ಹೊಸ ವರ್ಷಾಚರಣೆ ಕೇಕ್ ಕಟ್ ಮಾಡೋ ವಿಚಾರದಲ್ಲಿ ಕಿರಿಕ್, ಯುವಕನ ಮರ್ಡರ್

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ
NEWS HIGHLIGHTS
ಶಿವಮೊಗ್ಗ ಲೈವ್.ಕಾಂ | SHIKARIPURA NEWS | 2 ಜನವರಿ 2021
➤ ಸುದ್ದಿಯ ಮುಂದಿನ 4 ಪ್ಯಾರಾಗಳು ಕೆಳಗಿವೆ.

ಹೊಸ ವರ್ಷಾಚರಣೆ ಕೇಕ್ ಕಟ್ ಮಾಡುವ ವಿಚಾರಕ್ಕೆ ನಡೆದ ಗಲಾಟೆಯಲ್ಲಿ ಯುವಕನೊಬ್ಬನ ಹತ್ಯೆ ಮಾಡಲಾಗಿದೆ.

ಮನೋಜ್ (22) ಮೃತ ದುರ್ದೈವಿ. ಈತ ಶಿಕಾರಿಪುರದ ಆಶ್ರಯ ಬಡಾವಣೆಯ ನಿವಾಸಿ. ಇದೆ ಬಡಾವಣೆಯ ಇಸಾಕ್ ಮತ್ತು ಆತನ ಸ್ನೇಹಿತರು ಮನೋಜ್‌ನ ಹತ್ಯೆ ಮಾಡಿದ್ದಾರೆ.

ಕೇಕ್ ಕಟ್ ವಿಚಾರದಲ್ಲಿ ಕಿರಿಕ್

ಹೊಸ ವರ್ಷಾಚರಣೆಗೆ ಕೇಕ್ ಮಾಡುವ ವಿಚಾರದಲ್ಲಿ ಮನೋಜ್ ಮತ್ತು ಇಸಾಕ್ ನಡುವೆ ಕಿರಿಕ್ ಆಗಿತ್ತು. ಇದೆ ವಿಚಾರವಾಗಿ ಮನೋಜ್‌ನನ್ನು ಹತ್ಯೆ ಮಾಡಲಾಗಿದೆ. ಘಟನೆ ಸಂಬಂಧ ಇಸಾಕ್‌ನನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿದು ಬಂದಿದೆ. ಇತರೆ ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

ಶಿಕಾರಿಪುರ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Comment