ಕಸದ ವಿಚಾರ, ಕೈ ಕೈ ಮಿಲಾಯಿಸಿದ ಅಕ್ಕಪಕ್ಕದ ಮನೆಯವರು

crime name image

ಇದನ್ನೂ ಓದಿ » ಶಿವಮೊಗ್ಗ | ಮಳೆಗೆ ಕೊಚ್ಚಿ ಹೋದ ಹಳಿ ಕೆಳಗಿನ ಜೆಲ್ಲಿ, ರೈಲುಗಳ ಸಂಚಾರ ವಿಳಂಬ ಇದನ್ನೂ ಓದಿ » ಶಿವಮೊಗ್ಗ | ಬೈಕ್‌ನಲ್ಲಿ ಹಳ್ಳ ದಾಟುತ್ತಿದ್ದಾಗ ಕೊಚ್ಚಿ ಹೋದ ವ್ಯಕ್ತಿ ಇದನ್ನೂ ಓದಿ » ಬಾವಿಗೆ ಬಿದ್ದು ತಳದಲ್ಲಿ ಗಿಡಗಳನ್ನು ಹಿಡಿದು ಕುಳಿತಿದ್ದ ಮಹಿಳೆ ಇದನ್ನೂ ಓದಿ » ಕೊಚ್ಚಿ ಹೋದ ವ್ಯಕ್ತಿಯ ಶೋಧ ಕಾರ್ಯ ಸ್ಥಗಿತ, ಸ್ಥಳಕ್ಕೆ ಸಂಸದ ಭೇಟಿ

ಬಾವಿಗೆ ಬಿದ್ದು ತಳದಲ್ಲಿ ಗಿಡಗಳನ್ನು ಹಿಡಿದು ಕುಳಿತಿದ್ದ ಮಹಿಳೆ

kudumallige-woman-safe-from-well.

THIRTHAHALLI NEWS, 9 OCTOBER 2024 : ಕುಡಿಯುವ ನೀರಿನ ತೆರೆದ ಬಾವಿಗೆ (well) ಬಿದ್ದಿದ್ದ 58 ವರ್ಷದ ಮಹಿಳೆಯನ್ನು ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಿಸಿದ್ದಾರೆ. ತಾಲೂಕಿನ ಕುಡುಮಲ್ಲಿಗೆಯ ಇಂದಿರಾನಗರದ ಚೌಡಿಕಟ್ಟೆ ಸಮೀಪದ ಗುಲಾಬಿ ಪೂಜಾರ್ತಿ ಬಾವಿಗೆ ಬಿದ್ದವರು. ಸೋಮವಾರ ಮಧ್ಯಾಹ್ನ ಆಕಸ್ಮಿಕವಾಗಿ ಬಿದ್ದಿದ್ದ ಮಹಿಳೆ ಸುಮಾರು ಐದು ಗಂಟೆ ಬಾವಿಯ ತಳದಲ್ಲಿದ್ದ ಬೇರುಗಳನ್ನು ಹಿಡಿದು ಕುಳಿತಿದ್ದರು. ಸುದ್ದಿ ತಿಳಿದ ಗ್ರಾಮಸ್ಥರು ಅಗ್ನಿಶಾಮಕ ದಳಕ್ಕೆ ಕರೆ ಮಾಡಿದ್ದಾರೆ. ಸಿಬ್ಬಂದಿ ಸುರಕ್ಷಿತವಾಗಿ ಮಹಿಳೆಯನ್ನು ಮೇಲಕ್ಕೆತ್ತಿದರು. ಶಶಿಕುಮಾ‌ರ್, ಸಂತೋಷ್‌ಕುಮಾ‌ರ್ ಶೆಟ್ಟಿ, … Read more

ಆಯನೂರು | ಶಾರ್ಟ್‌ ಸರ್ಕ್ಯೂಟ್‌ಗೆ ಲಕ್ಷ ಲಕ್ಷದ ವಸ್ತುಗಳು ಆಹುತಿ

Hardware-shop-in-ayanuru-main-road

AYANURU NEWS, 9 OCTOBER 2024 : ಶಾರ್ಟ್ ಸರ್ಕ್ಯೂಟ್‌ನಿಂದ ಹಾರ್ಡ್‌ವೇರ್ ಅಂಗಡಿಗೆ (shop) ಬೆಂಕಿ ತಗುಲಿ ನಗದು ಹಾಗೂ ಲಕ್ಷಾಂತರ ರೂಪಾಯಿ ಮೌಲ್ಯದ ಸಾಮಗ್ರಿಗಳು ಆಹುತಿಯಾದ ಘಟನೆ ಆಯನೂರಿನಲ್ಲಿ ನಡೆದಿದೆ.  ಆರ್.ವಿ.ಟ್ರೇಡರ್ಸ್ ಕಬ್ಬಿಣ ಹಾಗೂ ಸಿಮೆಂಟ್ ಅಂಗಡಿಯಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡು ಸಾಮಗ್ರಿಗಳು ಸುಟ್ಟು ಕರಕಲಾಗಿವೆ. ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದರು. ಶಾರ್ಟ್‌ ಸರ್ಕಿಟ್‌ನಿಂದ ಘಟನೆ ಸಂಭವಿಸಿರಬಹುದು ಎಂದು ಶಂಕಿಸಲಾಗಿದೆ. ಬೆಂಕಿ ಹೊತ್ತಿದ ಕೆಲವೇ ನಿಮಿಷದಲ್ಲಿ ವ್ಯಾಪಕವಾಗಿ ಹರಡಿದೆ. ಲಕ್ಷಾಂತರ ಮೌಲ್ಯದ ವಸ್ತುಗಳು ಸುಟ್ಟು ಹೋಗಿವೆ. … Read more

ಮೆಗ್ಗಾನ್‌ ಆಸ್ಪತ್ರೆ ಆವರಣದಲ್ಲಿ ಲಾಂಗು, ಚಾಕು ಪ್ರದರ್ಶನ

Mc-Gann-Hospital-Shimoga

SHIMOGA NEWS, 9 OCTOBER 2024 : ಮೆಗ್ಗಾನ್‌ ಆಸ್ಪತ್ರೆ (Mc Gann Hospital) ಆವರಣದಲ್ಲಿ ಲಾಂಗ್‌ ಮತ್ತು ಚಾಕು ತೋರಿಸಿ ಸಾರ್ವಜನಿಕರಲ್ಲಿ ಆತಂಕ ಮೂಡಿಸಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಮೊಹಮ್ಮದ್‌ ಗೌಸ್‌ ಮತ್ತು ಅಯಾನ್‌ ಬಂಧಿತರು. ಮಧ್ಯಾಹ್ನದ ಹೊತ್ತಿಗೆ ಮೆಗ್ಗಾನ್‌ ಆಸ್ಪತ್ರೆಯ ಪಾರ್ಕಿಂಗ್‌ ಸ್ಥಳದಲ್ಲಿ ಇಬ್ಬರು ಮಾರಕಾಸ್ತ್ರ ಪ್ರದರ್ಶಿಸಿ ಜನರಲ್ಲಿ ಆತಂಕ ಮೂಡಿಸಿದ್ದರು ಎಂದು ಆರೋಪಿಸಲಾಗಿದೆ. ಈ ಕುರಿತು ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸರು ದಾಳಿ ನಡೆಸಿ ಮಾರಕಾಸ್ತ್ರ ಸಹಿತ ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ. ದೊಡ್ಡಪೇಟೆ ಠಾಣೆಯಲ್ಲಿ … Read more

ಜನಶತಾಬ್ದಿ ರೈಲು ಹತ್ತುವ ಆತುರ, ಜಾರಿ ಬಿದ್ದು ತಿರುಚಿತು ವ್ಯಕ್ತಿಯ ಕಾಲು

Shimoga railway station incident

SHIMOGA NEWS, 8 OCTOBER 2024 : ರೈಲು (Train) ಹತ್ತುವ ಆತುರದಲ್ಲಿ ವ್ಯಕ್ತಿಯೊಬ್ಬರು ಪ್ಲಾಟ್‌ಫಾರಂನಲ್ಲಿ ಜಾರಿ ಬಿದ್ದು ಕಾಲು ತಿರುಚಿದೆ. ರೈಲ್ವೆ ಪೊಲೀಸರು ಕೂಡಲೆ ಅವರನ್ನು ಮೆಗ್ಗಾನ್‌ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಶಿಕಾರಿಪುರದ ಫಯಾಜ್‌ ಖಾನ್‌ ಎಂಬುವವರು ಜನಶತಾಬ್ದಿ ರೈಲು ಹತ್ತಲು ಬಂದಾಗ ಘಟನೆ ಸಂಭವಿಸಿದೆ. ಫಯಾಜ್‌ ಖಾನ್‌ ಅವರು ನಿಲ್ದಾಣಕ್ಕೆ ಬಂದಾಗ ರೈಲು ಪ್ಲಾಟ್‌ಫಾರಂ 2ರಿಂದ ಹೊರಟಿತ್ತು. ಆತರುವಾಗಿ ಪ್ಲಾಟ್‌ಫಾರಂ ಹೊರಡಲು ಯತ್ನಿಸಿದಾಗ ಫಯಾಜ್‌ ಖಾನ್‌ ಅವರು ಜಾರಿ ಬಿದ್ದು ಕಾಲು ತಿರುಚಿತ್ತು. ಸ್ಥಳದಲ್ಲಿದ್ದ … Read more

ಫೋನ್‌ ಪೇ ಮಾಡುವಾಗ ಶಿವಮೊಗ್ಗದ ಆಕೌಂಟೆಂಟ್‌ಗೆ ಕಾದಿತ್ತು ಶಾಕ್

crime name image

SHIMOGA NEWS, 8 OCTOBER 2024 : ವ್ಯಕ್ತಿಯೊಬ್ಬರ ಪ್ಯಾನ್‌ ನಂಬರ್‌ (Pan Number) ದುರ್ಬಳಕೆ ಮಾಡಿಕೊಂಡು, 7 ನಕಲಿ ಕಂಪನಿಗಳನ್ನು ಸ್ಥಾಪಿಸಿ, ಸರ್ಕಾರಕ್ಕೆ ಜಿ.ಎಸ್‌.ಟಿ ವಂಚಿಸಲಾಗಿದೆ. ಬ್ಯಾಂಕ್‌ ಖಾತೆ ಫ್ರೀಜ್‌ ಮಾಡಿದ್ದ ಹಿನ್ನೆಲೆ ವಿಚಾರಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಬ್ಯಾಂಕ್‌ಗೆ ಹೋದಾಗ ಕಾದಿತ್ತು ಶಾಕ್‌ ಶಿವಮೊಗ್ಗದ ಅಕೌಂಟೆಂಟ್‌ ಒಬ್ಬರು (ಹೆಸರು ಗೌಪ್ಯ) ಸ್ನೇಹಿತರೊಬ್ಬರಿಗೆ ಫೋನ್‌ ಪೇ ಮೂಲಕ ಹಣ ವರ್ಗಾವಣೆ ಮಾಡಲು ಯತ್ನಿಸಿದಾಗ ಬ್ಯಾಂಕ್‌ ಖಾತೆ ಫ್ರೀಜ್‌ ಆಗಿರುವ ವಿಚಾರ ಗೊತ್ತಾಗಿದೆ. ಕೂಡಲೆ ಬ್ಯಾಂಕ್‌ಗೆ ತೆರಳಿ … Read more

ಶಿವಮೊಗ್ಗದಲ್ಲಿ ಕೊಠಡಿಯೊಳಗೆ ಗಂಡ, ಹೆಂಡತಿ Digital Arrest, ಏನಿದು?

Online-Fraud-Case-image

SHIMOGA NEWS, 8 OCTOBER 2024 : ದೇಶದಲ್ಲಿ ಡಿಜಿಟಲ್‌ ಅರೆಸ್ಟ್‌ (Digital Arrest) ವಂಚನೆ ಪ್ರಕರಣ ಹೆಚ್ಚುತ್ತಿವೆ. ಕೇಂದ್ರ ಗೃಹ ಸಚಿವಾಲಯದ ವ್ಯಾಪ್ತಿಯ ಭಾರತೀಯ ಸೈಬರ್‌ ಅಪರಾಧ ಸಮನ್ವಯ ಕೇಂದ್ರ (ಐ4ಸಿ) ಎಚ್ಚರ ವಹಿಸುವಂತೆ ಜನರಿಗೆ ತಿಳಿಸಿದೆ. ಈ ಮಧ್ಯೆ ಕಳೆದ ತಿಂಗಳು ಶಿವಮೊಗ್ಗದಲ್ಲಿ ದಂಪತಿಯ ಡಿಜಿಟಲ್‌ ಅರೆಸ್ಟ್‌ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಈ ಸಂಬಂಧ ಪ್ರಕರಣ ದಾಖಲಾಗಿದೆ. ಏನಿದು ಡಿಜಿಟಲ್‌ ಅರೆಸ್ಟ್? ಪೊಲೀಸ್‌, ಸಿಬಿಐ, ಇ.ಡಿ, ಕಸ್ಟಮ್ಸ್‌ ಅಧಿಕಾರಿಗಳು, ನ್ಯಾಯಾಧೀಶರು ಎಂದು ವಾಟ್ಸಪ್‌, … Read more

VISLನಲ್ಲಿ ಕೆಜಿಗಟ್ಟಲೆ ತಾಮ್ರ ಕದ್ದವರು ಅರೆಸ್ಟ್‌, ಯಾರದು ಬಂಧಿತರು?

110823 VISL Factory Bhadravathi

BHADRAVATHI NEWS, 8 OCTOBER 2024 : ವಿಐಎಸ್‌ಎಲ್‌ ಕಾರ್ಖಾನೆಯಲ್ಲಿ ತಾಮ್ರದ ತಂತಿ (COPPER WIRE) ಕಳ್ಳತನ ಮಾಡಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಒಂದು ಬೈಕ್‌, ಆಟೋ ಮತ್ತು ತಾಮ್ರದ ತಂತಿಯನ್ನು ವಶಕ್ಕೆ ಪಡೆಯಲಾಗಿದೆ. ಕಾರ್ಖಾನೆಯ ಸೆಂಟ್ರಲ್‌ ಎಲೆಕ್ಟ್ರಿಕ್‌ ವರ್ಕ್‌ ಶಾಪ್‌ ರಿಪೇರಿಗೆ ತರಿಸಲಾಗಿದ್ದ ವೆಲ್ಡಿಂಗ್‌ ಮೆಷಿನ್‌ನಲ್ಲಿದ್ದ 50 ಕೆ.ಜಿ ತೂಕದ ತಾಮ್ರದ ತಂತಿ ಕಳುವಾಗಿತ್ತು. ಈ ಸಂಬಂಧ ವಿಐಎಸ್‌ಎಲ್‌ ಕಾರ್ಖಾನೆಯ ಭದ್ರತಾ ಸಿಬ್ಬಂದಿ ನೀಡಿದ್ದ ದೂರಿನ ಮೇರೆಗೆ ಪೊಲೀಸರು ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. … Read more

ರಾತ್ರೋರಾತ್ರಿ ಶಿವಮೊಗ್ಗದಲ್ಲಿ ಆರು ಕತ್ತೆಗಳ ಕಳ್ಳತನ

Crime-News-General-Image

SHIMOGA NEWS, 8 OCTOBER 2024 : ತೋಟದಲ್ಲಿ ಕಟ್ಟಿದ್ದ ಆರು ಕತ್ತೆಗಳು (Donkeys) ಕಳ್ಳತನವಾಗಿವೆ. ಮಾಲೀಕರು ಬೆಳಗ್ಗೆ ತೋಟಕ್ಕೆ ತೆರಳಿದಾಗ ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ. ಆರು ಕತ್ತೆಗಳು ನಾಪತ್ತೆ ಮಿಳಘಟ್ಟದ ನಾಗರತ್ನ ಎಂಬುವವರು ಕತ್ತೆ ಸಾಕಾಣಿಕೆ ಮಾಡುತ್ತಿದ್ದಾರೆ. ತಮ್ಮ ಬಳಿ ಇದ್ದ ಆರು ಕತ್ತೆಗಳನ್ನು ಸಂತೆ ಕಡೂರಿನ ತೋಟವೊಂದರಲ್ಲಿ ಕಟ್ಟುತ್ತಿದ್ದರು. ಸೆ.27ರಂದು ರಾತ್ರಿ ತೋಟದಲ್ಲಿ ಕತ್ತೆಗಳನ್ನು ಕಟ್ಟಿ ಹಾಕಿ ಹೋಗಿದ್ದರು. ಮರುದಿನ ಬೆಳಗ್ಗೆ ತೋಟಕ್ಕೆ ಬಂದಾಗ ಕತ್ತೆಗಳು ನಾಪತ್ತೆಯಾಗಿದ್ದವು.  ಇಬ್ಬರ ಮೇಲೆ ಅನುಮಾನ ಶಿವಮೊಗ್ಗದ ಇಬ್ಬರು … Read more

BREAKING NEWS | ರೌಡಿ ಶೀಟರ್ ಕಾಲಿಗೆ ಗುಂಡು ಹಾರಿಸಿದ ಪೊಲೀಸ್

SHIMOGA-BREAKING-NEWS.jpg

SHIMOGA NEWS, 7 OCTOBER 2024 : ಬಂಧಿಸಲು ತೆರಳಿದ್ದ ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ ರೌಡಿ ಶೀಟರ್ (Rowdy) ಒಬ್ಬನ ಕಾಲಿಗೆ ಪೊಲೀಸರು ಗುಂಡು ಹಾರಿಸಿದ್ದಾರೆ. ಗಾಯಾಳು ರೌಡಿ ಶೀಟರ್ ಹಬೀಬುಲ್ಲಾ ಅಲಿಯಾಸ್ ಅಮ್ಮುನನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.  ಬೈಪಾಸ್ ರಸ್ತೆ ಸಮೀಪದ ಗರುಡ ಲೇಔಟ್‌ನಲ್ಲಿ ಇಂದು ಬೆಳಗ್ಗೆ ಹಬೀಬುಲ್ಲಾನ ಬಂಧನಕ್ಕೆ ಪೊಲೀಸರು ತೆರಳಿದ್ದರು. ಈ ಸಂದರ್ಭ ಹಬೀಬುಲ್ಲಾ ಪೊಲೀಸ್ ಸಿಬ್ಬಂದಿ ಜಯಪ್ಪ ಎಂಬುವವರ ಮೇಲೆ ಹಲ್ಲೆ ನಡೆಸಿದ್ದಾನೆ. ಆಗ ಇನ್ಸ್‌ಪೆಕ್ಟರ್ … Read more