ಗೊಂದಿ ಡ್ಯಾಂ, ಅಪಾಯಕಾರಿ ಜಾಗದಲ್ಲಿ ಪ್ರವಾಸಿಗರ ಈಜು, ಪೊಲೀಸರನ್ನು ಕರೆಸಿದ ಸ್ಥಳೀಯರು

Gondi-Dam-police-warns-swimmers.

SHIVAMOGGA LIVE NEWS | 17 APRIL 2024 BHADRAVATHI : ಸಾಲು ಸಾಲು ರಜೆ ಹಿನ್ನೆಲೆ ಭದ್ರಾವತಿ ತಾಲೂಕು ಗೋಂದಿ ಅಣೆಕಟ್ಟೆಗೆ ದೊಡ್ಡ ಸಂಖ್ಯೆಯ ಯುವಕರು ಭೇಟಿ ನೀಡುತ್ತಿದ್ದಾರೆ. ಆಪಾಯಕಾರಿ ಸ್ಥಳಗಳಲ್ಲಿ ಈಜುವ ಸಾಹಸ ಮಾಡುತ್ತಿದ್ದಾರೆ. ಸ್ಥಳೀಯರ ಮಾತಿಗೂ ಕ್ಯಾರೆ ಅನ್ನುತ್ತಿಲ್ಲ. ಕಳೆದ ವಾರ ರಜೆ ಸಂದರ್ಭ ಗೋಂದಿ ಅಣೆಕಟ್ಟೆಗೆ ಹೆಚ್ಚಿನ ಪ್ರವಾಸಿಗರು ಆಗಮಿಸಿದ್ದರು. ಶಿವಮೊಗ್ಗ ಸೇರಿದಂತೆ ಸುತ್ತಮುತ್ತಲಿಂದ ಕಾಲೇಜು ವಿದ್ಯಾರ್ಥಿಗಳು, ಯುವಕರು ಭೇಟಿ ನೀಡಿದ್ದರು. ಈ ಪೈಕಿ ಹಲವರು ಈಜಲು ನೀರಿಗಿಳಿಯುತ್ತಿದ್ದಾರೆ. ಇಲ್ಲಿ ಅಪಾಯಕಾರಿ … Read more

ತುಂಗಾ – ಭದ್ರಾ ನದಿ ಪಾತ್ರದಲ್ಲಿ ನಿಷೇಧಾಜ್ಞೆ, ಕಾರಣವೇನು?

Mini-Vidhanasoudha-Bhadraavathi

SHIVAMOGGA LIVE NEWS | 16 APRIL 2024 BHADRAVATHI : ತುಂಗಾ-ಭದ್ರಾ ನದಿ ಪಾತ್ರದಲ್ಲಿ ಅಕ್ರಮ ಮರಳು ಗಣಿಗಾರಿಕೆ ತಡೆಗೆ ಭದ್ರಾವತಿ ತಹಶೀಲ್ದಾರ್‌ ಕೆ.ಆರ್‌.ನಾಗರಾಜು ನಿಷೇಧಾಜ್ಞೆ ಜಾರಿಗೊಳಿಸಿ ಆದೇಶ ಹೊರಡಿಸಿದ್ದಾರೆ. ಎಲ್ಲೆಲ್ಲಿ ನಿಷೇಧ? ಕಾರಣವೇನು? ತಾಲೂಕಿನ ಡಣಾಯಕಪುರ, ಸಿದ್ಲೀಪುರ, ಸನ್ಯಾಸಿಕೊಡಮಗ್ಗಿ, ಮಂಗೋಟೆ, ಆನವೇರಿ, ವಡೇರಪುರ (ನಿಂಬೆಗೊಂದಿ) ಗ್ರಾಮಗಳಲ್ಲಿ ತುಂಗಾ – ಭದ್ರಾ ನದಿ ಪಾತ್ರಕ್ಕೆ ಅಕ್ರಮ ಪ್ರವೇಶವನ್ನು ನಿಷೇಧಿಸಲಾಗಿದೆ. ಈ ಹಿಂದೆ ಇಲ್ಲಿನ ನಿಕ್ಷೇಪಗಳಲ್ಲಿ ಗಣಿಗಾರಿಕೆ ನಡೆಸಲು ಹರಾಜು ಮೂಲಕ 5 ವರ್ಷ ಅವಧಿಗೆ ವಿಲೇವಾರಿ … Read more

ಹೊಳೆಹೊನ್ನೂರು ಸುತ್ತಮುತ್ತ ಏ.13 ಮತ್ತು 15ರಂದು ವಿದ್ಯುತ್‌ ವ್ಯತ್ಯಯ, ಎಲ್ಲೆಲ್ಲಿ ಕರೆಂಟ್‌ ಇರಲ್ಲ?

power cut mescom ELECTRICITY

SHIVAMOGGA LIVE NEWS | 13 APRIL 2024 HOLEHONNURU : ಕಲ್ಲಿಹಾಳ್ ವ್ಯಾಪ್ತಿಯಲ್ಲಿ 66/11 ಕೆವಿ ಮಾರ್ಗವನ್ನು ಹೊಸದಾಗಿ ನಿರ್ಮಿಸಲಾಗುತ್ತಿದೆ. ಕೂಡ್ಲಿಗೆರೆಯಲ್ಲಿ ತ್ರೈಮಾಸಿಕ ನಿರ್ವಹಣೆಯನ್ನು ಹಮ್ಮಿಕೊಳ್ಳಲಾಗಿದೆ. ಈ ಹಿನ್ನೆಲೆ ಏ.13 ಮತ್ತು 15ರಂದು ಬೆಳಗ್ಗೆ 10 ರಿಂದ ಸಂಜೆ 6ವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ. ಅರಬಿಳಚಿ, ಅರಬಿಳಚಿ ಕ್ಯಾಂಪ್, ಕೋಡಿಹಳ್ಳಿ, ಮಾರಶೆಟ್ಟಿಹಳ್ಳಿ, ತಿಮ್ಲಾಪುರ, ಡಿ.ಬಿ ಹಳ್ಳಿ, ಬೊಮ್ಮನಕಟ್ಟೆ, ದಾನವಾಡಿ, ಕಲ್ಲಾಪುರ, ಕೋಡಿಹೊಸೂರು, ತಟ್ಟೆಹಳ್ಳಿ, ವಡ್ಡರಹಟ್ಟಿ, ಕೂಡ್ಲಿಗೆರೆ, ಕಲ್ಲಪ್ಪನಹಳ್ಳಿ ಹೊಸಹಳ್ಳಿ, ಸೀತಾರಾಂಪುರ, ಹದಿಗೆರೆ ಕ್ಯಾಂಪ್, ತುಮರಿ, ಲಕ್ಕಪ್ಪನ ಕ್ಯಾಂಪ್ … Read more

ಈಶ್ವರಪ್ಪ ಹೆಸರಿನ ವಾಟ್ಸಪ್‌ ಗ್ರೂಪ್‌ನಲ್ಲಿ ಅವಹೇಳನ, ಬಿಜೆಪಿ ಮುಖಂಡನಿಂದ ದೂರು, ಕಾರ್ಯಕರ್ತನಿಂದ ಪ್ರತಿದೂರು

whatsapp-general-image

SHIVAMOGGA LIVE NEWS | 10 APRIL 2024 BHADRAVATHI : ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಚುನಾವಣೆಗೆ ಸ್ಪರ್ಧೆ ವಿಚಾರ ಬಿಜೆಪಿಯೊಳಗೆ ಕಾರ್ಯಕರ್ತರ ಹಂತದಲ್ಲಿ ಗೊಂದಲ ಸೃಷ್ಟಿಸಿದೆ. ಈ ಮಧ್ಯೆ ಇದು ವೈಯಕ್ತಿಕ ಪ್ರತಿಷ್ಠೆಯ ಹಂತಕ್ಕೆ ತಲುಪಿದ್ದು, ಭದ್ರಾವತಿಯಲ್ಲಿ ದೂರು ಪ್ರತಿದೂರು ದಾಖಲಾಗಿದೆ. ದೂರು : ಮಂಡಲ ಅಧ್ಯಕ್ಷರ ಅವಹೇಳನ ಈ‍ಶ್ವರಪ್ಪ ನಡೆ ಹಿಂದೂಗಳ ಕಡೆ ಎಂಬ ವಾಟ್ಸಪ್‌ ಗ್ರೂಪ್‌ನಲ್ಲಿ ಬಿಜೆಪಿ ಭದ್ರಾವತಿ ಮಂಡಲ ಅಧ್ಯಕ್ಷ ಜಿ.ಧರ್ಮಪ್ರಸಾದ್‌ ಅವರನ್ನು ಅವಹೇಳನ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಈ ಸಂಬಂಧ … Read more

ಕೂಡಲಿಯಲ್ಲಿ ಈಜಲು ಹೋದ ವಿದ್ಯಾರ್ಥಿ ನೀರು ಪಾಲು

mubarak-drowned-at-kudli-near-holehonnuru.

SHIVAMOGGA LIVE NEWS | 5 APRIL 2024 SHIMOGA : ಸ್ನೇಹಿತರೊಂದಿಗೆ ಈಜಲು ತೆರಳಿದ್ದ ಯುವಕನೊಬ್ಬ ನೀರಲ್ಲಿ ಮುಳುಗಿ ಮೃತಪಟ್ಟಿದ್ದಾನೆ. ಕೂಡಲಿ ಗ್ರಾಮದ ತುಂಗಭದ್ರಾ ಸಂಗಮದಲ್ಲಿ ಘಟನೆ ಸಂಭವಿಸಿದೆ. ಶಿವಮೊಗ್ಗದ ಅಣ್ಣಾನಗರದ ಮುಬಾರಕ್ (18) ಸಾವಿಗೀಡಾದವನು. ಐಟಿಐ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ. ಎಂದಿನಂತೆ ಕಾಲೇಜಿಗೆ ಹೋಗಿ ಬರುವುದಾಗಿ ಮನೆಯಲ್ಲಿ ತಿಳಿಸಿ ಕೂಡಲಿ ಸಂಗಮದಲ್ಲಿ ಸ್ನಾನ ಮಾಡಲು ಸ್ನೇಹಿತರೊಂದಿಗೆ ತೆರಳಿದ್ದಾಗ ಅವಘಡ ನಡೆದಿದೆ. ಹೊಳೆಹೊನ್ನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  ಇದನ್ನೂ ಓದಿ – ಮದುವೆಗೆ ವಾದ್ಯ ನುಡಿಸಲು ತೆರಳುತ್ತಿದ್ದವರಿಗೆ ಬುಳ್ಳಾಪುರ … Read more

ಓಮ್ನಿ ಕಾರು ಡಿಕ್ಕಿಯಾಗಿ ಪಾದಚಾರಿ ಸಾವು, ಕಾರು ಬಿಟ್ಟು ಚಾಲಕ ಪರಾರಿ, ಮೃತ ವ್ಯಕ್ತಿಯ ಗುರುತು ಪತ್ತೆಗೆ ಪ್ರಕಟಣೆ

ACCIDENT-NEWS-GENERAL-IMAGE.

SHIVAMOGGA LIVE NEWS | 31 MARCH 2024 BHADRAVATHI : ಓಮ್ನಿ ಕಾರು ಡಿಕ್ಕಿ ಹೊಡೆದು ಪಾದಚಾರಿಯೊಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಭದ್ರಾವತಿ ತಾಲೂಕು ತಮ್ಮಡಿಹಳ್ಳಿ ಬಳಿ ಶುಕ್ರವಾರ ಬೆಳಗಿನ ಜಾವ ಘಟನೆ ಸಂಭವಿಸಿದೆ. ಅಪಘಾತದ ಪರಿಣಾಮ ವಾಹನ ಮುಂದಕ್ಕೆ ಚಲಾಯಿಸಲು ಸಾಧ್ಯವಾಗದೇ ಓಮ್ನಿ ಕಾರನ್ನು ಅಲ್ಲಿಯೇ ಬಿಟ್ಟು ಪರಾರಿಯಾಗಿರುವ ಸಾಧ್ಯತೆಗಳಿವೆ ಎಂದು ಪೊಲೀಸರು ಅಂದಾಜಿಸಿದ್ದಾರೆ. ಪೊಲೀಸರು ಮೃತ ವ್ಯಕ್ತಿಯ ವಾರಸುದಾರರ ಪತ್ತೆಗೆ ಪ್ರಯತ್ನಿಸುತ್ತಿದ್ದಾರೆ. ಮೃತ ವ್ಯಕ್ತಿ ಸುಮಾರು 45 ವರ್ಷದವರೆಂದು ಅಂದಾಜಿಸಲಾಗಿದೆ. ಸಾಧಾರಣ ಮೈಕಟ್ಟು. ಎಣ್ಣೆಗೆಂಪು … Read more

ನೇಣು ಬಿಗಿದ ಸ್ಥಿತಿಯಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿ | ಪರೀಕ್ಷೆಗೆ ಹಾಜರಾಗಬೇಕಿದ್ದ ವಿದ್ಯಾರ್ಥಿನಿಗೆ ಕಾರು ಡಿಕ್ಕಿ, ಸಾವು

Crime-News-General-Image

SHIVAMOGGA LIVE NEWS | 26 MARCH 2024 ನೇಣು ಬಿಗಿದ ಸ್ಥಿತಿಯಲ್ಲಿ ವಿದ್ಯಾರ್ಥಿ SHIMOGA : ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಹಾಜರಾಗಬೇಕಿದ್ದ ವಿದ್ಯಾರ್ಥಿಯ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಸಾಗರ ತಾಲ್ಲೂಕಿನ ಯಡೇಹಳ್ಳಿಯ ಪರಶುರಾಮ ಬಾಬು (16) ಸಾವಿಗೀಡಾದ ಬಾಲಕ. ಈತನ ಶವ ಮನೆಯ ಕೊಠಡಿಯಲ್ಲಿ ದೊರೆತಿದೆ. ಈತ ಆನಂದಪುರದ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಓದುತ್ತಿದ್ದ. ಕಲಿಕೆಯಲ್ಲಿ ಮುಂದಿದ್ದ ಎಂದು ತಿಳಿದುಬಂದಿದೆ. ಈ ಬಗ್ಗೆ ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ರಸ್ತೆ ಅಪಘಾತದಲ್ಲಿ ವಿದ್ಯಾರ್ಥಿನಿ … Read more

ಭದ್ರಾ ಜಲಾಶಯದಿಂದ ನದಿಗೆ ನೀರು, ದಿನಾಂಕ ಪ್ರಕಟ, ಯಾವಾಗ? ಎಷ್ಟು ನೀರು ಹರಿಸಲಾಗುತ್ತದೆ?

Bhadra-Dam-General-Image

SHIVAMOGGA LIVE NEWS | 26 MARCH 2024 SHIMOGA : ತುಂಗಭದ್ರಾ ನದಿ ವ್ಯಾಪ್ತಿಯಲ್ಲಿ ಕುಡಿಯುವ ನೀರಿಗೆ ಅಭಾವ ಎದುರಾಗಿದೆ. ಆದ್ದರಿಂದ ಭದ್ರಾ ನದಿಗೆ 2 ಟಿಎಂಸಿ ನೀರು ಹರಿಸಲಾಗುತ್ತಿದೆ. ಮಾ.29ರಂದು ಮಧ್ಯರಾತ್ರಿಯಿಂದ ಪ್ರತಿದಿನ ತಲಾ 3 ಸಾವಿರ ಕ್ಯೂಸೆಕ್‌ನಂತೆ ಏ.6ರ ಮಧ್ಯರಾತ್ರಿವರೆಗೆ ನೀರು ಹರಿಸಲಾಗುತ್ತದೆ. ಈ ಸಂದರ್ಭ ಸಾರ್ವಜನಿಕರು ನದಿ ಪಾತ್ರದಲ್ಲಿ ಓಡಾಡುವುದು, ಜಾನುವಾರುಗಳನ್ನು ಮೇಯಿಸುವುದು ಸೇರಿದಂತೆ ಯಾವುದೇ ಚಟುವಟಿಕೆ ನಡೆಸುವುದು ಮತ್ತು ಪಂಪ್‌ಸೆಟ್‌ಗಳಿಂದ ನೀರೆತ್ತುವುದನ್ನು ನಿಷೇಧಿಸಲಾಗಿದೆ ಎಂದು ಭದ್ರಾ ಯೋಜನಾ ವೃತ್ತದ ಅಧೀಕ್ಷಕ … Read more

ಧಗಧಗ ಹೊತ್ತಿ ಉರಿದವು ವಸ್ತುಗಳು, ಬೆಂಕಿ ನಂದಿಸಿ ಮನೆ ಒಳಗೆ ಪರಿಶೀಲಿಸಿದಾಗ ಮಾಲೀಕನಿಗೆ ಕಾದಿತ್ತು ಆಘಾತ

crime name image

SHIVAMOGGA LIVE NEWS | 23 MARCH 2024 BHADRAVATHI : ಯಾರೂ ಇಲ್ಲದ ಸಂದರ್ಭ ಮನೆಯೊಳಗೆ ನುಗ್ಗಿರುವ ಕಳ್ಳರು ಚಿನ್ನಾಭರಣ, ನಗದು ಕಳ್ಳತನ ಮಾಡಿ ಮನೆಯಲ್ಲಿದ್ದ ವಸ್ತುಗಳಿಗೆ ಬೆಂಕಿ ಹಚ್ಚಿದ್ದಾರೆ. ಭದ್ರಾವತಿ ತಾಲೂಕು ಜೇಡಿಕಟ್ಟೆಯಲ್ಲಿ ಘಟನೆ ಸಂಭವಿಸಿದೆ. ರಾಮಕೃಷ್ಣ ಎಂಬುವವರ ಮನೆಯಲ್ಲಿ ಘಟನೆ ಸಂಭವಿಸಿದೆ. ಮನೆಯಲ್ಲಿ ಯಾರೂ ಇಲ್ಲದ ಸಂದರ್ಭ ಒಳ ನುಗ್ಗಿರುವ ಕಳ್ಳರು 1.10 ಲಕ್ಷ ರೂ. ಮೌಲ್ಯದ ಚಿನ್ನಾಭರಣ, 30 ಸಾವಿರ ರೂ.  ನಗದು ಕಳ್ಳತನ ಮಾಡಿದ್ದಾರೆ ಎಂದ ಆರೋಪಿಸಲಾಗಿದೆ. ಇದೆ ವೇಳೆ … Read more

ಭದ್ರಾವತಿ, ಶಿವಮೊಗ್ಗದಲ್ಲಿ ಗೀತಾ, ಶಿವರಾಜ್‌ ಕುಮಾರ್‌ಗೆ ಅದ್ಧೂರಿಗೆ ಸ್ವಾಗತ, ಎಲ್ಲೆಲ್ಲಿ ಹೇಗಿತ್ತು? ಇಲ್ಲಿದೆ ಡಿಟೇಲ್ಸ್‌

Geetha-Shivarajkumar-enter-Shivamogga-bike-rally-by-congress-workers

SHIVAMOGGA LIVE NEWS | 21 MARCH 2024 SHIMOGA / BHADRAVATHI : ಕಾಂಗ್ರೆಸ್‌ ಅಭ್ಯರ್ಥಿ ಗೀತಾ ಶಿವರಾಜ್‌ ಕುಮಾರ್‌ ಅವರು ಶಿವಮೊಗ್ಗ ಜಿಲ್ಲೆಗೆ ಆಗಮಿಸಿದ್ದಾರೆ. ಜಿಲ್ಲೆಯ ಗಡಿಯಲ್ಲಿ ಭದ್ರಾವತಿ ಕಾಂಗ್ರೆಸ್‌ ಮುಖಂಡರು ಗೀತಾ ಶಿವರಾಜ್‌ ಕುಮಾರ್‌ ಅವರಿಗೆ ಅದ್ಧೂರಿ ಸ್ವಾಗತ ನೀಡಿದರು. ತೆರೆದ ಜೀಪ್‌ನಲ್ಲಿ ಮೆರವಣಿಗೆ ನಡೆಸಲಾಯಿತು. ಶಿವಮೊಗ್ಗದಲ್ಲಿಯು ಬೃಹತ್‌ ಹಾರಗಳನ್ನು ಹಾಕಿ ಸ್ವಾಗತಿಸಲಾಯಿತು. ಎಲ್ಲೆಲ್ಲಿ ಹೇಗಿತ್ತು ಸ್ವಾಗತ? ಭದ್ರಾವತಿಯ ಕಾರೇಹಳ್ಳಿ ಗ್ರಾಮದಲ್ಲಿ ಶಾಸಕ ಬಿ.ಕೆ.ಸಂಗಮೇಶ್ವರ್ ಸೇರಿದಂತೆ ಕಾರ್ಯಕರ್ತರು ಅದ್ಧೂರಿಯಾಗಿ ಸ್ವಾಗತಿಸಿದರು. ಪತಿ ಶಿವರಾಜ್‌ಕುಮಾರ್ … Read more