ಶುಂಠಿಗೆ ಸರಿಯಾದ ಬೆಲೆ ಸಿಗಲಿಲ್ಲ, ಸಾಲವು ತೀರಲಿಲ್ಲ, ಮನನೊಂದು ರೈತ ಆತ್ಮಹತ್ಯೆ

Farmer Suicide General Image 1

ಶಿವಮೊಗ್ಗ ಲೈವ್.ಕಾಂ | SHIKARIPURA CRIME NEWS | 21 FEBRUARY 2021 ಸಾಲ ಬಾಧೆಯಿಂದ ಮನನೊಂದು ಶಿಕಾರಿಪುರದ ರೈತರೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮನೆಯಲ್ಲಿ ಯಾರೂ ಇಲ್ಲದ ಸಂದರ್ಭ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದು ಬಂದಿದೆ. ಬಸವರಾಜಪ್ಪ (59) ಮೃತ ದುರ್ದೈವಿ. ಮತ್ತಿಕೋಟೆ ಗ್ರಾಮದಲ್ಲಿ ಘಟನೆ ಸಂಭವಿಸಿದೆ. ಇದೇ ಗ್ರಾಮದಲ್ಲಿ ಬಸವರಾಜಪ್ಪ ಅವರಿಗೆ 27 ಗುಂಟೆ ಜಮೀನಿದೆ. ಬೇರೆಯವರ ಜಮೀನು ಗುತ್ತಿಗೆ ಪಡೆದು ಶುಂಠಿ ಬೆಳೆದಿದ್ದರು. ಇದಕ್ಕಾಗಿ ಕೆನರಾ ಬ್ಯಾಂಕ್ ಮತ್ತು ಖಾಸಗಿಯಾಗಿಯೂ ಸಾಲ ಪಡೆದಿದ್ದರು. ಶುಂಠಿ ಬೆಲೆ … Read more

ಇವತ್ತು ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ, ಯಾವ ಗ್ರಾಮದಲ್ಲಿ ವಾಸ್ತವ್ಯ ಮಾಡಲಿದ್ದಾರೆ ಡಿಸಿ? ಏನೇನು ಕಾರ್ಯಕ್ರಮ ನಡೆಯುತ್ತೆ?

050720 DC Visit Various Places During Curfew 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 20 FEBRUARY 2021 ‘ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ’ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ  ಅವರ ತವರು ಕ್ಷೇತ್ರ ಶಿಕಾರಿಪುರದ ತಡಸನಹಳ್ಳಿ ಸಜ್ಜಾಗಿದೆ. ಇವತ್ತು ಬೆಳಗ್ಗೆ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಅವರು ತಡಸನಹಳ್ಳಿ ಗ್ರಾಮಕ್ಕೆ ತೆರಳಲಿದ್ದು, ಸಾಲು ಸಾಲು ಸಭೆಗಳನ್ನು ನಡೆಸಲಿದ್ದಾರೆ. ರಾತ್ರಿ ಅಲ್ಲಿಯೇ ವಾಸ್ತವ್ಯ ಮಾಡಲಿದ್ದಾರೆ. ಹೇಗಿರತ್ತೆ ಡಿಸಿ ನಡೆ ಕಾರ್ಯಕ್ರಮ? ಜಿಲ್ಲಾಧಿಕಾರಿ ಅವರೊಂದಿಗೆ ವಿವಿಧ ಇಲಾಖೆ ಅಧಿಕಾರಿಗಳು, ತಾಲೂಕು ಮಟ್ಟದ ಅಧಿಕಾರಿಗಳು ತಡಸನಹಳ್ಳಿಗೆ ಭೇಟಿ ನೀಡಲಿದ್ದಾರೆ. ಇಡೀ ದಿನ … Read more

ಪೆಟ್ರೋಲ್‌ ತುಂಬಿದ್ದ ಲಾರಿ ಪಲ್ಟಿ, ಮುಂಜಾಗ್ರತ ಕ್ರಮವಾಗಿ ಹೆದ್ದಾರಿ ಬಂದ್

170221 Petrol Tanker Accident Near Shikaripura 1

ಶಿವಮೊಗ್ಗ ಲೈವ್.ಕಾಂ | SHIRALAKOPPA NEWS | 17 FEBRUARY 2021 ಚಾಲಕನ ನಿಯಂತ್ರಣ ತಪ್ಪಿದ ಪೆಟ್ರೋಲ್ ತುಂಬಿದ ಲಾರಿಯೊಂದು ಹೆದ್ದಾರಿ ಪಕ್ಕದ ಗದ್ದೆಗೆ ಉರುಳಿದೆ. ಅಹಿತಕರ ಘಟನೆ ಸಂಭವಿಸುವುದನ್ನು ತಡೆಯಲು ಪೊಲೀಸರು ಹೆದ್ದಾರಿಯಲ್ಲಿ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿತ್ತು. ಶಿಕಾರಿಪುರದ ಉಡುಗಣಿ ಗ್ರಾಮದ ಸಮೀಪ ಮಂಗಳವಾರ ರಾತ್ರಿ ಘಟನೆ ಸಂಭವಿಸಿದೆ. ಟ್ಯಾಂಕರ್‍ ಪಲ್ಟಿಯಾಗಿ ತೈಲ ಸೋರಿಕೆಯಾಗಿತ್ತು. ಹಾಗಾಗಿ ಮುಂಜಾಗ್ರತಾ ಕ್ರಮವಾಗಿ ಶಿಕಾರಿಪುರ – ಶಿರಾಳಕೊಪ್ಪ  ನಡುವೆ ಹೆದ್ದಾರಿಯಲ್ಲಿ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿತ್ತು. ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿದ್ದರಿಂದ … Read more

ಶಿರಾಳಕೊಪ್ಪದಲ್ಲಿ ದುರ್ಗಾದೇವಿ ಜಾತ್ರೆ ಜೋರು, ಉಡಿ ತುಂಬಲು ಜನವೋ ಜನ

170221 Shiralakoppa Marikamba Jathre 1

ಶಿವಮೊಗ್ಗ ಲೈವ್.ಕಾಂ | SHIRALAKOPPA NEWS | 17 FEBRUARY 2021 ಶಿರಾಳಕೊಪ್ಪದ ದುರ್ಗಾದೇವಿ ಜಾತ್ರೆ ಹಿನ್ನೆಲೆ ತಾಯಿಗೆ ಉಡಿ ತುಂಬುವ ಪದ್ಧತಿ ನಡೆಯಿತು. ದೊಡ್ಡ ಸಂಖ್ಯೆಯಲ್ಲಿ ಆಗಮಿಸಿದ ಭಕ್ತರು, ಉಡಿ ತುಂಬಿ ದೇವಿಯ ಆಶೀರ್ವಾದ ಪಡೆದರು. ಉಡಿ ತುಂಬಿದರೆ ದುರ್ಗಾದೇವಿಯ ಸಕಲ ಸಂಕಷ್ಟಗಳನ್ನು ನಿವಾರಿಸುತ್ತಾಳೆ ಎಂಬ ನಂಬಿಕೆ ಇದೆ. ಹಾಗಾಗಿ ಶಿರಾಳಕೊಪ್ಪ ಪಟ್ಟಣ ಸೇರಿದಂತೆ ವಿವಿಧೆಡೆಯಿಂದ ಭಕ್ತರು ಆಗಮಿಸಿದ್ದರು. ಉಡಿ ತುಂಬಲು ದೊಡ್ಡ ಕ್ಯೂ ಇತ್ತು. ಜಾತ್ರೆ ಅಂಗವಾಗಿ ದೇವಸ್ಥಾನದಲ್ಲಿ ವಿಶೇಷ ಪೂಜೆ, ಹೋಮ ನೆರವೇರಿಸಲಾಯಿತು. … Read more

SHIRALAKOPPA | ಪಟ್ಟಣ ಪಂಚಾಯಿತಿಯ ಹೊಸ ಟ್ರಾಕ್ಟರ್ ಕದ್ದವರು ಅರೆಸ್ಟ್, ಯಾರನ್ನೆಲ್ಲ ಬಂಧಿಸಲಾಗಿದೆ?

prison hand cuff image

ಶಿವಮೊಗ್ಗ ಲೈವ್.ಕಾಂ | SHIKARIPURA NEWS | 11 FEBRUARY 2021 ಶಿರಾಳಕೊಪ್ಪ ಪಟ್ಟಣ ಪಂಚಾಯಿತಿಯ ಹೊಸ ಟ್ರಾಕ್ಟರ್ ಎಂಜಿನ್ ಕಳ್ಳತನ ಮಾಡಿದ್ದ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಮೂವರು ಶಿಕಾರಿಪುರಕ್ಕೆ ಸೇರಿದವರು. ಶಿಕಾರಿಪುರದ ಮಂಜುನಾಥ್ (29), ಹರೀಶ್ (21). ನಾಗಭೂಷಣ್ (33) ಬಂಧಿತರು. ಇವರನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ಇದನ್ನೂ ಓದಿ | SHIRALAKOPPA | ಪಟ್ಟಣ ಪಂಚಾಯಿತಿಗೆ ಸೇರಿದ ಹೊಚ್ಚ ಹೊಸ ಟ್ರಾಕ್ಟರ್ ರಾತ್ರೋರಾತ್ರಿ ನಾಪತ್ತೆ ಜನವರಿ 30ರಂದು ಶಿರಾಳಕೊಪ್ಪದ ಜಲ ಶುದ್ಧೀಕರಣ ಘಟಕದ ಬಳಿ ನಿಲ್ಲಿಸಿದ್ದ … Read more

SHIKARIPURA | ಕಳ್ಳಭಟ್ಟಿ ಅಡ್ಡೆ ಮೇಲೆ ಅಬಕಾರಿ ಇಲಾಖೆ ಅಧಿಕಾರಿಗಳ ದಾಳಿ, ಬೆಲ್ಲದ ಕೊಳೆ ವಶಕ್ಕೆ

040221 Kallabatti Seized at Shikaripura 1

ಶಿವಮೊಗ್ಗ ಲೈವ್.ಕಾಂ | SHIKARIPURA NEWS | 04 FEBRUARY 2021 ಕಳ್ಳಭಟ್ಟಿ ತಯಾರಿಸುತ್ತಿದ್ದ ಅಡ್ಡೆ ಮೇಲೆ ಅಬಕಾರಿ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. 315 ಲೀಟರ್‍ ಬೆಲ್ಲದ ಕೊಳೆಯನ್ನು ವಶಕ್ಕೆ ಪಡೆದಿದ್ದಾರೆ. ಶಿಕಾರಿಪುರದ ಚಿಕ್ಕಮಾಗಡಿ ತಾಂಡ ಸಮೀಪದ ಜವಳಕಟ್ಟೆ ಕೆರೆ ಮತ್ತು ಕರೇಕಟ್ಟೆ ಕೆರೆಯ ದಡದಲ್ಲಿ ಕಳ್ಳಭಟ್ಟಿ ತಯಾರಿ ಮಾಡಲಾಗುತ್ತಿತ್ತು. ಖಚಿತ ಮಾಹಿತಿ ಮೇರೆಗೆ  ಅಬಕಾರಿ ಇಲಾಖೆ ಅಧಿಕಾರಿಗಳು ಎರಡು ಕಡೆ ದಾಳಿ ನಡೆಸಿದ್ದರು. ಇದನ್ನೂ ಓದಿ | ಇದು ಸಣ್ಣ ಸಾಧನೆಯಲ್ಲ, ಇದಕ್ಕೆಲ್ಲ ನೀವೆ ಕಾರಣ, … Read more

SHIRALAKOPPA | ಪಟ್ಟಣ ಪಂಚಾಯಿತಿಗೆ ಸೇರಿದ ಹೊಚ್ಚ ಹೊಸ ಟ್ರಾಕ್ಟರ್ ರಾತ್ರೋರಾತ್ರಿ ನಾಪತ್ತೆ

143879629 1321328578228559 109114340272215003 n 1

ಶಿವಮೊಗ್ಗ ಲೈವ್.ಕಾಂ | SHIRALAKOPPA NEWS | 03 FEBRUARY 2021 ಶಿರಾಳಕೊಪ್ಪ ಪಟ್ಟಣ ಪಂಚಾಯಿತಿಗೆ ಸೇರಿದ್ದ ಹೊಚ್ಚ ಹೊಸ ಟ್ರಾಕ್ಟರ್ ಕಳ್ಳತನವಾಗಿದೆ. ಟ್ರಾಕ್ಟರ್‍ಗೆ ಇನ್ನೂ ನೋಂದಣಿ ಕೂಡ ಆಗಿರಲಿಲ್ಲ. ಹೇಗಾಯ್ತು ಕಳ್ಳತನ? ಘನ ತ್ಯಾಜ್ಯ ನಿರ್ವಹಣೆಗೆ ಹೊಸದಾಗಿ ಟ್ರಾಕ್ಟರ್‍ಗಳನ್ನು ಖರೀದಿಸಲಾಗಿತ್ತು. ಪಟ್ಟಣದ ಸರ್ಕಾರಿ ಆಸ್ಪತ್ರೆ ಹಿಂಭಾಗದಲ್ಲಿ ಇರುವ ಪಟ್ಟಣ ಪಂಚಾಯಿತಿಯ ಜಲ ಶುದ್ಧೀಕರಣ ಘಟಕದ ಆವರಣದಲ್ಲಿ ಅದನ್ನು ನಿಲ್ಲಿಸಲಾಗಿತ್ತು. ಜನವರಿ 30ರ ರಾತ್ರಿ ಟ್ರಾಕ್ಟರ್ ನಾಪತ್ತೆಯಾಗಿದೆ. ನೋಂದಣಿಯೇ ಆಗಿರಲಿಲ್ಲ ಪಟ್ಟಣ ಪಂಚಾಯಿತಿಗಾಗಿ ಇತ್ತೀಚೆಗಷ್ಟೆ 5.50 ಲಕ್ಷ … Read more

SHIKARIPURA | 43 ಗ್ರಾಮ ಪಂಚಾಯಿತಿಗಳ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದ ಮೀಸಲಾತಿ ಪ್ರಕಟ

SHIKARIPURA MAP GRAPHICS 1

ಶಿವಮೊಗ್ಗ ಲೈವ್.ಕಾಂ | SHIKARIPURA NEWS | 02 FEBRUARY 2021 ಶಿಕಾರಿಪುರ ತಾಲೂಕಿನ ಗ್ರಾಮ ಪಂಚಾಯಿತಿಗಳ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ  ಇವತ್ತು ಮೀಸಲಾತಿ ಪ್ರಕಟಿಸಲಾಗಿದೆ. ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಅವರು ಶಿಕಾರಿಪುರದಲ್ಲಿ ಅಧಿಕಾರಿಗಳ ಸಭೆ ನಡೆಸಿ, 43 ಗ್ರಾಮ ಪಂಚಾಯಿತಿಗಳ ಮೀಸಲಾಯಿತಿ ಪ್ರಕಟಿಸಿದರು. ಮೀಸಲಾತಿ ಏನು? ಕಾಗಿನಲ್ಲಿ ಗ್ರಾಮ ಪಂಚಾಯಿತಿ – ಅಧ್ಯಕ್ಷ ಪ್ರವರ್ಗ ಎ,  ಉಪಾಧ್ಯಕ್ಷ ಸಾಮಾನ್ಯ ಮಹಿಳೆ, ಹಿತ್ತಲ ಅಧ್ಯಕ್ಷ ಪ್ರವರ್ಗ ಎ, ಉಪಾಧ್ಯಕ್ಷ ಸಾಮಾನ್ಯ ಮಹಿಳೆ, ಕೊರಟೆಗೆರೆ ಪ್ರವರ್ಗ ಎ, ಸಾಮಾನ್ಯ ಮಹಿಳೆ, … Read more

ಶಾರೂಖ್ ಸೇರಿ ಇಬ್ಬರು ಅರೆಸ್ಟ್, ಮೂರು ಲಕ್ಷ ಮೌಲ್ಯದ ಬೈಕ್ ವಶಕ್ಕೆ, ಎಲ್ಲೆಲ್ಲಿ ಬೈಕ್ ಕದಿದ್ದರು?

050121 Shiralakoppa Bike Thief Arrested 1

ಈಗ ಬಟ್ಟೆ ಒಗೆಯೋದು ಬಹಳ ಸುಲಭ, ಹೇಗದು? | ವಿಡಿಯೋಗಾಗಿ ಕ್ಲಿಕ್ ಮಾಡಿ ಶಿವಮೊಗ್ಗ ಲೈವ್.ಕಾಂ | SHIKARIPURA NEWS | 05 JANUARY 2021 ಲಕ್ಷಾಂತರ ಮೌಲ್ಯದ ಬೈಕ್‍ಗಳ ಕಳ್ಳತನ ಮಾಡಿದ್ದ ಖದೀಮರು ಪೊಲೀಸರ ಬಲೆಗೆ ಬಿದಿದ್ದಾರೆ. ಶಿರಾಳಕೊಪ್ಪ ಪೊಲೀಸರು ಕಾರ್ಯಾಚರಣೆ ನಡೆಸಿ ಇಬ್ಬರನ್ನು ಅರೆಸ್ಟ್ ಮಾಡಿದ್ದಾರೆ. ಶಿರಾಳಕೊಪ್ಪದ ದಾದಾಪೀರ್ ಅಲಿಯಾಸ್ ದಾದು (30) ಮತ್ತು ಜಮೀರ್ ಅಹಮದ್ ಅಲಿಯಾಸ್ ಶಾರೂಖ್ (27) ಬಂಧಿತರು. ಯಾವೆಲ್ಲ ಕೇಸ್‍ ದಾಖಲಾಗಿದೆ? ಶಿರಾಳಕೊಪ್ಪ ಪೊಲೀಸ್ ಠಾನೆ ವ್ಯಾಪ್ತಿಯಲ್ಲಿ 2020ರಲ್ಲಿ … Read more

ಹೊಸ ವರ್ಷಾಚರಣೆ ಕೇಕ್ ಕಟ್ ಮಾಡೋ ವಿಚಾರದಲ್ಲಿ ಕಿರಿಕ್, ಯುವಕನ ಮರ್ಡರ್

police jeep

ಶಿವಮೊಗ್ಗ ಲೈವ್.ಕಾಂ | SHIKARIPURA NEWS | 2 ಜನವರಿ 2021 ಹೊಸ ವರ್ಷಾಚರಣೆ ಕೇಕ್ ಕಟ್ ಮಾಡುವ ವಿಚಾರಕ್ಕೆ ನಡೆದ ಗಲಾಟೆಯಲ್ಲಿ ಯುವಕನೊಬ್ಬನ ಹತ್ಯೆ ಮಾಡಲಾಗಿದೆ. ಮನೋಜ್ (22) ಮೃತ ದುರ್ದೈವಿ. ಈತ ಶಿಕಾರಿಪುರದ ಆಶ್ರಯ ಬಡಾವಣೆಯ ನಿವಾಸಿ. ಇದೆ ಬಡಾವಣೆಯ ಇಸಾಕ್ ಮತ್ತು ಆತನ ಸ್ನೇಹಿತರು ಮನೋಜ್‌ನ ಹತ್ಯೆ ಮಾಡಿದ್ದಾರೆ. ಕೇಕ್ ಕಟ್ ವಿಚಾರದಲ್ಲಿ ಕಿರಿಕ್ ಹೊಸ ವರ್ಷಾಚರಣೆಗೆ ಕೇಕ್ ಮಾಡುವ ವಿಚಾರದಲ್ಲಿ ಮನೋಜ್ ಮತ್ತು ಇಸಾಕ್ ನಡುವೆ ಕಿರಿಕ್ ಆಗಿತ್ತು. ಇದೆ ವಿಚಾರವಾಗಿ … Read more