲಿ … Read more

ಶಿವಮೊಗ್ಗದ ಕಿಮ್ಮನೆ ಗಾಲ್ಫ್‌ ಕ್ಲಬ್‌ನಲ್ಲಿ ರಾಜ್ಯಮಟ್ಟದ ಯುರಾಲಜಿ ತಜ್ಞರ ಸಮ್ಮೇಳನ

011123-Urology-doctors-conference-in-Shimoga.webp

SHIVAMOGGA LIVE NEWS | 1 NOVEMBER 2023 SHIMOGA : ರಾಜ್ಯ ಯುರೋಲಜಿ (Urology) ಅಸೋಸಿಯೇಶನ್ ಮತ್ತು ಶಿವಮೊಗ್ಗ ಯುರೋಲಜಿ ತಜ್ಞರ ಸಂಘದ ಸಹಯೋಗದಲ್ಲಿ ನ.3, 4 ಮತ್ತು 5ರಂದು ರಾಜ್ಯ ಮಟ್ಟದ 28ನೇ ವಾರ್ಷಿಕ ಯುರೋಲಜಿ ಸಮ್ಮೇಳನವನ್ನು ಕಿಮ್ಮನೆ ಗಾಲ್ಫ್ ರೆಸಾರ್ಟ್‌ನಲ್ಲಿ ಆಯೋಜಿಸಲಾಗಿದೆ ಎಂದು ಡಾ.ಧನ್ಯಕುಮಾರ್ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯಮಟ್ಟದ ಸಮ್ಮೇಳನವನ್ನು ಮಲೆನಾಡಿನಲ್ಲಿ ಆಯೋಜಿಸುತ್ತಿರುವುದು ಹೆಮ್ಮೆಯ ವಿಷಯ. 1996ರಲ್ಲಿ ಕರ್ನಾಟಕ ಯುರೋಲಜಿ (Urology) ಅಸೋಸಿಯೇಷನ್ ಪ್ರಾರಂಭವಾಗಿದ್ದು ಮತ್ತು ಮೊದಲ ಸಮ್ಮೇಳನ ನಡೆದಿದ್ದು ಶಿವಮೊಗ್ಗದಲ್ಲಿಯೆ … Read more

ಭದ್ರಾವತಿ ನಗರದ ವಿವಿಧೆಡೆ ಎರಡು ದಿನ ಕುಡಿಯುವ ನೀರು ಪೂರೈಕೆ ವ್ಯತ್ಯಯ

Drinking-Water-Tap

SHIVAMOGGA LIVE NEWS | 1 NOVEMBER 2023 BHADRAVATHI : ಶುದ್ದೀಕರಣ ಘಟಕದಲ್ಲಿ ಎರಡು ದಿನಗಳಿಂದ ಜಾಕ್ವೆಲ್‌ನ ಶುದ್ದೀಕರಣ ಮತ್ತು 120 ಎಚ್‌ ಪಿ ಸಾಮರ್ಥ್ಯದ ಜಿಎಸ್ಎಲ್‌ಆರ್ ಸಂಪಿನಲ್ಲಿ ಹೂಳು ತೆಗೆಯುವ ಕಾರ್ಯ ನಿರ್ವಹಿಸಲಾಗುತ್ತಿದೆ. ಆದ್ದರಿಂದ ನ.1 ಹಾಗೂ 2ರಂದು ಹಳೇನಗರ ವ್ಯಾಪ್ತಿಯಲ್ಲಿ ಕುಡಿಯುವ ನೀರು (Drinking Water) ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ನಗರಸಭೆ ಪೌರಾಯುಕ್ತ ಮನುಕುಮಾರ್ ತಿಳಿಸಿದ್ದಾರೆ. ಇದನ್ನೂ ಓದಿ- ಶಿವಮೊಗ್ಗದಲ್ಲಿ ಅಂಟಿಗೆ ಪಂಟಿಗೆ ಕಲಾ ಪ್ರದರ್ಶನ, ಮನೆ ಮನೆಗೆ ಕರೆಸಿಕೊಳ್ಳಲು ಇದೆ ಅವಕಾಶ

ಶಿವಮೊಗ್ಗದಲ್ಲಿ ಕನ್ನಡದ ಪುಸ್ತಕಗಳ ಮೇಲೆ ರಿಯಾಯಿತಿ, ರಾಜ್ಯೋತ್ಸವ ವಿಶೇಷ

011123-diana-book-house-shimoga.webp

SHIVAMOGGA LIVE NEWS | 1 NOVEMBER 2023 SHIMOGA : ನಗರದ ಡಯಾನ ಬುಕ್ ಗ್ಯಾಲರಿಯಲ್ಲಿ ಕರ್ನಾಟಕ ರಾಜ್ಯೋತ್ಸವ ಅಂಗವಾಗಿ ನ.1ರಿಂದ 30ರವರೆಗೆ ಕನ್ನಡ ಪುಸ್ತಕಗಳ ಮೇಲೆ ರಿಯಾಯಿತಿ (Discount) ನೀಡಲಾಗುತ್ತಿದೆ. 500 ರೂ. ಮೇಲ್ಪಟ್ಟ ಪುಸ್ತಕಗಳ ಖರೀದಿ ಮೇಲೆ ಶೇ.15, ಸಾವಿರ ರೂ. ಮೇಲ್ಪಟ್ಟ ಖರೀದಿಗೆ ಶೇ.25 ರಿಯಾಯಿತಿ ನೀಡಲಾಗುತ್ತಿದೆ. ಕುವೆಂಪು ಹಾಗೂ ಎಸ್.ಎಲ್.ಭೈರಪ್ಪ ಅವರ ಕೃತಿಗಳಿಗೆ ಶೇ.15ರಷ್ಟು ರಿಯಾಯಿತಿ ನೀಡಲಾಗುತ್ತಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಇದನ್ನೂ ಓದಿ- ಶಿವಮೊಗ್ಗದಲ್ಲಿ ಪುಸ್ತಕ ಪ್ರದರ್ಶನ, ನವೆಂಬರ್‌ ತಿಂಗಳು … Read more