ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ | 24 ಜುಲೈ 2019
‘ಅಪ್ಪ ಬಹಳ ಖುಷಿಯಾಗಿದ್ದಾರೆ. ಅವರು ಈಗಷ್ಟೇ ನನಗೆ ಫೋನ್ ಮಾಡಿದ್ದರು. ಶುಭಾಷಯ ತಿಳಿಸಿದ್ದೇನೆ..’ ಹೀಗಂತ ಸಂತೋಷ ಹಂಚಿಕೊಂಡಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರ ಪುತ್ರಿ ಅರುಣಾದೇವಿ.
ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆಯಾಗುತ್ತಿರುವ ಹಿನ್ನೆಲೆ, ಕಾರ್ಯಕರ್ತರು ವಿನೋಬನಗರದ ಯಡಿಯೂರಪ್ಪ ನಿವಾಸದ ಮುಂದೆ ಸಂಭ್ರಮಾಚರಣೆ ಮಾಡಿದರು. ಈ ವೇಳೆ ಬಿಜೆಪಿ ಕಾರ್ಯಕರ್ತರು, ಯಡಿಯೂರಪ್ಪ ಅಭಿಮಾನಿಗಳಿಗೆ ಸಿಹಿ ಹಂಚಿದ ಅರುಣಾದೇವಿ, ಪತ್ರಕರ್ತರೊಂದಿಗೆ ಮಾತನಾಡಿದರು.
ಹಬ್ಬಗಳು, ವಿಶೇಷ ಸಂದರ್ಭಗಳಲ್ಲಿ ಮಾತ್ರವೇ ನಮ್ಮ ತಂದೆಯವರ ಜೊತೆಗೆ ಫೋನ್ ಮೂಲಕ ಮಾತನಾಡುತ್ತೇವೆ. ಈಗ ಅವರೇ ಕರೆ ಮಾಡಿದ್ದರು. ಮತ್ತೆ ಸಿಎಂ ಆಗಿ ಅಧಿಕಾರಕ್ಕೇರುತ್ತೇನೆ ಅನ್ನುವುದು ಅವರ ಖುಷಿಯಲ್ಲ, ಜನಸೇವೆ ಮಾಡುವ ಜವಾಬ್ದಾರಿ ಸಿಕ್ಕಿದೆ ಅನ್ನುವುದೇ ಅವರ ಸಂತೋಷಕ್ಕೆ ಕಾರಣ ಎಂದರು.
ಸಿಹಿ ತಿನ್ನಿಸಿದರು, ಪತಿಯಿಂದ ಸಿಹಿ ಮುತ್ತು ಪಡೆದರು
ಯಡಿಯೂರಪ್ಪ ಅವರು ಮತ್ತೊಮ್ಮೆ ಸಿಎಂ ಆಗಿ ಅಧಿಕಾರ ಸ್ವೀಕರಿಸುತ್ತಿರುವ ಹಿನ್ನೆಲೆಯಲ್ಲಿ, ವಿನೋಬನಗರದ ಮನೆಯಲ್ಲಿ ನಡೆಯುತ್ತಿದ್ದ ಸಂಭ್ರಮಾಚರಣೆಯಲ್ಲಿ ಅಳಿಯ ಉದಯ್ ಕುಮಾರ್ ಪಾಲ್ಗೊಂಡಿದ್ದರು. ಸಂಭ್ರಮದ ನಡುವೆ ಪತ್ನಿಗೆ ಸಹಿ ತಿನ್ನಿಸಿ, ಸಿಹಿ ಮುತ್ತನ್ನು ಕೊಟ್ಟು ಖುಷಿ ಹಂಚಿಕೊಂಡರು.
ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ | 7411700200
ಸುದ್ದಿಗಾಗಿ ಮೊಬೈಲ್ ನಂಬರ್ | 9964634494
ಈ ಮೇಲ್ | [email protected]