ಕೊನೆಗು ಕುವೆಂಪು ವಿವಿಗೆ ಪ್ರಭಾರ ಕುಲಪತಿ ನೇಮಕ

160823-Acting-Vice-Chancellor-for-Kuvempu-University-Prof-Venkatesh.jpg

SHIVAMOGGA LIVE NEWS | 16 AUGUST 2023 SHANKARAGHATTA : ಕುವೆಂಪು ವಿಶ್ವವಿದ್ಯಾಲಯಕ್ಕೆ (Kuempu University) ಕೊನೆಗು ಪ್ರಭಾರ ಕುಲಪತಿ (Vice Chancellor) ನೇಮಿಸಲಾಗಿದೆ. ಪ್ರೊ. ಎಸ್‌.ವೆಂಕಟೇಶ್‌ ಅವರನ್ನು ಪ್ರಭಾರ ಕುಲಪತಿಯನ್ನಾಗಿ ನೇಮಿಸಿ ರಾಜ್ಯಪಾಲರು (Governor) ಆದೇಶ ಹೊರಡಿಸಿದ್ದಾರೆ. ಪ್ರೊ. ಎಸ್‌.ವೆಂಕಟೇಶ್‌ ಅವರು ಇವತ್ತು ಪ್ರಭಾರ ಕುಲಪತಿಯಾಗಿ ಅಧಿಕಾರ ಸ್ವೀಕರಿಸಿದರು. ಕುವೆಂಪು ವಿಶ್ವವಿದ್ಯಾಲಯದ ವಾಣಿಜ್ಯ ನಿಕಾಯದ ಡೀನ್‌ ಮತ್ತು ವಾಣಿಜ್ಯ ಶಾಸ್ತ್ರ (Commerce) ವಿಭಾಗದ ಅಧ್ಯಕ್ಷರಾಗಿದ್ದಾರೆ. ಎರಡು ದಶಕಕ್ಕು ಹೆಚ್ಚಿನ ಅಧ್ಯಾಪನ ಅನುಭವ ಹೊಂದಿದ್ದಾರೆ. ಇದನ್ನೂ … Read more

BREAKING NEWS – ಭದ್ರಾವತಿ ಹಳೆ ಸೇತುವೆ ಬಳಿ ಯುವಕನಿಗೆ ಚಾಕು ಇರಿತ, ಸಾವು

BHADRAVATHI-BREAKING-NEWS.jpg

SHIVAMOGGA LIVE NEWS | 15 AUGUST 2023 BHADRAVATHI : ಯುವಕನಿಗೆ ಚಾಕುವಿನಿಂದ ಇರಿದು ಹತ್ಯೆ ಮಾಡಲಾಗಿದೆ. ಭದ್ರಾವತಿ ಹಳೆ ಸೇತುವೆ (Old Bridge) ಬಳಿ ಘಟನೆ ಸಂಭವಿಸಿದೆ. ದೊಡ್ಡೇರಿಯ ನರೇಂದ್ರ (30) ಮೃತ ವ್ಯಕ್ತಿ. ಇರಿತದಿಂದಾಗಿ ಗಂಭೀರ ಗಾಯಗೊಂಡಿದ್ದ ನರೇಂದ್ರನನ್ನು ಶಿವಮೊಗ್ಗದ ಮೆಗ್ಗಾನ್‌ ಆಸ್ಪತ್ರೆಗೆ ರವಾನಿಸಲಾಗಿತ್ತು. ಆಸ್ಪತ್ರೆಯಲ್ಲಿ ಆತ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ. ಇದನ್ನೂ ಓದಿ – ಸಹ್ಯಾದ್ರಿ ಕಾಲೇಜು ಬಳಿ ತಪ್ಪಿದ ಅನಾಹುತ, ಕಾರಿನಲ್ಲಿದ್ದವರು ತಕ್ಷಣ ಎಸ್ಕೇಪ್‌ ಸಿದ್ದಾಪುರ ತಾಂಡಾದ ಸುನಿಲ್‌ ಎಂಬಾತ … Read more

ವಿಐಎಸ್‌ಎಲ್‌ ಪುನಾರಂಭಕ್ಕೆ ಆರಂಭಿಕ ತೊಂದರೆ, ನಿರೀಕ್ಷೆಯಲ್ಲಿದ್ದ ಕಾರ್ಮಿಕರಿಗೆ ನಿರಾಸೆ, ಆಗಿದ್ದೇನು?

110823 VISL Factory Bhadravathi

SHIVAMOGGA LIVE NEWS | 11 AUGUST 2023 BHADRAVATHI : ವಿಐಎಸ್ಎಲ್‌ ಕಾರ್ಖಾನೆಯ ಬಾರ್‌ ಮಿಲ್‌ (Bar Mill) ಘಟಕದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದೆ. ಹಾಗಾಗಿ ಆ.10ರಂದು ಆರಂಭವಾಗಿದ್ದ ಘಟಕ ತನ್ನ ಉತ್ಪಾದನಾ ಚಟುವಟಿಕೆ ಮುಂದೂಡಿದೆ. ಆ.10ರಿಂದ ಬಾರ್‌ ಮಿಲ್‌ (Bar Mill) ಘಟಕದಲ್ಲಿ ಉತ್ಪಾದನಾ ಚಟುವಟಿಕೆ ಪುನಾರಂಭವಾಗಲಿದೆ ಎಂದು ಸೇಲ್‌ ಆಡಳಿತ ಮಂಡಳಿ ತಿಳಿಸಿತ್ತು. ಅದರಂತೆ ಸಿದ್ಧತೆ ಮಾಡಿಕೊಳ್ಳುವಾಗ ತಾಂತ್ರಿಕ ದೋಷ ಕಾಣಿಸಿಕೊಂಡಿದೆ. ಈಗ ರಿಪೇರಿ ಕಾರ್ಯ ನಡೆಸಲಾಗುತ್ತಿದ್ದು, ಆ ಬಳಿಕ ಘಟಕದಲ್ಲಿ ಕೆಲಸ ಶುರುವಾಗಲಿದೆ … Read more

ಹೊಳೆಹೊನ್ನೂರಿನಲ್ಲಿ ಶ್ರೀಗಳ ಆಶೀರ್ವಚನ, ಎಲ್ಲವನ್ನೂ ದೇವರಿಗೆ ಅರ್ಪಿಸಿ ಅನುಭವಿಸಬೇಕು

Holehonnuru-Chaturmasya-Bhajana-Manadali

SHIVAMOGGA LIVE NEWS | 11 AUGUST 2023 HOLEHONNURU : ಭಗವಂತನಿಗೆ ಭಕ್ತರ (Devotees) ಮೇಲೆ ಅಪಾರ ಔದಾರ್ಯವಿದೆ ಎಂದು ಉತ್ತರಾದಿ ಮಠಾಧೀಶರಾದ ಶ್ರೀ ಸತ್ಯಾತ್ಮ ತೀರ್ಥ ಸ್ವಾಮೀಜಿ ಹೇಳಿದರು. 28ನೇ ಚಾತುರ್ಮಾಸ್ಯದ ಅಂಗವಾಗಿ ನಡೆದ ವಿದ್ವತ್ ಸಭೆಯಲ್ಲಿ  ಶ್ರೀಗಳು ಶ್ರೀ ಸತ್ಯಧರ್ಮರ ಭಾಗವತ ದಶಮ ಸ್ಕಂದ ವ್ಯಾಖ್ಯಾನಾಧಾರಿತ ಅನುಗ್ರಹ ಸಂದೇಶ ನೀಡಿದರು. ಅನ್ನ, ವಸ್ತ್ರ, ಜೀವನ ಎಲ್ಲವನ್ನೂ ಕೊಟ್ಟು ಸಲಹಿದ್ದಾನೆ.  ಅನ್ನ ಕೊಟ್ಟು ಹೊಟ್ಟೆ ತುಂಬಿಸಿದ್ದಾನೆ. ವಸ್ತ್ರವನ್ನು ನೀಡಿ ಮಾನ ಕಾಪಾಡಿದ್ದಾನೆ. ಜೀವನವನ್ನು ಕೊಟ್ಟು … Read more

ಭದ್ರಾ ಅಚ್ಚುಕಟ್ಟು ಪ್ರದೇಶದ ರೈತರಿಗೆ ಗುಡ್ ನ್ಯೂಸ್, ಕಾಲುವೆಗಳಿಗೆ ನೀರು ಹರಿಸಲು ಡೇಟ್ ಫಿಕ್ಸ್

Bhadra Dam

SHIVAMOGGA LIVE NEWS | 9 AUGUST 2023 SHIMOGA : ಭದ್ರಾ ಜಲಾಶಯದ ಅಚ್ಚುಕಟ್ಟು ಪ್ರದೇಶಕ್ಕೆ ನೀರು ಹರಿಸಲು ನೀರಾವರಿ ನಿಗಮ ತೀರ್ಮಾನಿದೆ. ಜತೆಗೆ ನೀರು ಕಡಿಮೆಯಾಗಿ ಬೆಳೆ ನಷ್ಟವಾದರೆ ಅದಕ್ಕೆ ಇಲಾಖೆ ಹೊಣೆಯಲ್ಲ ಎಂದು ಸಹ ತಿಳಿಸಿದೆ. ಕಾಲುವೆಗಳಿಗೆ ಯಾವಾಗಿಂದ ನೀರು? ಆ.10ರಿಂದ ಎಡದಂಡೆ, ಬಲದಂಡೆ ಕಾಲುವೆಗಳಿಗೆ ನೀರು ಹರಿಸುವುದಾಗಿ ಪ್ರಕಟಣೆ ಹೊರಡಿಸಿದೆ. ಜಲಾಶಯದಲ್ಲಿ ಪ್ರಸ್ತುತ 166 ಅಡಿ (ಗರಿಷ್ಠ 186 ಅಡಿ) ನೀರು ಇದೆ. ಯಾವ್ಯಾವ ಕಾಲುವೆಗೆ ಎಷ್ಟು ನೀರು? ಆ.10ರಿಂದ ನೂರು … Read more

ಕುವೆಂಪು ವಿವಿ ಕುಲಸಚಿವರ ದಿಢೀರ್‌ ಬದಲಾವಣೆ, ಹೊಸ ರಿಜಿಸ್ಟ್ರಾರ್‌ ಅಧಿಕಾರ ಸ್ವೀಕಾರ

Lokhande-Snehal-Sudhakar-takes-charge-as-Registrar-of-Kuvempu-University.

SHIVAMOGGA LIVE NEWS | 8 AUGUST 2023 SHANKARAGHATTA : ಐಎಎಸ್‌ ಅಧಿಕಾರಿಯೊಬ್ಬರಿಗೆ ಕುವೆಂಪು ವಿಶ್ವವಿದ್ಯಾಲಯದ ಕುಲಸಚಿವರಾಗಿ (Registrar) ಹೆಚ್ಚುವರಿ ಜವಾಬ್ದಾರಿ ನೀಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಸರ್ಕಾರದ ಈ ನಡೆ ಕುತೂಹಲ ಮೂಡಿಸಿದೆ. ಶಿವಮೊಗ್ಗ ಜಿಲ್ಲಾ ಪಂಚಾಯಿತಿ ಸಿಇಒ ಲೋಖಂಡೆ ಸ್ನೇಹಲ್‌ ಸುಧಾಕರ್‌ ಅವರಿಗೆ ಕುವೆಂಪು ವಿವಿಯ ಕುಲಸಚಿವ ಜವಾಬ್ದಾರಿಯನ್ನು ಹೆಚ್ಚುವರಿಯಾಗಿ ನೀಡಲಾಗಿದೆ. ಇವತ್ತು ಮಧ್ಯಾಹ್ನ ಲೋಖಂಡೆ ಸ್ನೇಹಲ್‌ ಸುಧಾಕರ್‌ ಅವರು ಕುವೆಂಪು ವಿವಿಯಲ್ಲಿ ಅಧಿಕಾರ ವಹಿಸಿಕೊಂಡರು. ಈಚೆಗಷ್ಟೆ ಪ್ರೊ. ಕಣ್ಣನ್‌ ನೇಮಕವಾಗಿತ್ತು … Read more

ಉರುಳಿಗೆ ಸಿಲುಕಿ ಚಿರತೆ ಸಾವು, ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ದೌಡು

leopard-found-at-agaradahalli-in-Bhadravathi.

SHIVAMOGGA LIVE NEWS | 8 AUGUST 2023 BHADRAVATHI : ಉರುಳಿಗೆ ಸಿಲುಕಿ ಗಂಡು ಚಿರತೆಯೊಂದು (leopard) ಸಾವನ್ನಪ್ಪಿದೆ. ಬೆಳಗ್ಗೆ ಚಿರತೆ ಉರುಳಿಗೆ ಸಿಲುಕಿರುವುದನ್ನು ಗಮನಿಸಿದ ಗ್ರಾಮಸ್ಥರು ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಅರಣ್ಯ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಿದರು. ಇದನ್ನೂ ಓದಿ – ನಡು ರಸ್ತೆಯಲ್ಲಿ ಕೆಂಪು ಧ್ವಜ ನೆಟ್ಟು ಪ್ರತಿಭಟನೆ, ಅಧಿಕಾರಿಗಳ ವಿರುದ್ಧ ವಿಭಿನ್ನ ರೀತಿಯ ಹೋರಾಟ ಭದ್ರಾವತಿ ತಾಲೂಕು ಅಗರದಹಳ್ಳಿಯಲ್ಲಿ ಚಿರತೆ ಉರುಳಿಗೆ ಸಿಲುಕಿದೆ. ವಿಚಾರ ತಿಳಿದು ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳದಲ್ಲಿ ಪರಿಶೀಲನೆ … Read more

ಸಂಕ್ಲೀಪುರದ ಕುಮಾರ್‌ಗೆ 3 ವರ್ಷ ಜೈಲು, 10 ಸಾವಿರ ದಂಡ, ಕಾರಣವೇನು?

Jail-for-Bhadravathi-Kumar-in-robbery-case

SHIVAMOGGA LIVE NEWS | 7 AUGUST 2023 BHADRAVATHI : ಕುಡಿಯಲು ನೀರು (Drinking Water) ಕೇಳಿ ಮನೆಯೊಳಗೆ ನುಗ್ಗಿ ರಾಬರಿ ಮಾಡಿದ್ದ ಆರೋಪ ಸಾಬೀತಾದ ಹಿನ್ನೆಲೆ ಆರೋಪಿಗೆ ನ್ಯಾಯಾಲಯ ಶಿಕ್ಷೆ ಪ್ರಕಟಿಸಿದೆ. 2015ರಲ್ಲಿ ಭದ್ರಾವತಿಯ ಜನ್ನಾಪುರದಲ್ಲಿ ಘಟನೆ ಸಂಭವಿಸಿತ್ತು. ಜನ್ನಾಪುರದ ನಿವಾಸಿ 60 ವರ್ಷದ ಮಹಿಳೆಯೊಬ್ಬರ ಮನೆ ಬಳಿ ಬಂದ ಸಂಕ್ಲೀಪುರದ ಕುಮಾರ ಎಂಬಾತ ಕುಡಿಯಲು ನೀರು ಕೇಳಿದ್ದ. ಮಹಿಳೆ ಒಳಗೆ ಹೋಗುತ್ತಿದ್ದಂತೆ ಒಳ ನುಗ್ಗಿದ ಕುಮಾರ, ಮಹಿಳೆಯ ಮಾಂಗಲ್ಯ ಸರವನ್ನು ಕಿತ್ತುಕೊಂಡು ಕೆಳಗೆ … Read more

‘ವಿಐಎಸ್ಎಲ್‌ ವಿಚಾರ ಚುನಾವಣೆ ಗಿಮಿಕ್‌’, ಶಾಶ್ವತ ಕಾರ್ಯಕ್ರಮ ಪ್ರಕಟಿಸುವಂತೆ ಒತ್ತಾಯಿಸಿದ ಮಿನಿಸ್ಟರ್‌

Minister-Madhu-Bangarappa-and-Niketh-Raj-Mourya-in-Shimoga

SHIVAMOGGA LIVE | 5 AUGUST 2023 SHIMOGA : ವಿಐಎಸ್‌ಎಲ್‌ ಕಾರ್ಖಾನೆಯ (VISL) ಎಲ್ಲ ವಿಭಾಗಗಳನ್ನು ಶಾಶ್ವತವಾಗಿ ಪುನಾರಂಭ ಮಾಡಿದರೆ ಮಾತ್ರ ಅನುಕೂಲವಾಗಲಿದೆ. ಈಗಿನ ಬೆಳವಣಿಗೆ ಚುನಾವಣೆ ಗಿಮಿಕ್‌ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಟೀಕಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಮಧು ಬಂಗಾರಪ್ಪ, ಸಿದ್ದರಾಮಯ್ಯ ಅವರು ಐದು ವರ್ಷ ಮುಖ್ಯಮಂತ್ರಿ ಆಗಿದ್ದಾಗ ವಿಐಎಸ್‌ಎಲ್‌ ಬಂದ್‌ ಮಾಡುವುದಿಲ್ಲ ಎಂದಿದ್ದರು. ಆದರೆ ಈ ಹಿಂದೆ ಒಂದೆರಡು ಬಾರಿ ಇಲ್ಲಿಯ ಕೆಲವು ಜನಪ್ರತಿನಿಧಿಗಳು, ಸಂಸದರು ಕಾರ್ಖಾನೆ ಬಂದ್‌ … Read more

ಶಂಕರಘಟ್ಟದಲ್ಲಿ ಬೈಕ್‌, ಇನ್ನೋವಾ ಕಾರು ಅಪಘಾತ, ಯುವಕನಿಗೆ ಗಾಯ

Car-Bike-mishap-at-Shankaraghatta-in-Bhadravathi-taluk-of-Shimoga

SHIVAMOGGA LIVE | 3 AUGUST 2023 BHADRAVATHI : ಇನ್ನೋವಾ ಕಾರು ಮತ್ತು ಬೈಕ್‌ ಮಧ್ಯೆ ಅಪಘಾತ (Mishap) ಸಂಭವಿಸಿದ್ದು ಬೈಕ್‌ ಸವಾರನಿಗೆ ಗಾಯವಾಗಿದೆ. ಭದ್ರಾವತಿ ತಾಲೂಕು ಶಂಕರಘಟ್ಟ ಬಳಿ ಘಟನೆ ಸಂಭವಿಸಿದೆ. ಬೈಕ್‌ ಸವಾರ ಕುಮಾರ್‌ (22) ಗಾಯಗೊಂಡಿದ್ದಾನೆ. ಕೂಡಲೆ ಆತನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಕಾರು ತರೀಕೆರೆ ಕಡೆಯಿಂದ ಶಿವಮೊಗ್ಗ ಕಡೆಗೆ ತೆರಳುತ್ತಿತ್ತು. ಬೈಕ್‌ ಸವಾರ ದಿಢೀರ್‌ ಯು ಟರ್ನ್‌ ತೆಗೆದುಕೊಂಡಿದ್ದರಿಂದ ಅಪಘಾತ (Mishap) ಸಂಭವಿಸಿದೆ ಎಂದು ಆರೋಪಿಸಲಾಗಿದೆ. ಇದನ್ನೂ ಓದಿ … Read more