ರೈಲ್ವೆ ತತ್ಕಾಲ್‌ ಟಿಕೆಟ್‌ ಬುಕಿಂಗ್‌ನಲ್ಲಿ ಮಹ್ವತದ ಬದಲಾವಣೆ, ಪ್ರಯೋಗ ಆರಂಭ, ಏನಿದು?

Prayanikare-Gamanisi-Indian-Railway-News

ರೈಲ್ವೆ ನ್ಯೂಸ್‌: ತತ್ಕಾಲ್‌ ಟಿಕೆಟ್‌ (Tatkal Ticket) ಬುಕಿಂಗ್‌ನಲ್ಲಿ ನಡೆಯುತ್ತಿದ್ದ ವಂಚನೆ ತಡೆಗಟ್ಟಲು ಮತ್ತು ಏಜೆಂಟರಿಗೆ ಕಡಿವಾಣ ಹಾಕಲು ರೈಲ್ವೆ ಇಲಾಖೆ ಮಹತ್ವದ ಹೆಜ್ಜೆ ಇರಿಸಿದೆ. ತತ್ಕಾಲ್‌ ಟಿಕೆಟ್‌ ಬುಕಿಂಗ್‌ನಲ್ಲಿ ಮಹತ್ವದ ಬದಲಾವಣೆ ತರಲು ಮುಂದಾಗಿದೆ. ಇನ್ನು ಮುಂದೆ ರೈಲ್ವೆ ಟಿಕೆಟ್‌ ಕಾಯ್ದಿರಿಸುವಿಕೆ ಕೌಂಟರ್‌ಗಳಿಂದ ತತ್ಕಾಲ್ ಟಿಕೆಟ್‌ಗಳನ್ನು ಕಾಯ್ದಿರಿಸುವಾಗ, ಪ್ರಯಾಣಿಕರ ಮೊಬೈಲ್ ಸಂಖ್ಯೆಗೆ ಒಟಿಪಿ ಕಳುಹಿಸಲಾಗುತ್ತದೆ. ಈ ಒಟಿಪಿಯನ್ನು ತಿಳಿಸಿದ ನಂತರವೇ ಟಿಕೆಟ್ ನೀಡಲಾಗುತ್ತದೆ. ರಾಣಿ ಕಮಲಾಪತಿ ನಿಲ್ದಾಣದಿಂದ ದೆಹಲಿಗೆ ಹೋಗುವ ಶತಾಬ್ದಿ ಎಕ್ಸ್‌ಪ್ರೆಸ್ ರೈಲಿನಲ್ಲಿ ಮೊದಲು … Read more

ಶಿವಮೊಗ್ಗದಿಂದ ಹೊಸ ರೈಲ್ವೆ ಮಾರ್ಗಗಳು, ರೈಲ್ವೆ ಸೌಧದಲ್ಲಿ ಸಂಸದ ರಾಘವೇಂದ್ರ ಮಹತ್ವದ ಮೀಟಿಂಗ್‌, ಇಲ್ಲಿದೆ ಡಿಟೇಲ್ಸ್

MP-BY-Raghavendra-visit-Rail-Soudha-in-Hubli.

ರೈಲ್ವೆ ಸುದ್ದಿ: ಹುಬ್ಬಳ್ಳಿಯ ರೈಲ್ವೆ ಸೌಧಕ್ಕೆ ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ ಭೇಟಿ ನೀಡಿದ್ದರು. ನೈಋತ್ಯ ವಲಯದ ರೈಲ್ವೆ ಜನರಲ್‌ ಮ್ಯಾನೇಜರ್‌ ಮುಕುಲ್‌ ಸರಣ್‌ ಮಾಥೂರ್‌ ಅವರನ್ನು ಭೇಟಿಯಾಗಿ ವಿವಿಧ ರೈಲ್ವೆ ಯೋಜನೆಗಳ (Railway) ಕುರಿತು ಚರ್ಚೆ ನಡೆಸಿದರು. ಸಂಸದ ರಾಘವೇಂದ್ರ ಏನೆಲ್ಲ ಚರ್ಚಿಸಿದರು? ಶಿವಮೊಗ್ಗದಿಂದ ಮಂಗಳೂರು ಮತ್ತು ಹುಬ್ಬಳ್ಳಿಗೆ ನೇರ ರೈಲ್ವೆ ಸಂಪರ್ಕ ಕಲ್ಪಿಸುವ ರೈಲು ಯೋಜನೆಗಳ ಸಮೀಕ್ಷೆ ನಡೆಸಿ, ಶೀಘ್ರ ಕಾಮಗಾರಿ ಆರಂಭಿಸಬೇಕು. ಇದರಿಂದ ಅಕ್ಕಪಕ್ಕದ ಜಿಲ್ಲೆಯ ಜನರಿಗು ಅನುಕೂಲವಾಗಲಿದೆ ಎಂದು ಸಂಸದ ರಾಘವೇಂದ್ರ ಮನವಿ … Read more

ಮೈಸೂರು – ಶಿವಮೊಗ್ಗ ಎಕ್ಸ್‌ಪ್ರೆಸ್‌ ರೈಲು ಎರಡು ದಿನ 100 ನಿಮಿಷ ತಡ, ಕಾರಣವೇನು?

Prayanikare-Gamanisi-Indian-Railway-News

ರೈಲ್ವೆ ಸುದ್ದಿ: ಮಂದಗೆರೆ ರೈಲ್ವೆ (Train) ಯಾರ್ಡ್‌ನಲ್ಲಿ ಸುರಕ್ಷತಾ ಕಾಮಗಾರಿ ನಡೆಸಲಾಗುತ್ತಿದೆ. ಆದ್ದರಿಂದ ಸೆಪ್ಟೆಂಬರ್ 23 ಮತ್ತು 24 ರಂದು ಮೈಸೂರಿನಿಂದ ಹೊರಡುವ ರೈಲು ಸಂಖ್ಯೆ 16225 ಮೈಸೂರು – ಶಿವಮೊಗ್ಗ ಟೌನ್ ಎಕ್ಸ್‌ಪ್ರೆಸ್ ರೈಲು ಮಾರ್ಗ ಮಧ್ಯೆ 100 ನಿಮಿಷಗಳ ಕಾಲ ನಿಯಂತ್ರಣವಾಗಲಿದೆ ಎಂದು ರೈಲ್ವೆ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ. ಈ ರೈಲು ಪ್ರತಿದಿನ ಬೆಳಗ್ಗೆ 10.15ಕ್ಕೆ ಮೈಸೂರಿನಿಂದ ಹೊರಟು ಸಂಜೆ 4.40ಕ್ಕೆ ಶಿವಮೊಗ್ಗ ನಿಲ್ದಾಣ ತಲುಪುತ್ತಿತ್ತು. ಆದರೆ ಸೆ.23 ಮತ್ತು 24ರಂದು 100 ನಿಮಿಷ … Read more

ಮೈಸೂರು – ಶಿವಮೊಗ್ಗ, ತಾಳಗುಪ್ಪ – ಮೈಸೂರು ಎಕ್ಸ್‌ಪ್ರೆಸ್‌ ರೈಲುಗಳು ಮಾರ್ಗ ಮಧ್ಯೆ ನಿಯಂತ್ರಣ, ಯಾವಾಗ?

Electric-Locomotive-train-for-Shimoga

ರೈಲ್ವೆ ಸುದ್ದಿ: ಮಾವಿನಕೆರೆ ಮತ್ತು ಹೊಳೆನರಸೀಪುರ ರೈಲು ನಿಲ್ದಾಣಗಳಲ್ಲಿ ಹಳಿಗಳ ನವೀಕರಣ ಕಾಮಗಾರಿ ನಡೆಸಲಾಗುತ್ತಿದೆ. ಆದ್ದರಿಂದ ಕೆಲವು ರೈಲುಗಳ (Trains) ಸಂಚಾರದಲ್ಲಿ ನಿಯಂತ್ರಣವಾಗಲಿದೆ ಎಂದು ರೈಲ್ವೆ ಇಲಾಖೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಯಾವೆಲ್ಲ ರೈಲು ಸಂಚಾರದಲ್ಲಿ ನಿಯಂತ್ರಣ? ಸೆಪ್ಟೆಂಬರ್ 22, 23 ಮತ್ತು 24ರಂದು ಮೈಸೂರಿನಿಂದ ಹೊರಡುವ ರೈಲು ಸಂಖ್ಯೆ 16225 ಮೈಸೂರು – ಶಿವಮೊಗ್ಗ ಟೌನ್ ಎಕ್ಸ್‌ಪ್ರೆಸ್ ಮಾರ್ಗ ಮಧ್ಯದಲ್ಲಿ 60 ನಿಮಿಷ ನಿಯಂತ್ರಣವಾಗಲಿದೆ. ಅದೇ ರೀತಿ, ಸೆಪ್ಟೆಂಬರ್ 26ರಂದು ಈ ರೈಲು 65 ನಿಮಿಷಗಳ ಕಾಲ … Read more

ಯಶವಂತಪುರ – ತಾಳಗುಪ್ಪ ಮಧ್ಯೆ ವಿಶೇಷ ರೈಲು, ಎಷ್ಟು ದಿನ? ಎಲ್ಲೆಲ್ಲಿ ಇರುತ್ತೆ ಸ್ಟಾಪ್?

Prayanikare-Gamanisi-Indian-Railway-News

ರೈಲ್ವೆ ಸುದ್ದಿ: ದಸರಾ ಹಬ್ಬದ ಹಿನ್ನೆಲೆ ಯಶವಂತಪುರ – ತಾಳಗುಪ್ಪ ಮಧ್ಯೆ ವಿಶೇಷ ರೈಲು (Special Train) ಮೂರು ಟ್ರಿಪ್ ಸಂಚರಿಸಲಿದೆ ಎಂದು ನೈಋತ್ಯ ರೈಲ್ವೆಯ ಮೈಸೂರು ವಿಭಾಗ ಪ್ರಕಟಣೆಯಲ್ಲಿ ತಿಳಿಸಿದೆ‌. ದಸರಾ ಹಬ್ಬದ ಸಂದರ್ಭ ಪ್ರಯಾಣಿಕರ ದಟ್ಟಣೆ ನಿವಾರಿಸಲು ನೈಋತ್ಯ ರೈಲ್ವೆಯು ಯಶವಂತಪುರ ಹಾಗೂ ತಾಳಗುಪ್ಪ ನಡುವೆ ವಿಶೇಷ ಎಕ್ಸ್‌ಪ್ರೆಸ್ ರೈಲು ಓಡಿಸಲಿದೆ. ಈ ರೈಲು ಪ್ರತಿ ದಿಕ್ಕಿನಲ್ಲಿ ಮೂರು ಟ್ರಿಪ‌್‌‌ಗಳನ್ನು ಪೂರ್ಣಗೊಳಿಸಲಿದೆ ಎಂದು ತಿಳಿಸಲಾಗಿದೆ. ವಿಶೇಷ ರೈಲಿನ ಟೈಮಿಂಗ್ ಏನು? ರೈಲು ಸಂಖ್ಯೆ 06587 … Read more

ಮೈಸೂರು ದಸರಾ, ಶಿವಮೊಗ್ಗದಿಂದ ಮೈಸೂರಿಗೆ ಎಷ್ಟು ರೈಲುಗಳಿವೆ? ಟೈಮಿಂಗ್‌ ಏನು? ಇಲ್ಲಿದೆ ಡಿಟೇಲ್ಸ್‌

Prayanikare-Gamanisi-Indian-Railway-News

ರೈಲ್ವೆ ಸುದ್ದಿ: ಕೆಲವೇ ದಿನದಲ್ಲಿ ನಾಡಹಬ್ಬ ದಸರಾಗೆ ಚಾಲನೆ ಸಿಗಲಿದೆ. ಮೈಸೂರನಲ್ಲಿ ನವರಾತ್ರಿ ಕಣ್ತುಂಬಿಕೊಳ್ಳುವ ಸಂಭ್ರಮೆ ವಿಭಿನ್ನ ಅನುಭವ. ಶಿವಮೊಗ್ಗ ಜಿಲ್ಲೆಯಿಂದ ಮೈಸೂರಿಗೆ ಪ್ರತಿದಿನ ಓಡಾಡಲು ರೈಲುಗಳ (Trains) ವ್ಯವಸ್ಥೆ ಇದೆ. ಶಿವಮೊಗ್ಗದಿಂದ ಮೈಸೂರಿಗೆ ಎಷ್ಟು ರೈಲುಗಳಿವೆ? ಟೈಮಿಂಗ್‌ ಏನು? ಇಲ್ಲಿದೆ ಡಿಟೇಲ್ಸ್‌ ಯಾವ್ಯಾವ ರೈಲು ಯಾವಾಗ ಹೊರಡುತ್ತವೆ? ♦ ಕುವೆಂಪು ಎಕ್ಸ್‌ಪ್ರೆಸ್‌ : ತಾಳಗುಪ್ಪದಿಂದ ಬೆಳಗ್ಗೆ 6.15ಕ್ಕೆ ಹೊರಡಲಿದೆ. ಶಿವಮೊಗ್ಗದಿಂದ ಬೆಳಗ್ಗೆ 8.20ಕ್ಕೆ ಹೊರಡಲಿದೆ. ಮಧ್ಯಾಹ್ನ 3.35ಕ್ಕೆ ಮೈಸೂರು ರೈಲ್ವೆ ನಿಲ್ದಾಣ ತಲುಪಲಿದೆ. ಶಿವಮೊಗ್ಗದಿಂದ ಹಾಸನ ಮಾರ್ಗವಾಗಿ ಮೈಸೂರಿಗೆ … Read more

ವೈರಲ್‌ ವಿಡಿಯೋ, ಕಾರಿನ ಸನ್‌ ರೂಫ್‌ನಲ್ಲಿ ನಿಂತು ರೈಲ್ವೆ ಬ್ಯಾರಿಯರ್‌ ತಲೆಗೆ ಬಡಿಸಿಕೊಂಡ ಬಾಲಕ, ಮುಂದೇನಾಯ್ತು?

Boy-on-Car-sunroof-hits-railway-barrier-in-Bangalore

ಜಸ್ಟ್‌ ಮಾಹಿತಿ: ಚಲಿಸುತ್ತಿದ್ದ ಕಾರಿನ ಸನ್‌ ರೂಫ್‌ನಲ್ಲಿ (Sun Roof) ನಿಂತಿದ್ದ ಬಾಲಕನಿಗೆ ರೈಲ್ವೆ ಇಲಾಖೆಯ ಬ್ಯಾರಿಯರ್‌ ತಗುಲಿ ಗಾಯಗೊಂಡಿದ್ದಾನೆ. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಇನ್ನೊಂದೆಡೆ ಸನ್‌ ರೂಫನ್‌ನಲ್ಲಿ ಮಕ್ಕಳನ್ನು ನಿಲ್ಲಿಸುವುದು ಅಥವಾ ಹಾಗೆ ನಿಂತು ಪ್ರಯಾಣಿಸುವುದು ಅಪಾಯಕಾರಿ ಎಂದು ಪೊಲೀಸ್‌ ಇಲಾಖೆ ಎಚ್ಚರಿಕೆ ನೀಡಿದೆ. ಈ ಘಟನೆ ಆಗಿದ್ದೆಲ್ಲಿ? ಬಾಲಕನ ಸ್ಥಿತಿ ಹೇಗಿದೆ? ಸೆ.7ರಂದು ಮಧ್ಯಾಹ್ನ ಚಲಿಸುತ್ತಿದ್ದ ಕೆಂಪು ಕಾರಿನ ಸನ್‌ ರೂಫ್‌ನಲ್ಲಿ ನಿಂತು ಪ್ರಯಾಣಿಸುತ್ತಿದ್ದ ಬಾಲಕನ ತಲೆ ರೈಲ್ವೆ ಇಲಾಖೆಯ … Read more

ಜೀ ಕನ್ನಡದ ನಾವು ನಮ್ಮವರು ಕಾರ್ಯಕ್ರಮದಲ್ಲಿ ಶಿವಮೊಗ್ಗ ಜಿಲ್ಲೆಯ ದಂಪತಿ, ಹೇಗಿದೆ ಇವರ ಪ್ರದರ್ಶನ?

Zee-Kannada-Navu-Nammavaru-Pirya-Shivaram

ಶಿವಮೊಗ್ಗ: ಜೀ ಕನ್ನಡ ವಾಹಿನಿಯ ನಾವು ನಮ್ಮವರು ಕಾರ್ಯಕ್ರಮದಲ್ಲಿ (programme) ಶಿವಮೊಗ್ಗ ಜಿಲ್ಲೆಯ ದಂಪತಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಕಾರ್ಯಕ್ರಮದಲ್ಲಿ ಇತರೆ ಸ್ಪರ್ಧಿಗಳ ಜೊತೆಗೆ ಪೈಪೋಟಿಯ ಜೊತೆಗೆ ಮಲೆನಾಡಿನ ಸಂಸ್ಕೃತಿ, ಶಿವಮೊಗ್ಗ ಜಿಲ್ಲೆಯ ಪರಿಸರದ ಕತೆಯನ್ನು ನಾಡಿಗೆ ಪರಿಚಯಿಸುವ ಕೆಲಸ ಮಾಡಿದ್ದಾರೆ. ನಟಿ ಪ್ರಿಯಾ ಕೆಸರೆ, ವಕೀಲ ಶಿವರಾಂ.ಬಿ.ಆರ್‌ ದಂಪತಿ ‘ನಾವು ನಮ್ಮವರುʼ ಕಾರ್ಯಕ್ರಮದಲ್ಲಿ ಕಳೆದ ಒಂದು ತಿಂಗಳಿಂದ ಸ್ಪರ್ಧಿಸುತ್ತಿದ್ದಾರೆ. ಪ್ರಿಯಾ ಕೆಸರೆ ಮೂಲತಃ ಸಾಗರ ತಾಲೂಕಿನವರು. ರಂಗಭೂಮಿ ಕಲಾವಿದೆ. ಸಾಗರದ ಎಲ್‌.ಬಿ ಕಾಲೇಜಿನಲ್ಲಿ ಪತ್ರಿಕೋದ್ಯಮ ಪದವಿ … Read more

ದಸರಾ ಹಬ್ಬ, ಮೈಸೂರು – ಶಿವಮೊಗ್ಗ, ಮೈಸೂರು – ತಾಳಗುಪ್ಪ ರೈಲುಗಳು ವಿವಿಧೆಡೆ ತಾತ್ಕಾಲಿಕ ನಿಲುಗಡೆ, ಎಲ್ಲೆಲ್ಲಿ?

Train-Jan-Shatabdi-General-Image

ರೈಲ್ವೆ ಸುದ್ದಿ: ಮೈಸೂರಿನಲ್ಲಿ ನಡೆಯಲಿರುವ ದಸರಾ ಹಬ್ಬದ ಸಂದರ್ಭ ನಿರೀಕ್ಷಿತ ಪ್ರಯಾಣಿಕರ ದಟ್ಟಣೆ ನಿಭಾಯಿಸಲು ಮತ್ತು ಪ್ರಯಾಣಿಕರಿಗೆ ಅನುಕೂಲ ಕಲ್ಪಿಸಲು, ನೈಋತ್ಯ ರೈಲ್ವೆಯು (railway) ಸೆಪ್ಟೆಂಬರ್ 23 ರಿಂದ ಅಕ್ಟೋಬರ್ 2ರವರೆಗೆ ಕೆಲವು ರೈಲುಗಳಿಗೆ ತಾತ್ಕಾಲಿಕ ನಿಲುಗಡೆ ಒದಗಿಸಲಾಗಿದೆ ಎಂದು ರೈಲ್ವೆ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ. ಯಾವ್ಯಾವ ರೈಲು? ಎಲ್ಲೆಲ್ಲಿ ನಿಲುಗಡೆ? ರೈಲು ಸಂಖ್ಯೆ 16225/16226 ಮೈಸೂರು–ಶಿವಮೊಗ್ಗ ಟೌನ್–ಮೈಸೂರು ಎಕ್ಸ್ ಪ್ರೆಸ್: ಈ ರೈಲು ಬೆಳಗುಳ, ಕೃಷ್ಣರಾಜಸಾಗರ, ಕಲ್ಲೂರು ಎಡಹಳ್ಳಿ ಹಾಲ್ಟ್, ಸಾಗರಕಟ್ಟೆ, ಡೋರನಹಳ್ಳಿ, ಹಂಪಾಪುರ, ಅರ್ಜುನಹಳ್ಳಿ … Read more

IRCTC ಮೂಲಕ ಟಿಕೆಟ್‌ ಬುಕಿಂಗ್‌, ಮಹತ್ವದ ಅಪ್‌ಡೇಟ್‌ ನೀಡಿದ ರೈಲ್ವೆ ಇಲಾಖೆ ಅಧಿಕಾರಿ

Prayanikare-Gamanisi-Indian-Railway-News

ರೈಲ್ವೆ ನ್ಯೂಸ್‌: ಆನ್‌ಲೈನ್‌ ಟಿಕೆಟ್‌ ಬಕ್ಕಿಂಗ್‌ ವ್ಯವಸ್ಥೆ ಭಾರತೀಯ ರೈಲ್ವೆ (Indian Railways) ಇಲಾಖೆಗೆ ದೊಡ್ಡ ಅದಾಯದ ಮೂಲವಾಗಿದೆ. IRCTC ಮೂಲಕ ಪ್ರತಿದಿನ ಲಕ್ಷ ಲಕ್ಷ ಟಿಕೆಟ್‌ಗಳು ಬುಕ್‌ ಆಗುತ್ತಿವೆ ಎಂದು ರೈಲ್ವೆ ಇಲಾಖೆ ಹಣಕಾಸು ವಿಭಾಗ ತಿಳಿಸಿದೆ. ಆಗಸ್ಟ್‌ನಲ್ಲಿ ನಡೆದ ಕಾರ್ಯಾಗಾರವೊಂದರಲ್ಲಿ ರೈಲ್ವೆ ಇಲಾಖೆ ಹಣಕಾಸು ವಿಭಾಗದ ನಿರ್ದೇಶಕ ಸುಧೀರ್‌ ಕುಮಾರ್‌, ಕಳೆದ ವರ್ಷಕ್ಕಿಂತಲೂ ಈ ವರ್ಷ ಆನ್‌ಲೈಟ್‌ ಟಿಕಿಟ್‌ ಬುಕಿಂಗ್‌ ಪ್ರಮಾಣ ಶೇ.9.12ರಷ್ಟು ಹೆಚ್ಚಳವಾಗಿದೆ ಎಂದು ತಿಳಿಸಿದ್ದಾರೆ. 360 ಕೋಟಿ ಆದಾಯ ದೇಶಾದ್ಯಂತ ಒಟ್ಟು … Read more