ಶಿವಮೊಗ್ಗ ಲೈವ್.ಕಾಂ | SHIMOGA CRIME NEWS | 14 ಜನವರಿ 2022
ನೈಟ್ ಕರ್ಫ್ಯೂ ಅದೇಶ ಉಲ್ಲಂಘಿಸಿ, ಪೊಲೀಸರ ಮೇಲೆ ಹಲ್ಲೆ ನಡೆಸಿದ ಆರೋಪ ಸಂಬಂಧ ಯುವಕನೊಬ್ಬನ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ.
ಶಶಿಕುಮಾರ್ (26) ಎಂಬಾತನ ವಿರುದ್ಧ ಕರ್ನಾಟಕ ಸಾಂಕ್ರಾಮಿಕ ಕಾಯಿಲೆ ಕಾಯ್ದೆ ಅಡಿ ಕೇಸ್ ದಾಖಲು ಮಾಡಲಾಗಿದೆ.
ಏನಿದು ಪ್ರಕರಣ?
ನೈಟ್ ಕರ್ಫ್ಯೂ ಹಿನ್ನೆಲೆ, ಪೊಲೀಸರು, ರಾತ್ರಿ 10 ಗಂಟೆ ಬಳಿಕ ಶಿವಮೊಗ್ಗದ ಸವಳಂಗ ರಸ್ತೆಯ ಫುಡ್ ಕೋರ್ಟ್ ಬಂದ್ ಮಾಡಿಸುತ್ತಿದ್ದರು. ಈ ಸಂದರ್ಭ ಫುಡ್ ಕೋರ್ಟ್’ನಲ್ಲಿದ್ದ ಶಶಿಕುಮಾರ್, ತಾನು ಊಟ ಮಾಡಬೇಕಿದ್ದು, ಹೊಟೇಲ್’ಗಳನ್ನು ಯಾಕೆ ಬಂದ್ ಮಾಡಿಸುತ್ತಿದ್ದೀರ ಎಂದು ಪ್ರಶ್ನಿಸಿದ್ದಾನೆ. ಅಲ್ಲದೆ ಇಬ್ಬರು ಕಾನ್ಸ್’ಟೇಬಲ್’ಗಳ ಮೇಲೆ ಹಲ್ಲೆ ಮಾಡಿ, ಯುನಿಫಾರಂ ಹರಿದಿದ್ದಾನೆ ಎಂದು ಆರೋಪಿಸಲಾಗಿದೆ.
ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಪಿಎಸ್ಐ ಸತೀಶ್ ನಾಯ್ಕ್ ಅವರು, ಶಶಿಕುಮಾರನನ್ನು ವಶಕ್ಕೆ ಪಡೆದಿದ್ದಾರೆ. ಆತನ ವಿರುದ್ದ ಕರ್ನಾಟಕ ಸಾಂಕ್ರಾಮಿಕ ಕಾಯಿಲೆ ಕಾಯ್ದೆ ಅಡಿ ಪ್ರಕರಣ ದಾಖಲು ಮಾಡಿದ್ದಾರೆ.
ದೊಡ್ಡಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.