SHIVAMOGGA LIVE NEWS | 18 APRIL 2024
SORABA : ತಾಲೂಕಿನ ಆನವಟ್ಟಿಯ ಬಾನಿಕಟ್ಟೆ ಚೌಡಮ್ಮ ವೃತ್ತದ ಮುಂದಿನ ರಸ್ತೆ ವಿಭಜಕಕ್ಕೆ ಬೈಕ್ ಡಿಕ್ಕಿ ಹೊಡೆದಿದೆ. ಯುವಕ ಸಾವನ್ನಪ್ಪಿದ್ದು. ಇಬ್ಬರಿಗೆ ತೀವ್ರ ಗಾಯವಾಗಿದೆ. ಮಂಗಳವಾರ ರಾತ್ರಿ ಘಟನೆ ಸಂಭವಿಸಿದೆ. ಹಾನಗಲ್ ತಾಲ್ಲೂಕು ಹೊಸೂರು ಗ್ರಾಮದ ಕಾರ್ತಿಕ್ (19) ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಕಾರ್ತಿಕ್ ಹಾಗೂ ಶಕುನವಳ್ಳಿ ಗ್ರಾಮದ ಮಂಜಪ್ಪ ಅವರು ತೀವ್ರ ಗಾಯಗೊಂಡಿದ್ದಾರೆ. ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಆನವಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ – ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ಮಹಿಳೆಯ ಅರ್ಧ ಮಾಂಗಲ್ಯ ಸರ ಅಪಹರಣ, ಘಟನೆ ಸಂಭವಿಸಿದ್ದು ಹೇಗೆ?