ಶಿವಮೊಗ್ಗ ಲೈವ್.ಕಾಂ | SHIMOGA NEWS | 19 ಅಕ್ಟೋಬರ್ 2021
ಮಧ್ಯಾಹ್ನ ಊಟ ಮುಗಿಸಿ ಮನೆಯಿಂದ ಹೊರ ಬರುವಷ್ಟರಲ್ಲಿ ಖದೀಮರು ಬೈಕ್ ಕಳ್ಳತನ ಮಾಡಿದ್ದಾರೆ. ವಿನೋಬನಗರದ ಸವಿ ಬೇಕರಿ ಬಳಿ ಘಟನೆ ಸಂಭವಿಸಿದೆ.
ಅಕ್ಷಯ್ ಶರ್ಮಾ ಎಂಬುವವರಿಗೆ ಸೇರಿದ ಹೋಂಡಾ ಆಕ್ಟೀವಾ ಮೊಪೆಡ್ ವಾಹನ ಕಳುವಾಗಿದೆ. ಅ.13ರಂದು ಮಧ್ಯಾಹ್ನ ಅಕ್ಷಯ್ ಶರ್ಮಾ ಅವರು ಕೆಲಸದಿಂದ ಮನೆಗೆ ಬಂದಿದ್ದಾರೆ. ಎಂದಿನಂತೆ ಮನೆ ಮುಂದೆ ಬೈಕ್ ನಿಲ್ಲಿಸಿದ್ದಾರೆ.
ಊಟ ಮುಗಿಸಿ ಹೊರಗೆ ಬಂದು ನೋಡುವಷ್ಟರಲ್ಲಿ ಬೈಕ್ ಕಣ್ಮರೆಯಾಗಿದೆ. ಎಲ್ಲೆಡೆ ಹುಡುಕಾಡಿದ ಅಕ್ಷಯ್ ಶರ್ಮಾ ಅವರು ಬಳಿಕ ವಿನೋಬನಗರ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.