SHIVAMOGGA LIVE | 23 JUNE 2023
SHIRALAKOPPA : ಸಾಮಿಲ್ ಒಂದರ ಮೇಲೆ ದಾಳಿ ನಡೆಸಿದ ಪೊಲೀಸರು ಒಂಟೆಯನ್ನು (Camel) ವಶಪಡಿಸಿಕೊಂಡಿದ್ದಾರೆ. ಸಾಮಿಲ್ ಮಾಲೀಕನ ವಿರುದ್ಧ ಪ್ರಕರಣ ದಾಖಲಾಗಿದೆ.
ರೆಹಮಾನಿಯಾ ಸಾಮಿಲ್ನಲ್ಲಿ ಒಂಟೆಯನ್ನು (Camel) ಅನಧಿಕೃತವಾಗಿ ಬಂಧಿಸಿಡಲಾಗಿತ್ತು. ಶಿರಾಳಕೊಪ್ಪ ಪಿಎಸ್ಐ ಮಂಜುನಾಥ ಕುರಿ ಮತ್ತು ಸಿಬ್ಬಂದಿ ದಾಳಿ ನಡೆಸಿ ಒಂಟೆಯನ್ನು ವಶಕ್ಕೆ ಪಡೆದಿದ್ದಾರೆ. ಸಾಮಿಲ್ ಮಾಲೀಕ ಸೈಯದ್ ಬಿಲಾಲ್ ವಿರುದ್ಧ ಪ್ರಾಣಿ ಸಂರಕ್ಷಣಾ ಕಾಯ್ದೆ ಅಡಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ – ವೇಶ್ಯಾವಾಟಿಕೆ ಆರೋಪ, ಮನೆ ಮೇಲೆ ಪೊಲೀಸರ ದಾಳಿ, ಮೂವರು ಮಹಿಳೆಯರ ರಕ್ಷಣೆ, ಇಬ್ಬರು ಅರೆಸ್ಟ್
ಒಂಟೆಯನ್ನು ಅಕ್ರಮವಾಗಿ ಬಂಧಿಸಿಡಲಾಗಿದೆ ಎಂಬುದರ ಕುರಿತು ಗೋಜ್ಞಾನ ಫೌಂಡೇಶನ್ನ ಸಂಜಯ್ ಕುಲಕರ್ಣಿ ಎಂಬುವವರು ಈ ಮೇಲ್ ಮೂಲಕ ಜಿಲ್ಲಾ ರಕ್ಷಣಾಧಿಕಾರಿ ಅವರಿಗೆ ದೂರು ನೀಡಿದ್ದರು.
ಇದನ್ನೂ ಓದಿ – ವಿದ್ಯಾನಗರ ರೈಲ್ವೆ ಮೇಲ್ಸೇತುವೆ, ಹೇಗಾಗಿದೆ ಕೆಲಸ? ಮೇಲ್ಭಾಗದಲ್ಲಿ ಹೇಗೆ ಕಾಣುತ್ತೆ? ಇಲ್ಲಿದೆ ಸೇತುವೆಯ 8 ವಿಶೇಷತೆ