ಭದ್ರಾ ಜಲಾಶಯಕ್ಕೆ ಪ್ರವಾಸಿಗರ ದಂಡು, ಒಂಭತ್ತುವರೆ ಅಡಿಯಷ್ಟು ಮೇಲೇರಿದ ಗೇಟುಗಳು, ಇಲ್ಲಿದೆ ಫೋಟೊ ಆಲ್ಬಂ

150920 Bhadra Dam Lighting 1

ಶಿವಮೊಗ್ಗ ಲೈವ್.ಕಾಂ | BHADRAVATHI NEWS | 20 ಸೆಪ್ಟಂಬರ್ 2020 ಭದ್ರಾ ಜಲಾಶಯದ ಹೊರ ಹರಿವು ಇನ್ನು ಹೆಚ್ಚಳವಾಗುತ್ತಿದೆ. ಈಗ 60 ಸಾವಿರ ಕ್ಯೂಸೆಕ್ ನೀರು ಹೊರಬಿಡಲಾಗುತ್ತಿದೆ. ಜಲಾಶಯದ ನಾಲ್ಕು ಕ್ರಸ್ಟ್ ಗೇಟ್‍ಗಳನ್ನು ಸುಮಾರು ಒಂಭತ್ತುವರೆ ಅಡಿಯಷ್ಟು ಮೇಲೆತ್ತಲಾಗಿದೆ. ಜಲಾಶಯಕ್ಕೆ ಲೈಟಿಂಗ್ ಮೆರಗು ನಾಲ್ಕು ಕ್ರಸ್ಟ್ ಗೇಟ್ ಮೇಲೆ ಬಣ್ಣ ಬಣ್ಣದ ಲೈಟ್‍ ಅಳವಡಿಸಲಾಗಿದೆ. ಕತ್ತಲಾಗುತ್ತಿದ್ದಂತೆ ಜಲಾಶಯದ ಮೆರಗು ಹೆಚ್ಚಲಿದೆ. ಜಲಾಶಯದಿಂದ ಭಾರಿ ಪ್ರಮಾಣದ ನೀರು ಹೊರ ಬಿಡುತ್ತಿರುವುದು ಮತ್ತು ಲೈಟಿಂಗ್ ಕಣ್ತುಂಬಿಕೊಂಡು, ಫೋಟೊ ಕ್ಲಿಕ್ಕಿಸಿಕೊಳ್ಳಲು … Read more

ತೀರ್ಥಹಳ್ಳಿಯ ವಿವಿಧೆಡೆ ಜೋರು ಮಳೆ, ಉಡುಪಿ – ಆಗುಂಬೆ ರಸ್ತೆ ಮೇಲೆ ನಿಂತ ನೀರು, ತೋಟ, ಗದ್ದೆ ಜಲಾವೃತ

200920 Agumbe Heavy Rain 1

ಶಿವಮೊಗ್ಗ ಲೈವ್.ಕಾಂ | THIRTHAHALLI NEWS | 20 ಸೆಪ್ಟಂಬರ್ 2020 ತೀರ್ಥಹಳ್ಳಿ ತಾಲೂಕಿನ ವಿವಿಧೆಡೆ ನಿರಂತರ ಮಳೆಯಾಗುತ್ತಿದೆ. ಆಗುಂಬೆ ಭಾಗದಲ್ಲಿ ಎಡೆಬಿಡದೆ ಮಳೆ ಸುರಿಯುತ್ತಿದ್ದು, ಉಡುಪಿ ಮಾರ್ಗದಲ್ಲಿ ವಾಹನ ಸಂಚಾರಕ್ಕೆ ಸಮಸ್ಯೆಯಾಗಿದೆ. ಆಗುಂಬೆ ಭಾಗದಲ್ಲಿ ಮಳೆಯೋ ಮಳೆ ತಾಲೂಕಿನ ಅಗುಂಬೆ, ಮೇಗರವಳ್ಳಿ ಭಾಗದಲ್ಲಿ ನಿರಂತರ ಮಳೆಯಾಗುತ್ತಿದೆ. ಮಾಲತಿ ಮತ್ತು ಸೀತಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ತೋಟ, ಗದ್ದೆಗೆ ನದಿ ನೀರು ನುಗ್ಗಿದ್ದು, ರೈತರು ಆತಂಕಕ್ಕೀಡಾಗಿದ್ದಾರೆ. ರಸ್ತೆ ಮೇಲೆ ನಿಂತ ನೀರು ಸೋಮೇಶ್ವರ ಬಳಿ … Read more

ಮುಳುಗುವ ಹಂತಕ್ಕೆ ಭದ್ರಾವತಿ ಹೊಸ ಸೇತುವೆ, ಸಂಗಮೇಶ್ವರ ಮಂಟಪ ಜಲಾವೃತ

200920 Bhadravathi New Bridge in Bhadra River 1

ಶಿವಮೊಗ್ಗ ಲೈವ್.ಕಾಂ | BHADRAVATHI NEWS | 20 ಸೆಪ್ಟಂಬರ್ 2020 ಭದ್ರಾ ಜಲಾಶಯದಿಂದ 50 ಸಾವಿರ ಕ್ಯೂಸೆಕ್‍ಗಿಂತಲೂ ಹೆಚ್ಚು ನೀರು ಹೊರ ಬಿಡಲಾಗುತ್ತಿದೆ. ಹಾಗಾಗಿ ಭದ್ರಾವತಿಯ ಹೊಸ ಸೇತುವೆ ಮೇಲೆ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿದೆ. ಸೇತುವೆಯ ಎತ್ತರ ಕಡಿಮೆ ಇರುವುದರಿಂದ ಈ ಪ್ರಮಾಣದ ನೀರು ಹೊರ ಬರುತ್ತಿದ್ದಂತೆ ಮುಳುಗಡೆಯಾಗುತ್ತದೆ. ಹಾಗಾಗಿ ಸುರಕ್ಷತೆ ದೃಷ್ಟಿಯಿಂದ ಸೇತುವೆಯ ಎರಡು ಬದಿಯಲ್ಲೂ ಬ್ಯಾರಿಕೇಡ್ ಹಾಕಿ ಬಂದ್ ಮಾಡಲಾಗಿದೆ. ಸೇತುವೆ ಸಮೀಪ ಜನರು ತೆರಳದಂತೆ ನಿರ್ಬಂಧ ವಿಧಿಸಲಾಗಿದೆ. ಹಳೆ ಸೇತುವೆ ಮೇಲೆ … Read more

ತುಂಗಾ ಜಲಾಶಯದಿಂದ ಹೊರ ಹರಿವು ಹೆಚ್ಚಳ, ಮುಕ್ಕಾಲು ಮುಳುಗಿತು ಶಿವಮೊಗ್ಗದ ಮಂಟಪ

180620 Gajanur Tunga Dam Full Four Gates Opened 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 20 ಸೆಪ್ಟಂಬರ್ 2020 ಹಿನ್ನೀರು ಭಾಗದಲ್ಲಿ ಮಳೆ ಪ್ರಮಾಣ ಹೆಚ್ಚಳವಾದ ಹಿನ್ನೆಲೆ, ತುಂಗಾ ಜಲಾಶಯದ ಹೊರ ಹರಿವು ಏರಿಕೆಯಾಗಿದೆ. ಇವತ್ತು ತುಂಗಾ ಜಲಾಶಯದಿಂದ 32,340 ಕ್ಯೂಸೆಕ್ ನೀರು ಹೊರ ಬಿಡಲಾಗುತ್ತಿದೆ. ಹಾಗಾಗಿ ತುಂಗಾ ನದಿಯಲ್ಲಿ ಮತ್ತೊಮ್ಮೆ ನೀರಿನ ಹರಿವು ಹೆಚ್ಚಾಗಿದೆ. ಸದ್ಯ ಜಲಾಶಯಕ್ಕೆ 32,340 ಕ್ಯೂಸೆಕ್ ಒಳ ಹರಿವು ದಾಖಲಾಗಿದೆ. ಈ ಪೈಕಿ ಹೊಳೆಗೆ 30,882 ಕ್ಯೂಸೆಕ್ ಬಿಡಲಾಗುತ್ತಿದೆ. ತುಂಗಾ ಮೇಲ್ದಂಡೆ ಯೋಜನೆಗೆ 1207 ಕ್ಯೂಸೆಕ್, ಎಡದಂಡೆಗೆ 176 … Read more

ಭದ್ರಾ ಡ್ಯಾಂನಿಂದ ಭಾರಿ ಪ್ರಮಾಣದ ನೀರು ಹೊರಕ್ಕೆ, ಭದ್ರಾವತಿ ಹೊಸ ಸೇತುವೆ ಬಂದ್, ನದಿ ಪಾತ್ರದಲ್ಲಿ ಹೈ ಅಲರ್ಟ್

Bhadra-Dam-Water-Outflow

ಶಿವಮೊಗ್ಗ ಲೈವ್.ಕಾಂ | SHIMOGA JOBS NEWS | 20 ಸೆಪ್ಟಂಬರ್ 2020 ಭದ್ರಾ ಜಲಾಶಯದಿಂದ ನೀರಿನ ಹೊರ ಹರಿವು ಮತ್ತಷ್ಟು ಹೆಚ್ಚಳವಾಗಿದೆ. ಈಗ 55 ಸಾವಿರ ಕ್ಯೂಸೆಕ್‍ಗೂ ಹೆಚ್ಚು ನೀರು ಹೊರ ಬಿಡಲಾಗುತ್ತಿದೆ. ಇದರಿಂದ ಭದ್ರಾವತಿಯಲ್ಲಿ ನೆರೆ ಪರಿಸ್ಥಿತಿ ನಿರ್ಮಾಣವಾಗಿದೆ. ಗಂಟೆ ಗಂಟೆಗೂ ಹೆಚ್ಚಾದ ಹೊರ ಹರಿವು ಭದ್ರಾ ಜಲಾಶಯದಿಂದ ನೀರಿನ ಹೊರ ಹರಿವು ಗಂಟೆ ಗಂಟೆಗೂ ಹೆಚ್ಚಳವಾಗುತ್ತಿದೆ. ಈಗ 55 ಸಾವಿರ ಕ್ಯೂಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ. ಬೆಳಗ್ಗೆ ನೀರಿನ ಹೊರ ಹರಿವು 10 … Read more

ಸಾಗರ, ಹೊಸನಗರದಲ್ಲಿ RTO ಅಧಿಕಾರಿಗಳ ದಾಳಿ, ಲಾರಿಗೆ 5.27 ಲಕ್ಷ, ಜೆಸಿಬಿಗೆ 2 ಲಕ್ಷ ದಂಡ

SAGARA MAP GRAPHICS 1

ಶಿವಮೊಗ್ಗ ಲೈವ್.ಕಾಂ | SAGARA NEWS | 20 ಸೆಪ್ಟಂಬರ್ 2020 ತೆರಿಗೆ ಪಾವತಿಸದೆ ಸಂಚರಿಸುತ್ತಿದ್ದ ವಾಹನಗಳಿಗೆ ಸಾರಿಗೆ ಇಲಾಖೆ ಅಧಿಕಾರಿಗಳು ಭಾರಿ ದಂಡ ಹಾಕಿದ್ದಾರೆ. ಜೆಸಿಬಿಯೊಂದಕ್ಕೆ 2 ಲಕ್ಷ, ಲಾರಿಯೊಂದಕ್ಕೆ 5.27 ಲಕ್ಷದ ದಂಡ ವಿಧಿಸಲಾಗಿದೆ. ಪ್ರಾದೇಶಿಕ ಸಾರಿಗೆ ಅಧಿಕಾರಿ ಶಶಿಕಲಾ ಅವರ ಮಾರ್ಗದರ್ಶನದಲ್ಲಿ ಸಾಗರ ಮತ್ತು ಹೊಸನಗರದಲ್ಲಿ ಸಾರಿಗೆ ಅಧಿಕಾರಿಗಳು ದಾಳಿ ನಡೆಸಿ, ವಾಹನಗಳನ್ನು ವಶಕ್ಕೆ ಪಡೆದು, ದಂಡ ವಿಧಿಸಲಾಗಿದೆ. ರಿಪ್ಪನ್‍ಪೇಟೆಯಲ್ಲಿ ಜೆಸಿಬಿ ತಡೆದು ಪರಿಶೀಲಿಸಿದಾಗ ತೆರಿಗೆ ಪಾವತಿಸದಿರುವುದು ಕಂಡು ಬಂದಿದೆ. ಹಾಗಾಗಿ ಜೆಸಿಬಿಗೆ … Read more

ಭದ್ರಾ ಜಲಾಶಯದ ಹೊರ ಹರಿವು ದಿಢೀರ್ ಹೆಚ್ಚಳ, 30 ಸಾವಿರ ಕ್ಯೂಸೆಕ್ ನೀರು ಬಿಡುಗಡೆ

Bhadra-Dam-Water-Outflow

ಶಿವಮೊಗ್ಗ ಲೈವ್.ಕಾಂ | BHADRAVATHI NEWS | 20 ಸೆಪ್ಟಂಬರ್ 2020 ಹಿನ್ನೀರು ಭಾಗದಲ್ಲಿ ಭಾರಿ ಮಳೆಯಾಗುತ್ತಿರುವುದರಿಂದ ಭದ್ರಾ ಜಲಾಶಯಕ್ಕೆ ಒಳ ಹರಿವು ಹೆಚ್ಚಳವಾಗಿದೆ. ಈ ಹಿನ್ನೆಲೆಯಲ್ಲಿ 30 ಸಾವಿರ ಕ್ಯೂಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ ಎಂದು ಭದ್ರಾ ಜಲಾಶಯದ ಎಂಜಿನಿಯರ್‍ಗಳು ತಿಳಿಸಿದ್ದಾರೆ. 30 ಸಾವಿರ ಕ್ಯೂಸೆಕ್ ನೀರನ್ನು ಹೊರ ಬಿಡುತ್ತಿರುವುದರಿಂದ ನದಿ ಪಾತ್ರದ ಜನರು ಎಚ್ಚರ ವಹಿಸುವಂತೆ ಅಧಿಕಾರಿಗಳು ತಿಳಿಸಿದ್ದಾರೆ. ಗಂಟೆ ಗಂಟೆಗೂ ಹೆಚ್ಚಿತ್ತಿದೆ ಹೊರ ಹರಿವು ಎರಡು ಗಂಟೆ ಮೊದಲು ಭದ್ರಾ ಜಲಾಶಯದಿಂದ 10 … Read more

ಮೂವರು ಸಿಎಂಗಳು ಹಣ ಬಿಡುಗಡೆ ಮಾಡಿಲ್ಲ, ಚರಕ ಬಂದ್ ಆಗಲು ಸರ್ಕಾರದ ಇಚ್ಛಾಶಕ್ತಿ ಕೊರತೆಯೇ ಕಾರಣ

190920 Charaka Prasanna Press Meet 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 19 ಸೆಪ್ಟಂಬರ್ 2020 ಹೆಗ್ಗೋಡಿನ ಚರಕ ಸಂಸ್ಥೆಯು ಕಳೆದ ಒಂದು ತಿಂಗಳಿಂದ ಮುಚ್ಚಿದ್ದು ಅನುದಾನ ಬಿಡುಗಡೆ ಮಾಡುವಲ್ಲಿ ಸರ್ಕಾರದ ನಿರ್ಲಕ್ಷ್ಯವೆ ಇದಕ್ಕೆ ಕಾರಣ ಎಂದು ಚರಕ ಸಂಸ್ಥೆಯ ಸಂಸ್ಥಾಪಕ ಪ್ರಸನ್ನ ಆರೋಪಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರದ ವಿವಿಧ ಯೋಜನೆಗಳಿಂದ ನೇಕಾರಿಕೆಗೆ ಸಹಾಯಧನ ಸೇರಿದಂತೆ ಒಟ್ಟು ೨.೫ ಕೋಟಿ ರೂ. ಸರ್ಕಾರದಿಂದ ಮಂಜೂರಾಗಬೇಕಿದೆ. ಮುಖ್ಯಮಂತ್ರಿಗಳಾದ ಎಚ್.ಡಿ.ಕುಮಾರಸ್ವಾಮಿ, ಸಿದ್ದರಾಮಯ್ಯ ಹಾಗೂ ಈಗಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ನಮ್ಮ ಸಂಸ್ಥೆಗೆ ಹಣ … Read more

ಸಾಗರ ಎಂಎಲ್ಎ ಆಸ್ಪತ್ರೆಯಿಂದ ಬಿಡುಗಡೆ, ಮೂರು ವಾರ ವಿಶ್ರಾಂತಿ

Haratalu-Halappa

ಶಿವಮೊಗ್ಗ ಲೈವ್.ಕಾಂ | SAGARA NEWS | 16 ಸೆಪ್ಟಂಬರ್ 2020 ಅನಾರೋಗ್ಯದಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಸಾಗರ ಶಾಸಕ ಹರತಾಳು ಹಾಲಪ್ಪ ಗುಣವಾಗಿ, ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಕರೋನದಿಂದ ಗುಣವಾಗಿ ಹಿಂತಿರುಗಿದ ಬಳಿಕ ಹರತಾಳು ಹಾಲಪ್ಪ ಅವರಿಗೆ ಆರೋಗ್ಯ ಸಮಸ್ಯೆ ಉಂಟಾಗಿತ್ತು. ಹಾಗಾಗಿ ಅವರು ಪುನಃ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಬಳಿಕ ಹಾಲಪ್ಪ ಡಿಸ್ಚಾರ್ಜ್ ಆಗಿದ್ದಾರೆ. ವೈದ್ಯರ ಸೂಚನೆ ಮೇರೆಗೆ ಹರತಾಳು ಹಾಲಪ್ಪ ಅವರು ಮೂರು ವಾರ ವಿಶ್ರಾಂತಿ ಪಡೆಯುವುದಾಗಿ ಹರತಾಳು ಹಾಲಪ್ಪ ಅವರು ತಿಳಿಸಿದ್ದಾರೆ. … Read more

ಅಬಕಾರಿ ಇಲಾಖೆ ಅಧಿಕಾರಿಗಳ ದಾಳಿ, 20 ಸಾವಿರ ಮೌಲ್ಯದ ಗಾಂಜಾ ಗಿಡಗಳು ವಶಕ್ಕೆ

shivamogga graphics map

ಶಿವಮೊಗ್ಗ ಲೈವ್.ಕಾಂ | SHIMOGA NEWS | 16 ಸೆಪ್ಟಂಬರ್ 2020 ಬನ್ನಿಕೆರೆ ಗ್ರಾಮದಲ್ಲಿ ಅಕ್ರಮವಾಗಿ ಗಾಂಜಾ ಬೆಳೆದಿದ್ದ ಸ್ಥಳದ ಮೇಲೆ ಅಬಕಾರಿ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ, 20 ಸಾವಿರ ಮೌಲ್ಯದ ಗಾಂಜಾ ಗಿಡಗಳನ್ನು ವಶಕ್ಕೆ ಪಡೆಯಲಾಗಿದೆ. ಅಬಕಾರಿ ಉಪ ಆಯುಕ್ತ ಕ್ಯಾಪ್ಟನ್ ಅಜಿತ್ ಕುಮಾರ್ ನಿರ್ದೇಶನದ ಮೇರೆಗೆ ದಾಳಿ ಬನ್ನಿಕೆರೆ ಗ್ರಾಮದಲ್ಲಿ ಮೂರ್ತಿ ನಾಯ್ಕ ಅಲಿಯಾಸ್ ಮಾರುತಿ ನಾಯ್ಕ ಎಂಬಾತ ಬೆಳೆದಿದ್ದ ಗಾಂಜಾ ಗಿಡಗಳನ್ನು ವಶಕ್ಕ ಪಡೆಯಲಾಗಿದೆ. ಆರೋಪಿ ಮೂರ್ತಿ ನಾಯ್ಕ ಪರಾರಿಯಾಗಿದ್ದು, ಆರೋಪಿಯ … Read more