‘ವಿಡಿಯೋ ನೋಡಿ, ಲೈಕ್ ಮಾಡಿ, 50 ರೂ. ಸಂಪಾದಿಸಿ’, ನಂಬಿದ ಶಿವಮೊಗ್ಗದ ಯುವಕನ ಪರಿಸ್ಥಿತಿ ಈಗೇನಾಗಿದೆ ಗೊತ್ತಾ?

Online-Fraud-Case-image

SHIVAMOGGA LIVE NEWS | 17 APRIL 2023 SHIMOGA : ಪಾರ್ಟ್ ಟೈಮ್ (Part Time Job Fraud) ಉದ್ಯೋಗದ ಹೆಸರಿನಲ್ಲಿ ಮತ್ತೊಂದು ವಂಚನೆ ಪ್ರಕರಣ ಬೆಳಕಿಗೆ ಬಂದಿದೆ. ವಿಡಿಯೋ ನೋಡಿ ಅದಕ್ಕೆ ಲೈಕ್ ಕೊಟ್ಟು ಹಣ ಸಂಪಾದಿಸಬಹುದು ಎಂದು ನಂಬಿಸಿ ಶಿವಮೊಗ್ಗದ ಯುವಕನೊಬ್ಬನಿಗೆ ಎಂಟು ಲಕ್ಷ ರೂ. ವಂಚನೆ ಮಾಡಲಾಗಿದೆ. ಶಿವಮೊಗ್ಗ ತಾಲೂಕಿನ ಗ್ರಾಮವೊಂದರ 29 ವರ್ಷದ ಯುವಕ (ಹೆಸರು ಗೌಪ್ಯ) ವಂಚನೆಗೊಳಗಾಗಿದ್ದಾನೆ. ಟಿಲಿಗ್ರಾಂ ಆಪ್‍ನಲ್ಲಿ ಬಂದ ಲಿಂಕ್ ಕ್ಲಿಕ್ ಮಾಡಿದ ಯುವಕ ಮೋಸ … Read more

ಶಿವಮೊಗ್ಗ ತಾಲೂಕಿನ ಹಲವು ಗ್ರಾಮಗಳಲ್ಲಿ ನಾಳೆ ಇಡೀ ದಿನ ಕರೆಂಟ್‌ ಇರಲ್ಲ, ಎಲ್ಲಲ್ಲಿ ವ್ಯತ್ಯಯವಾಗಲಿದೆ?

power cut mescom ELECTRICITY

SHIVAMOGGA LIVE NEWS | 17 APRIL 2023 SHIMOGA : ಎಂ.ಆರ್‌.ಎಸ್‌ 110/11 ಕೆವಿ ಮಾರ್ಗದಲ್ಲಿ ತ್ರೈಮಾಸಿಕ ನಿರ್ವಹಣೆ ಹಮ್ಮಿಕೊಳ್ಳಲಾಗಿದೆ. ಹಾಗಾಗಿ ಶಿವಮೊಗ್ಗ ತಾಲೂಕಿನ ವಿವಿಧೆಡೆ ಏ.18 ರಂದು ಬೆಳಗ್ಗೆ 9.30 ರಿಂದ ಸಂಜೆ 6 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ (Power Cut) ಎಂದು ಮೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ. ಎಲ್ಲೆಲ್ಲಿ ಕರೆಂಟ್‌ ಇರಲ್ಲ? ಗಾಜನೂರು, ಗಾಜನೂರು ಅಗ್ರಹಾರ ಮತ್ತು ಡ್ಯಾಂ, ಸಕ್ರೇಬೈಲು, ತಿಮ್ಲಾಪುರ, ತಟ್ಟಿಕೆರೆ, ವೀರಾಪುರ, ಹೊಸಕೊಪ್ಪ, ಹಾಲಲಕ್ಕವಳ್ಳಿ ಎ & ಬಿ, ಕಡೇಕಲ್, ಯರಗನಾಳ್, … Read more

ನೀರಿನ ಟ್ಯಾಂಕರ್ ಡಿಕ್ಕಿ, ಗೋಂವಿದಾಪುರದ ಯುವಕ ಸಾವು

ACCIDENT-NEWS-GENERAL-IMAGE.

SHIVAMOGGA LIVE NEWS | 17 APRIL 2023 SHIMOGA : ನೀರಿನ ಟ್ಯಾಂಕರ್ (Tanker) ಡಿಕ್ಕಿಯಾಗಿ ಬೈಕ್ ಹಿಂಬದಿ ಸವಾರ ಸ್ಥಳದಲ್ಲಿಯೇ ಮೃತಟ್ಟಿದ್ದಾನೆ. ಗೋವಿಂದಾಪುರದ ಕಿಶನ್ (19) ಮೃತ ದುರ್ದೈವಿ. ಗಾರೆ ಕೆಲಸಕ್ಕೆ ಗೋವಿಂದಾಪುರದಿಂದ ಶಿವಮೊಗ್ಗಕ್ಕೆ ತೆರಳುವಾಗ ಘಟನೆ ಸಂಭವಿಸಿದೆ. ಲಕ್ಷ್ಮಣ್ ಎಂಬುವವರೊಂದಿಗೆ ಬೈಕಿನ ಹಿಂಬದಿಯಲ್ಲಿ ಕುಳಿತು ಕಿಶನ್ ಶಿವಮೊಗ್ಗಕ್ಕೆ ತೆರಳುತ್ತಿದ್ದ. ಎದುರಿನಿಂದ ಬಂದ ಟ್ಯಾಂಕರ್ ಡಿಕ್ಕಿ ಹೊಡೆದು, ಕಿಶನ್ ಮೈಮೇಲೆ ಹರಿದಿದೆ. ಇದರಿಂದ ಕಿಶನ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಲಕ್ಷ್ಮಣ್ ಗಾಯಗೊಂಡಿದ್ದು, ಅವರಿಗೆ ಚಿಕಿತ್ಸೆ ನಡೆಯುತ್ತಿದೆ. … Read more

ಬಸವನಗಂಗೂರು ರಸ್ತೆಯಲ್ಲಿ ಕೋಣಕ್ಕೆ ಬೈಕ್ ಡಿಕ್ಕಿ, ಮಹಿಳೆ ತಲೆಗೆ ಗಂಭೀರ ಗಾಯ

ACCIDENT-NEWS-GENERAL-IMAGE.

SHIVAMOGGA LIVE NEWS | 17 APRIL 2023 SHIMOGA : ರಸ್ತೆಯಲ್ಲಿ ಕೋಣ ಒಂದಕ್ಕೆ ದ್ವಿಚಕ್ರ ವಾಹನ ಡಿಕ್ಕಿಯಾಗಿ ಮಹಿಳೆಯೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ (injured). ಮೋಜಪ್ಪನ ಹೊಸೂರಿನ ಕಾಶಿ ಬಾಯಿ ಎಂಬುವವರ ತಲೆಗೆ ಪೆಟ್ಟು ಬಿದ್ದಿದೆ. ಮಗ ವಿಜಯ್‍ ಜೊತೆಗೆ ಬಸವನಗಂಗೂರಿಗೆ ತೆರಳುತ್ತಿದ್ದಾಗ ಘಟನೆ ಸಂಭವಿಸಿದೆ. ಹೊಸೂರಿನಿಂದ ಬಸವನಗಂಗೂರಿಗೆ ತೆರಳುವ ಮಾರ್ಗದಲ್ಲಿ ವಿಜಯ್ ಚಲಾಯಿಸುತ್ತಿದ್ದ ಎಲೆಕ್ಟ್ರಿಕ್ ಬೈಕ್‍ ಕೋಣಕ್ಕೆ ಡಿಕ್ಕಿ ಹೊಡೆದಿದೆ. ಹಿಂಬದಿ ಕುಳಿತಿದ್ದ ಕಾಶಿ ಬಾಯಿ ಅವರು ಕೆಳಗೆ ಬಿದ್ದಿದ್ದು, ತಲೆಗೆ ಪೆಟ್ಟು (injured) … Read more

ಶಿವಮೊಗ್ಗ ಗ್ರಾಮಾಂತರ ಕ್ಷೇತ್ರ, ಮಹತ್ವದ ನಿರ್ಧಾರ ಪ್ರಕಟಿಸಿದ ನಾರಾಯಣ ಸ್ವಾಮಿ, ಬೆಂಬಲಿಗರ ಸಭೆ

Narayana-Swamy-Press-meet-in-Shimoga

SHIVAMOGGA LIVE NEWS | 16 APRIL 2023 SHIMOGA : ಬಿಜೆಪಿ, ಜೆಡಿಎಸ್‌, ಕಾಂಗ್ರೆಸ್‌ ಪಕ್ಷಗಳ ನಡುವೆ ಒಳ ಒಪ್ಪಂದ ನಡೆದಿದೆ. ಇದೆ ಕಾರಣಕ್ಕೆ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಶ್ರೀನಿವಾಸ್‌ ಕರಿಯಣ್ಣ  ಅವರಿಗೆ ಟಿಕೆಟ್‌ ಘೋಷಿಸಲಾಗಿದೆ. ಆದರೆ ತಮ್ಮ  ಕಾರ್ಯಕರ್ತರು ಪಟ್ಟು ಹಿಡಿದಿರುವುದರಿಂದ ನಾಮಪತ್ರ (Nomination) ಸಲ್ಲಿಸಲು ನಿರ್ಧರಿಸಿದ್ದೇನೆ ಎಂದು ನಾರಾಯಣ ಸ್ವಾಮಿ ಅವರು ತಿಳಿಸಿದರು. ಸುದ್ದಿಗೋಷ್ಠಿಯಲ್ಲ ಮಾತನಾಡಿದ ನಾರಾಯಣ ಸ್ವಾಮಿ ಅವರು, ಗುರುವಾರ ಬೆಂಬಲಿಗರೊಂದಿಗೆ ತೆರಳಿ ನಾಮಪತ್ರ (Nomination) ಸಲ್ಲಿಸಲು ನಿರ್ಧರಿಸಿದ್ದೇನೆ. ಇದಕ್ಕಾಗಿ ಎಲ್ಲಾ … Read more

ಶಿವಮೊಗ್ಗ ಗ್ರಾಮಾಂತರ ಕಾಂಗ್ರೆಸ್‌ನಲ್ಲಿ ಅಸಮಾಧಾನದ ಹೊಗೆ, ಕುತೂಹಲ ಮೂಡಿಸಿದೆ ನಾರಾಯಣಸ್ವಾಮಿ ನಡೆ

160423 Congress party and Narayana Swamy Shimoga Rural

SHIVAMOGGA LIVE NEWS | 16 APRIL 2023 SHIMOGA : ಟಿಕೆಟ್‌ ಘೋಷಣೆ ಬೆನ್ನಿಗೆ ಶಿವಮೊಗ್ಗ ಗ್ರಾಮಾಂತರ ವಿಧಾನಸಭೆ ಕ್ಷೇತ್ರದ ಕಾಂಗ್ರೆಸ್‌ನಲ್ಲಿ ಅಸಮಾಧಾನ (dissatisfaction) ಭುಗಿಲೆದ್ದಿದೆ. ಕೆಲವರು ಬಂಡಾಯವಾಗಿ ಸ್ಪರ್ಧೆ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಇದು ಕಾಂಗ್ರೆಸ್‌ ಮುಖಂಡರಿಗೆ ನುಂಗಲಾರದ ತುತ್ತಾಗಿದೆ. ಮಾಜಿ ಶಾಸಕ ಕರಿಯಣ್ಣ ಅವರ ಮಗ ಡಾ.ಶ್ರೀನಿವಾಸ್‌ ಕರಿಯಣ್ಣ ಅವರಿಗೆ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಿಂದ ಸ್ಪರ್ಧಿಸಲು ಕಾಂಗ್ರೆಸ್‌ ಟಿಕೆಟ್‌ ನೀಡಿದೆ. ಇದು ಉಳಿದ ಆಕಾಂಕ್ಷಿಗಳು, ಅವರ ಬೆಂಬಲಿಗರಲ್ಲಿ ಅಸಮಾಧಾನ ಮೂಡಿಸಿದೆ. ಈವರೆಗೂ … Read more

ಶಿವಮೊಗ್ಗದಲ್ಲಿ ಇಬ್ಬರು ಮಾಜಿ ಶಾಸಕರ ಪುತ್ರರಿಗೆ ಒಲಿದ ಅದೃಷ್ಟ, ಯಾರದು? ಮಾಜಿ ಎಂಎಲ್‌ಎಗಳ್ಯಾರು?

HC-Yogesh-and-Srinivas-Kariyanna-to-congress-candidates

SHIVAMOGGA LIVE NEWS | 12 APRIL 2023 ELECTION NEWS : ಕಾಂಗ್ರೆಸ್‌ ಮೂರನೆ ಪಟ್ಟಿಯಲ್ಲಿ ಇಬ್ಬರು ಮಾಜಿ ಶಾಸಕರ (Former MLA) ಮಕ್ಕಳಿಬ್ಬರಿಗೆ ಅದೃಷ್ಟ ಒಲಿದಿದೆ. ತೀವ್ರ ಕುತೂಹಲ ಕೆರಳಿಸಿರುವ ಎರಡು ಕ್ಷೇತ್ರಗಳಲ್ಲಿ ಇವರನ್ನು ಕಣಕ್ಕಿಳಿಸಲಾಗಿದೆ. ಇನ್ನು, ಶಿಕಾರಿಪುರದಲ್ಲಿ ಗೋಣಿ ಮಾಲ್ತೇಶ್‌ ಅವರಿಗೆ ಮತ್ತೊಮ್ಮೆ ಅವಕಾಶ ಕಲ್ಪಿಸಲಾಗಿದೆ. ಮಾಜಿ ಶಾಸಕರ ಪುತ್ರರು ಶಿವಮೊಗ್ಗ, ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಗಳ ಕುರಿತು ತೀವ್ರ ಕುತೂಹಲ ಮೂಡಿತ್ತು. ಹಲವು ಲೆಕ್ಕಾಚಾರ, ಊಹಾಪೋಹ, ಲಾಬಿಗಳು ಕೂಡ ನಡೆದಿದ್ದವು. … Read more

ಶಿವಮೊಗ್ಗ – ಆಯನೂರು ರಸ್ತೆಯಲ್ಲಿ ಹಿಟ್ ಅಂಡ್ ರನ್‍ ಅಪಘಾತ, ಒಬ್ಬ ಸಾವು, ಮತ್ತಿಬ್ಬರಿಗೆ ಗಂಭೀರ ಗಾಯ

Sagara-Road-Gadikoppa-Shimoga-city

SHIVAMOGGA LIVE NEWS | 15 APRIL 2023 SHIMOGA : ಚಲಿಸುತ್ತಿದ್ದ ಬೈಕಿಗೆ ಹಿಂಬದಿಯಿಂದ ಕಾರು ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಒಬ್ಬ ಬೈಕ್ ಸವಾರ ಮೃತಪಟ್ಟಿದ್ದು, ಇನ್ನಿಬ್ಬರು ಗಂಭೀರ ಗಾಯಗೊಂಡಿದ್ದಾರೆ. ಅಪಘಾತದ ಬಳಿಕ ಚಾಲಕ ಕಾರು ನಿಲ್ಲಿಸದೆ ಪರಾರಿಯಾಗಿದ್ದು, ಹಿಟ್ ಅಂಡ್ ರನ್ (Hit and Run) ಪ್ರಕರಣ ದಾಖಲಾಗಿದೆ. ಶಿವಮೊಗ್ಗದ ತ್ಯಾವರೆಕೊಪ್ಪದ ಸಿಂಹಧಾಮದ (Lion Safari) ಬಳಿ ಘಟನೆ ಸಂಭವಿಸಿದೆ. ದಾವಣಗೆರೆ ಜಿಲ್ಲೆಯ ನ್ಯಾಮತಿಯ ರಮೇಶ್ (43) ಮೃತಪಟ್ಟಿದ್ದಾನೆ. ಶಿವಮೊಗ್ಗದ ಚಿನ್ಮನೆ (Chinmane) ಗ್ರಾಮದ … Read more

ಹೊಳಲೂರು ಸೇತುವೆ ಬಳಿ ಹಿಟ್ ಅಂಡ್ ರನ್ ಅಪಘಾತ, ದಂಪತಿ ಆಸ್ಪತ್ರೆಗೆ ದಾಖಲು

ACCIDENT-NEWS-GENERAL-IMAGE.

SHIVAMOGGA LIVE NEWS | 14 APRIL 2023 SHIMOGA : ರಸ್ತೆ ಬದಿ ನಡೆದು ಹೋಗುತ್ತಿದ್ದ ದಂಪತಿಗೆ (Couple) ಬೈಕ್ ಡಿಕ್ಕಿ ಹೊಡೆದು ಗಾಯಗೊಂಡಿದ್ದಾರೆ. ಅವರನ್ನು ಶಿವಮೊಗ್ಗದ ಖಾಸಗಿ ಆಸ್ಪತ್ರೆಗಳಿಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಆನವೇರಿ ಗ್ರಾಮದ ಎಸ್‍.ಎಂ.ವಲ್ಲಿ ಮತ್ತು ಆತನ ಪತ್ನಿ ನಜ್ಮಾ ಬಾನು ಗಾಯಾಳುಗಳು. ಹೊಳಲೂರು ಆಸ್ಪತ್ರೆಗೆ ನಡೆದು ಹೋಗುತ್ತಿದ್ದಾಗ ಘಟನೆ ಸಂಭವಿಸಿದೆ. ಹೊಳಲೂರು ಹೊಸ ಸೇತುವೆ ದಾಟಿ ಸ್ವಲ್ಪ ಮುಂದೆ ಹೋಗುತ್ತಿದ್ದಾಗ, ಹಿಂಬದಿಯಿಂದ ವೇಗವಾಗಿ ಬಂದ ಬೈಕ್ ಡಿಕ್ಕಿ ಹೊಡೆದಿದೆ. … Read more

ಶಿವಮೊಗ್ಗದಲ್ಲಿ ಆಲದ ಮರದ ಕೆಳಗೆ ವಾಮಾಚಾರ, ಜೀವಂತ ಕುರಿ ಪತ್ತೆ, ಚುನಾವಣೆಗಾಗಿ ನಡೆಯಿತಾ ಕೃತ್ಯ?

Black-magic-muddinakoppa-near-ayanuru-in-Shimoga

SHIVAMOGGA LIVE NEWS | 14 APRIL 2023 SHIMOGA : ರಾಷ್ಟ್ರೀಯ ಹೆದ್ದಾರಿ ಬದಿಯ ಆಲದ ಮರದ ಕೆಳಗೆ ವಾಮಾಚಾರ (Black Magic) ಮಾಡಲಾಗಿದೆ. ವಾಮಾಚಾರಕ್ಕೆ ಬಳಸಿದ ವಸ್ತುಗಳು ಮತ್ತು ಜೀವಂತ ಕುರಿ ಪತ್ತೆಯಾಗಿದೆ. ವಿಧಾನಸಭೆ ಚುನಾವಣೆ ಕಾರಣಕ್ಕೆ ವಾಮಾಚಾರ ನಡೆಸಿರುವ ಕುರಿತು ಸ್ಥಳೀಯರು ಶಂಕೆ ವ್ಯಕ್ತಪಡಿಸಿದ್ದು, ಚರ್ಚೆಗೆ ಹುಟ್ಟುಹಾಕಿದೆ. ಶಿವಮೊಗ್ಗ – ಸಾಗರ ರಸ್ತೆಯ ಮುದ್ದಿನಕೊಪ್ಪ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿ ಪಕ್ಕದ ಆಲದ ಮರದ ಕೆಳಗೆ ವಾಮಾಚಾರ (Black Magic) ನಡೆಸಲಾಗಿದೆ. ಮಡಕೆಗಳು, … Read more