SHIVAMOGGA LIVE | 2 AUGUST 2023
SHIMOGA : ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಶಿವಮೊಗ್ಗದ ಶೃತಿ ಮೋಟರ್ಸ್ ಮಾಲೀಕ (Businessman) ಡಿ.ಟಿ.ಪರಮೇಶ ನಿಧನರಾಗಿದ್ದಾರೆ. ಬೆಂಗಳೂರಿನಲ್ಲಿ ಇವತ್ತು ಬೆಳಗ್ಗೆ ಕೊನೆಯುಸಿರೆಳೆದಿದ್ದಾರೆ.
ಶಿವಮೊಗ್ಗದ ಶೃತಿ ಮೋಟರ್ಸ್ ಸೇರಿದಂತೆ ಹಲವು ಉದ್ಯಮಗಳನ್ನು (Businessman) ನಡೆಸುತ್ತಿದ್ದರು. ಅನಾರೋಗ್ಯದ ಕಾರಣ ಅವರು ಚಿಕಿತ್ಸೆ ಪಡೆಯುತ್ತಿದ್ದರು.
ಸಾಹಿತ್ಯ, ಸಾಂಸ್ಕೃತಿ ಚಟುವಟಿಕೆಗೆ ಪ್ರೋತ್ಸಾಹ ನೀಡುತ್ತ ಕ್ರಿಯಾಶೀಲವಾಗಿದ್ದರು. ಶೃತಿ ಮೋಟರ್ಸ್ ಸೇರಿದಂತೆ ಹಲವು ಉದ್ಯಮಗಳನ್ನು ನಡೆಸುತ್ತ ಸಾವಿರಾರು ಜನರಿಗೆ ಉದ್ಯೋಗ ನೀಡಿದ್ದರು. ಹಾಸನದಲ್ಲಿ ಅವರ ಅಂತ್ಯಕ್ರಿಯೆ ನಡೆಯಲಿದೆ. ಇಂದು ಸಂಜೆ ಅಂತಿಮ ದರ್ಶನಕ್ಕೆ ತೆರಳಲಿದ್ದೇವೆ.ಡಿ. ಮಂಜುನಾಥ್, ಜಿಲ್ಲಾಧ್ಯಕ್ಷ, ಕನ್ನಡ ಸಾಹಿತ್ಯ ಪರಿಷತ್
ಹಾಸನ ಜಿಲ್ಲೆ ಬೇಲೂರು ತಾಲೂಕಿನ ದೇವರಾಯಪಟ್ಣಣ ಗ್ರಾಮದಲ್ಲಿ ಅಂತ್ಯ ಸಂಸ್ಕಾರ ನೆರವೇರಲಿದೆ. ಪತ್ನಿ, ಪುತ್ರ, ಪುತ್ರಿಯನ್ನು ಅಗಲಿದ್ದಾರೆ. ಡಿ.ಟಿ.ಪರಮೇಶ ಅವರ ನಿಧನಕ್ಕೆ ಶೃತಿ ಮೋಟರ್ಸ್ ಸಂಸ್ಥೆಗೆ ಒಂದು ದಿನ ರಜೆ ಘೋಷಿಸಲಾಗಿದೆ.
ಇದನ್ನೂ ಓದಿ – ಶಿವಮೊಗ್ಗದಲ್ಲಿ ಹೆಲ್ಮೆಟ್ಗೆ ಡಿಮಾಂಡಪ್ಪೋ ಡಿಮಾಂಡ್, ನಾಲ್ಕೈದು ಪಟ್ಟು ಏರಿದ ಸೇಲ್ಸ್, ಯಾವ ಹೆಲ್ಮೆಟ್ಗೆ ಹೆಚ್ಚಿದೆ ಬೇಡಿಕೆ?