ಶಿವಮೊಗ್ಗ ಲೈವ್.ಕಾಂ | SHIMOGA NEWS | 2 ಸೆಪ್ಟೆಂಬರ್ 2021
ಜಮೀನಿಗೆ ಹೋಗಿ ನೀರು ಹಾಯಿಸಿ ನಡುರಾತ್ರಿ ತಂದು ನಿಲ್ಲಿಸಿದ್ದ ಬೈಕ್ ಬೆಳಗಾಗುವುದರಲ್ಲಿ ನಾಪತ್ತೆಯಾಗಿದೆ. ಈ ಸಂಬಂಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆರ್.ಎಂ.ಎಲ್ ನಗರದ ಎರಡನೇ ಹಂತದ ಇಲಿಯಾಜ್ ಅಹಮದ್ ಅವರ ಹೋಂಡಾ ಆಕ್ಟೀವ್ ವಾಹನ ಕಳುವಾಗಿದೆ. ಪುರದಾಳು ರಸ್ತೆಯಲ್ಲಿ ಇಲಿಯಾಜ್ ಅಹಮದ್ ಅವರ ಜಮೀನಿದೆ. ಅಲ್ಲಿಗೆ ಹೋಗಿ ನೀರು ಹಾಯಿಸಿ ನಡುರಾತ್ರಿ 1 ಗಂಟೆಗೆ ಮನೆಗೆ ಬಂದು ನಿಲ್ಲಿಸಿದ್ದಾರೆ.
ಇಲಿಯಾಜ್ ಅಹಮದ್ ಅವರು ಬೆಳಗ್ಗೆದ್ದು ನೋಡಿದಾಗ ವಾಹನ ನಾಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ದೂರು ದಾಖಲು ಮಾಡಿದ್ದಾರೆ.
(ಶಿವಮೊಗ್ಗ ಲೈವ್.ಕಾಂ ನಮ್ಮೂರ ನ್ಯೂಸ್ ವಿಭಾಗ – ನಿಮ್ಮೂರ ನ್ಯೂಸ್ಗೆ ನೀವೇ ವರದಿಗಾರರು. ನಿಮ್ಮೂರ ಪ್ರಮುಖ ಘಟನೆಗಳನ್ನು ನೀವೇ ವರದಿ ಮಾಡಬಹುದು. ಫೋಟೊ, ವಿಡಿಯೋ ಸಹಿತ ವರದಿಯನ್ನು ವಾಟ್ಸಪ್ ಅಥವಾ ಈ ಮೇಲ್ ಮಾಡಬಹುದು)
ಶಿವಮೊಗ್ಗ ಲೈವ್ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್ನಲ್ಲಿ ಸುದ್ದಿಗಾಗಿ 7411700200