ಶಿವಮೊಗ್ಗ ಲೈವ್.ಕಾಂ | SHIMOGA | 4 ಜನವರಿ 2020
11 ಕ್ಷೇತ್ರಕ್ಕೆ 30 ನಾಮಪತ್ರ, ಒಂದು ಸ್ಥಾನಕ್ಕೆ ಮೂರು ಸ್ಪರ್ಧಿಗಳು
ಹೊಸನಗರ : ನಗರದ ಪ್ರತಿಷ್ಠಿತ ಶ್ರೀ ನೀಲಕಂಠೇಶ್ವರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಜನವರಿ 11ರಂದು ಎಲೆಕ್ಷನ್ ನಡೆಯಲಿದೆ. ಸಾಲಗಾರರ ಕ್ಷೇತ್ರದ 11 ಸ್ಥಾನ ಮತ್ತು ಸಾಲಗಾರರಲ್ಲದ ಕ್ಷೇತ್ರದಿಂದ 1 ಸ್ಥಾನಕ್ಕೆ ಚುನಾವಣೆ ನಡೆಯಲಿದೆ. ನಾಮಪತ್ರ ಸಲ್ಲಿಸಲು ಜ.4 ಕೊನೆ ದಿನವಾಗಿತ್ತು. ಒಟ್ಟು 30 ನಾಮಪತ್ರ ಸಲ್ಲಿಕೆಯಾಗಿವೆ. ಸಾಲಗಾರರ ಕ್ಷೇತ್ರಕ್ಕೆ 27 ನಾಮಪತ್ರ ಸಲ್ಲಿಕೆಯಾಗಿದೆ. ಸಾಲಗಾರರಲ್ಲದ ಕ್ಷೇತ್ರಕ್ಕೆ ಮೂರು ನಾಮಪತ್ರಗಳು ಸಲ್ಲಿಕೆಯಾಗಿವೆ. ಚುನಾವಣೆಯಲ್ಲಿ ಬಿಜೆಪಿ ಏಕಾಂಗಿಯಾಗಿ ಸ್ಪರ್ಧಿಸಿದೆ. ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಂಡಿವೆ.
ರೈಲಿಗೆ ಸಿಲುಕಿ ಹಸು
ಶಿವಮೊಗ್ಗ : ರೈಲಿಗೆ ಸಿಲುಕಿ ಹಸುವೊಂದು ಮೃತಪಟ್ಟಿದೆ. ಶಿವಮೊಗ್ಗದ ಸೋಮಿನಕೊಪ್ಪ ಬಳಿ ರೈಲ್ವೆ ಟ್ರ್ಯಾಕ್ ಮೇಲೆ ಇವತ್ತು ಮಧ್ಯಾಹ್ನ ಘಟನೆ ನಡೆದಿದೆ. ರೈಲು ಬರುವ ವೇಳೆ ಟ್ರ್ಯಾಕ್ ಮೇಲೆ ಓಡಾಡುತ್ತಿದ್ದ ಹಸು ಮೃತಪಟ್ಟಿದೆ. ಎಂಜಿನ್’ಗೆ ಸಿಲುಕಿ ಹಸುವನ್ನು ರೈಲು ಒಂದಷ್ಟು ದೂರದವರೆಗೆ ಎಳೆದೊಯ್ದಿದೆ.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]