ಬಾವಿಗೆ ಬಿದ್ದು ತಳದಲ್ಲಿ ಗಿಡಗಳನ್ನು ಹಿಡಿದು ಕುಳಿತಿದ್ದ ಮಹಿಳೆ

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

THIRTHAHALLI NEWS, 9 OCTOBER 2024 : ಕುಡಿಯುವ ನೀರಿನ ತೆರೆದ ಬಾವಿಗೆ (well) ಬಿದ್ದಿದ್ದ 58 ವರ್ಷದ ಮಹಿಳೆಯನ್ನು ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಿಸಿದ್ದಾರೆ. ತಾಲೂಕಿನ ಕುಡುಮಲ್ಲಿಗೆಯ ಇಂದಿರಾನಗರದ ಚೌಡಿಕಟ್ಟೆ ಸಮೀಪದ ಗುಲಾಬಿ ಪೂಜಾರ್ತಿ ಬಾವಿಗೆ ಬಿದ್ದವರು.

ಸೋಮವಾರ ಮಧ್ಯಾಹ್ನ ಆಕಸ್ಮಿಕವಾಗಿ ಬಿದ್ದಿದ್ದ ಮಹಿಳೆ ಸುಮಾರು ಐದು ಗಂಟೆ ಬಾವಿಯ ತಳದಲ್ಲಿದ್ದ ಬೇರುಗಳನ್ನು ಹಿಡಿದು ಕುಳಿತಿದ್ದರು. ಸುದ್ದಿ ತಿಳಿದ ಗ್ರಾಮಸ್ಥರು ಅಗ್ನಿಶಾಮಕ ದಳಕ್ಕೆ ಕರೆ ಮಾಡಿದ್ದಾರೆ. ಸಿಬ್ಬಂದಿ ಸುರಕ್ಷಿತವಾಗಿ ಮಹಿಳೆಯನ್ನು ಮೇಲಕ್ಕೆತ್ತಿದರು.

ಶಶಿಕುಮಾ‌ರ್, ಸಂತೋಷ್‌ಕುಮಾ‌ರ್ ಶೆಟ್ಟಿ, ಪ್ರಶಾಂತ್‌ಕುಮಾರ್, ಶರತ್, ನಿಗಪ್ಪ ಇಟ್ಟಣ್ಣವ‌ರ್ ಭಾಗಿಯಾಗಿದ್ದರು.

ಇದನ್ನೂ ಓದಿ » ಶಿವಮೊಗ್ಗ | ಬೈಕ್‌ನಲ್ಲಿ ಹಳ್ಳ ದಾಟುತ್ತಿದ್ದಾಗ ಕೊಚ್ಚಿ ಹೋದ ವ್ಯಕ್ತಿ

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : October 9, 2024

Leave a Comment