ಚೋರಡಿ ಅಪಘಾತ ಕೇಸ್‌, ಮೃತರ ಮನೆಗೆ ವಿಜಯೇಂದ್ರ ಭೇಟಿ, ಗಾಯಾಳುಗಳ ಪರಿಸ್ಥಿತಿ ಹೇಗಿದೆ?

BY-Vijayendra-Visit-deceased-houses-of-choradi-mishap

SHIVAMOGGA LIVE NEWS | 15 MAY 2023 SHIMOGA : ಚೋರಡಿ ಸಮೀಪ ಖಾಸಗಿ ಬಸ್‌ಗಳು (BUS) ಡಿಕ್ಕಿಯಾಗಿ ಗಾಯಗೊಂಡಿದ್ದ ಬಹುತೇಕರು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇತ್ತ ಅಪಘಾತದಲ್ಲಿ ಮೃತಪಟ್ಟವರ ಮನೆಗೆ ಶಿಕಾರಿಪುರ ಶಾಸಕ ಬಿ.ವೈ.ವಿಜಯೇಂದ್ರ ಭೇಟಿ ನೀಡಿ, ಕುಟುಂಬದವರಿಗೆ ಸಾಂತ್ವನ ಹೇಳಿದರು. ಮೇ 11ರಂದು ಶಿವಮೊಗ್ಗ ತಾಲೂಕು ಚೋರಡಿ ಸಮೀಪ ಎರಡು ಖಾಸಗಿ ಬಸ್‌ಗಳು (BUS) ಡಿಕ್ಕಿಯಾಗಿತ್ತು. ಅದೇ ದಿನ ಶಿಕಾರಿಪುರ ತಾಲೂಕು ಈಸೂರು ಗ್ರಾಮದ ಅರುಣ್‌ ಕುಮಾರ್‌ (40) ಮತ್ತು ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ … Read more

ಉಂಬ್ಳೆಬೈಲು ಸಮೀಪ ಬೈಕ್‌, ಬೊಲೇರೋ ಮುಖಾಮುಖಿ ಡಿಕ್ಕಿ

ACCIDENT-NEWS-GENERAL-IMAGE.

SHIVAMOGGA LIVE NEWS | 15 MAY 2023 SHIMOGA : ಬೊಲೇರೋ ವಾಹನ ಡಿಕ್ಕಿಯಾಗಿ ಬೈಕ್‌ ಸವಾರ ಗಂಭೀರವಾಗಿ ಗಾಯಗೊಂಡಿದ್ದಾರೆ. ಶಿವಮೊಗ್ಗದ ಸರ್ಜಿ ಆಸ್ಪತ್ರೆಯಲ್ಲಿ (Hospital) ಬೈಕ್‌ ಸವಾರನಿಗೆ ಶಸ್ತ್ರಚಿಕಿತ್ಸೆ ನಡೆಸಲಾಯಿತು. ಇದನ್ನೂ ಓದಿ – ಆಯನೂರು ಬಳಿ ಅಪಘಾತ, ಯುವಕನ ಪಾಲಿಗೆ ಯಮ ಸ್ವರೂಪಿಯಾದ ಆಂಬುಲೆನ್ಸ್‌ ಶಿವಮೊಗ್ಗದ ಯೋಗರಾಜ್‌ (32) ಗಾಯಗೊಂಡಿದ್ದಾರೆ. ಉಂಬ್ಳೆಬೈಲು ಲಿಂಗಾಪುರದ ಬಳಿ ಘಟನೆ ಸಂಭವಿಸಿದೆ. ಎನ್‌.ಆರ್.‌ಪುರ ಕಡೆಯಿಂದ ಬಂದ ಬೊಲೇರೋ ವಾಹನ, ಎದುರಿನಿಂದ ಬರುತ್ತಿದ್ದ ಯೋಗರಾಜ್‌ ಅವರ ಬೈಕ್‌ಗೆ ಡಿಕ್ಕಿ ಹೊಡದಿದೆ. … Read more

ರಸ್ತೆ ಬದಿ ನಡೆದು ಹೋಗುತ್ತಿದ್ದ ವ್ಯಕ್ತಿಗೆ ಹಿಂಬದಿಯಿಂದ ಬಂದು ಗುದ್ದಿದ ಬೈಕ್

crime name image

SHIVAMOGGA LIVE NEWS | 15 MAY 2023 SHIMOGA : ರಸ್ತೆ ಬದಿಯಲ್ಲಿ ನಡೆದು ಹೋಗುತ್ತಿದ್ದ ವ್ಯಕ್ತಿಗೆ ವೇಗವಾಗಿ ಬಂದ ಬೈಕ್‌ (Bike) ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ಗಾಯಾಳುವನ್ನು ಸುಬ್ಬಯ್ಯ ಆಸ್ಪತ್ರೆಗೆ ದಾಖಲು ಮಾಡಿ, ಚಿಕಿತ್ಸೆ ಕೊಡಲಾಗಿದೆ. ಇದನ್ನೂ ಓದಿ – ಶಿವಮೊಗ್ಗದ ಸ್ನೇಕ್‌ ಕಿರಣ್‌ ಆಸ್ಪತ್ರೆಗೆ ದಾಖಲು, ಐಸಿಯುನಲ್ಲಿ ಚಿಕಿತ್ಸೆ ಹೊಳೆಹನಸವಾಡಿ ನಿವಾಸಿ ಆರ್.ಸಿ.ಮಂಜುನಾಥ್‌ (34) ಗಾಯಾಳು. ರಾತ್ರಿ 10.30ರ ಹೊತ್ತಿಗೆ  ಹೊಳೆಬೆನವಳ್ಳಿ ಕ್ಯಾಂಪಿನಲ್ಲಿರುವ ಅಂಗಡಿಯೊಂದಕ್ಕೆ ಹೋಗಿದ್ದರು. ಮರಳಿ ಮನೆಗೆ ರಸ್ತೆ ಬದಿಯಲ್ಲಿ ನಡೆದು ಬರುವಾಗ … Read more

ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ವ್ಯಕ್ತಿಯ ಮೃತದೇಹ ಪತ್ತೆ

Crime-News-General-Image

SHIVAMOGGA LIVE NEWS | 15 MAY 2023 SHIMOGA : ಮನೆಯಲ್ಲಿ ನೇಣು ಬಿಗಿದ (hanging) ಸ್ಥಿತಿಯಲ್ಲಿ ವ್ಯಕ್ತಿಯೊಬ್ಬರ ಮೃತದೇಹ ಪತ್ತೆಯಾಗಿದೆ. ಮೃತನನ್ನು ಸೋಮಶೇಖರ್‌ (41) ಎಂದು ಗುರುತಿಸಲಾಗಿದೆ. ಶಿವಮೊಗ್ಗ ತಾಲೂಕು ಸಿದ್ದರಹಳ್ಳಿಯ ತನ್ನ ಮನೆಯಲ್ಲಿ ಸೋಮಶೇಖರ್‌ ಭಾನುವಾರ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಇದನ್ನೂ ಓದಿ – ಆಯನೂರು ಬಳಿ ಅಪಘಾತ, ಯುವಕನ ಪಾಲಿಗೆ ಯಮ ಸ್ವರೂಪಿಯಾದ ಆಂಬುಲೆನ್ಸ್‌ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ತುಂಗಾ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು … Read more

ಆಯನೂರು ಬಳಿ ಅಪಘಾತ, ಯುವಕನ ಪಾಲಿಗೆ ಯಮ ಸ್ವರೂಪಿಯಾದ ಆಂಬುಲೆನ್ಸ್‌

Ambulance-hits-bike-at-ayanuru

SHIVAMOGGA LIVE NEWS | 14 MAY 2023 SHIMOGA : ಬೈಕ್‌ಗೆ ಆಂಬುಲೆನ್ಸ್‌ (Ambulance) ಡಿಕ್ಕಿಯಾಗಿ ಯುವಕ ಮೃತಪಟ್ಟಿದ್ದಾನೆ. ಶಿವಮೊಗ್ಗದ ಆಯನೂರಿನ ಚನ್ನಳ್ಳಿ ಕ್ರಾಸ್‌ ಬಳಿ ಘಟನೆ ಸಂಭವಿಸಿದೆ. WATCH VIDEO ಬೆಳಗುತ್ತಿಯ ಪುನೀತ್‌ ಎಂಬಾತ ಮೃತ ವ್ಯಕ್ತಿ. ಪುನೀತ್‌ ಬೈಕಿನಲ್ಲಿ ಶಿವಮೊಗ್ಗದಿಂದ ಬೆಳಗುತ್ತಿ ಕಡೆಗೆ ತೆರಳುತ್ತಿದ್ದರು. ಸಾಗರದಿಂದ ಶಿವಮೊಗ್ಗಕ್ಕೆ ಬರುತ್ತಿದ್ದ ಆಂಬುಲೆನ್ಸ್‌ (Ambulance) ಪುನಿತ್‌ ಬೈಕಿಗೆ ಡಿಕ್ಕಿ ಹೊಡೆದಿದೆ. ಗಂಭೀರ ಗಾಯಗೊಂಡಿದ್ದ ಪುನಿತ್‌ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನೆಯಲ್ಲಿ ಬೈಕ್‌ ನಜ್ಜುಗುಜ್ಜಾಗಿದೆ. ಕುಂಸಿ ಪೊಲೀಸ್‌ ಠಾಣೆ … Read more

ಚೋರಡಿಯಲ್ಲಿ ಭೀಕರ ಅಪಘಾತ ಕೇಸ್‌, ಮೃತರ ಗುರುತು ಪತ್ತೆ, ಮೆಗ್ಗಾನ್‌ಗೆ ದಾಖಲಾದ ಗಾಯಾಳುಗಳೆಷ್ಟು?

Collision-Between-bUses-at-Choradi-in-Shimoga

SHIVAMOGGA LIVE NEWS | 12 MAY 2023 SHIMOGA : ಚೋರಡಿಯಲ್ಲಿ ಬಸ್ಸುಗಳು ಮುಖಾಮುಖಿ ಡಿಕ್ಕಿಯಾಗಿ ಇಬ್ಬರು ಮೃತಪಟ್ಟಿದ್ದಾರೆ. ಮೃತರ ಗುರುತು (Identity) ಪತ್ತೆಯಾಗಿದೆ. ಶಿಕಾರಿಪುರದಿಂದ ಶಿವಮೊಗ್ಗಕ್ಕೆ ತೆರಳುತ್ತಿದ್ದ ಕಾಳಪ್ಪ ಬಸ್ಸಿನ ಚಾಲಕ, ಶಿಕಾರಿಪುರ ತಾಲೂಕು ಗಾಮ ಗ್ರಾಮದ ಅರುಣ್‌ ಕುಮಾರ್‌ (40) ಮತ್ತು ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ತಿಪ್ಪೇಸ್ವಾಮಿ (50) ಮೃತರು. WATCH VIDEO ಅಪಘಾತದ ಬಳಿಕ ಶಿವಮೊಗ್ಗದ ಮೆಗ್ಗಾನ್‌ ಆಸ್ಪತ್ರೆಗೆ 34 ಮಂದಿ ದಾಖಲಾಗಿದ್ದಾರೆ. ಕೆಲವರಿಗೆ ಗಾಯಗಳಾಗಿವೆ. ನಾಲ್ವರಿಗೆ ಗಂಭೀರ ಸ್ವರೂಪದ … Read more

ಚೋರಡಿ ಅಪಘಾತ ಕೇಸ್‌, ಆಸ್ಪತ್ರೆಗೆ ಸಂಸದ, ಡಿಸಿ, ಎಸ್‌ಪಿ, ಅಭ್ಯರ್ಥಿಗಳು ದೌಡು, ಯಾರೆಲ್ಲ ಏನೇನು ಹೇಳಿದರು?

BY-Raghavendra-BY-Vijayendra-Visit-mc-Gann-Hospital

SHIVAMOGGA LIVE NEWS | 12 MAY 2023 SHIMOGA : ಚೋರಡಿಯಲ್ಲಿ ಭೀಕರ ಅಪಘಾತದ (Mishap) ಮಾಹಿತಿ ತಿಳಿಯುತ್ತಿದ್ದಂತೆ ಸಂಸದ ಬಿ.ವೈ.ರಾಘವೇಂದ್ರ, ಶಿಕಾರಿಪುರದ ಬಿಜೆಪಿ ಅಭ್ಯರ್ಥಿ ಬಿ.ವೈ.ವಿಜಯೇಂದ್ರ, ಜಿಲ್ಲಾಧಿಕಾರಿ ಡಾ.ಸೆಲ್ವಮಣಿ, ಜಿಲ್ಲಾ ರಕ್ಷಣಾಧಿಕಾರಿ ಮಿಥುನ್‌ ಕುಮಾರ್‌ ಅವರು ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳಿಂದ ಘಟನೆ ಕುರಿತು ಮಾಹಿತಿ ಪಡೆದರು. ಸಂಸದ ಬಿ.ವೈ.ರಾಘವೇಂದ್ರ ಮತ್ತು ಶಿಕಾರಿಪುರದ ಬಿಜೆಪಿ ಅಭ್ಯರ್ಥಿ ಬಿ.ವೈ.ವಿಜಯೇಂದ್ರ ಅವರು ಶಿವಮೊಗ್ಗದ ಮೆಗ್ಗಾನ್‌ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳಿಂದ ಘಟನೆಯ ಮಾಹಿತಿ ಪಡೆದು, ಧೈರ್ಯ ಹೇಳಿದರು. … Read more

ಚೋರಡಿ ಬಳಿ ಭೀಕರ ಅಪಘಾತ, ಪ್ರತ್ಯಕ್ಷದರ್ಶಿ ಹೇಳಿದ್ದೇನು? ಹೇಗಾಯ್ತ ಆಕ್ಸಿಡೆಂಟ್‌?

Bus-Collision-injured-in-Mc-Gann-Hospital.

SHIVAMOGGA LIVE NEWS | 12 MAY 2023 SHIMOGA : ಚೋರಡಿಯಲ್ಲಿ ಖಾಸಗಿ ಬಸ್ಸುಗಳ ನಡುವೆ ಭೀಕರ ಅಪಘಾತ (Head On) ಸಂಭವಿಸಿ ಇಬ್ಬರು ಮೃತಪಟ್ಟಿದ್ದಾರೆ. ಘಟನೆ ಸಂಬಂಧ ಬಸ್‌ ಚಾಲಕನ ಪರಿಚಿತ ಮತ್ತು ಗಾಯಾಳುವೊಬ್ಬರು ಘಟನೆ ಕುರಿತು ವಿವರಿಸಿದ್ದಾರೆ. ಬಸ್‌ ಚಾಲಕ ಅತಿ ವೇಗವಾಗಿ ಚಾಲನೆ ಮಾಡಿದ್ದೆ ಘಟನೆಗೆ ಕಾರಣ ಎಂದು ತಿಳಿಸಿದ್ದಾರೆ. ಶಿಕಾರಿಪುರದಿಂದ ಶಿವಮೊಗ್ಗಕ್ಕೆ ಬರುತ್ತಿದ್ದ ಖಾಸಗಿ ಬಸ್‌ನಲ್ಲಿದ್ದ ಪ್ರಯಾಣಿಕ ಕಿಟ್ಟಿ ಘಟನೆಯ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ – ಚೋರಡಿ ಅಪಘಾತ ಕೇಸ್‌, … Read more

ಚೋರಡಿ ಅಪಘಾತ ಕೇಸ್‌, ಜಿಲ್ಲಾ ರಕ್ಷಣಾಧಿಕಾರಿ ಹೇಳಿದ್ದೇನು?

Collision-Between-bUses-at-Choradi-in-Shimoga

SHIVAMOGGA LIVE NEWS | 11 MAY 2023 SHIMOGA : ಚೋರಡಿ ಸಮೀಪ ಬಸ್ಸುಗಳ ಮುಖಾಮುಖಿ (Collision) ಡಿಕ್ಕಿ ಪ್ರಕರಣ ಸಂಬಂಧ ಜಿಲ್ಲಾ ರಕ್ಷಣಾಧಿಕಾರಿ ಮಿಥುನ್‌ ಕುಮಾರ್‌ ಅವರು ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿದ್ದಾರೆ. ಇದನ್ನೂ ಓದಿ – ಚೋರಡಿ ಬಳಿ ಭೀಕರ ಅಪಘಾತ ಕೇಸ್‌, ಸಾವನ್ನಪ್ಪಿರುವವರೆಷ್ಟು? ಗಾಯಾಳುಗಳೆಷ್ಟು? ಈವರೆಗೂ ಏನೇನಾಗಿದೆ? ʼಘಟನೆಯಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. ಮೂವರು ಗಂಭೀರ, ಐದಾರು ಮಂದಿಗೆ ಸಣ್ಣಪುಟ್ಟ ಗಾಯವಾಗಿದೆ. ಎಲ್ಲ ಪ್ರಯಾಣಿಕರನ್ನು ಮೆಗ್ಗಾನ್‌ ಆಸ್ಪತ್ರೆಗೆ ರವಾನಿಸಲಾಗಿದೆ. ಮೆಗ್ಗಾನ್‌ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸೂಕ್ತ ವ್ಯವಸ್ಥೆ … Read more

ಚೋರಡಿ ಬಳಿ ಭೀಕರ ಅಪಘಾತ ಕೇಸ್‌, ಸಾವನ್ನಪ್ಪಿರುವವರೆಷ್ಟು? ಗಾಯಾಳುಗಳೆಷ್ಟು? ಈವರೆಗೂ ಏನೇನಾಗಿದೆ?

Two-Bus-Collides-at-Choradi-in-Shimoga.

SHIVAMOGGA LIVE NEWS | 11 MAY 2023 SHIMOGA : ಕುಂಸಿ ಬಳಿ ಖಾಸಗಿ ಬಸ್ಸುಗಳು (Collision) ಮುಖಾಮುಖಿ ಡಿಕ್ಕಿಯಾಗಿದ್ದು, ಈವರೆಗೂ ನಾಲ್ವರು ಮೃತಪಟ್ಟಿರುವ ಕುರಿತು ಮಾಹಿತಿ ಲಭ್ಯವಾಗಿದೆ. ಶಿವಮೊಗ್ಗ – ಸಾಗರ ಹೆದ್ದಾರಿಯ ಚೋರಡಿ ಬಳಿ ಕುಮದ್ವತಿ ಸೇತುವೆ ಸಮೀಪ ಘಟನೆ ಸಂಭವಿಸಿದೆ. ಎರಡು ಬಸ್ಸುಗಳು ಮುಖಾಮುಖಿ ಡಿಕ್ಕಿಯಾಗಿದ್ದು(Collision), ಮುಂಭಾಗ ನಜ್ಜುಗುಜ್ಜಾಗಿದೆ. ಘಟನೆಯಲ್ಲಿ ಸುಮಾರು 20ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರನ್ನು ಕೂಡಲೆ ಆಂಬುಲೆನ್ಸ್‌ ಮೂಲಕ ಶಿವಮೊಗ್ಗದ ಮೆಗ್ಗಾನ್‌ ಆಸ್ಪತ್ರೆಗೆ ರವಾನಿಸಲಾಗಿದೆ. ಇನ್ನು, … Read more