ಶಿವಮೊಗ್ಗ ಲೈವ್.ಕಾಂ | SHIMOGA NEWS | 9 ಸೆಪ್ಟಂಬರ್ 2020
ಒಳ ಮೀಸಲಾತಿ ಜಾರಿ ಹಿಂದೆ ಕಾನೂನಾತ್ಮಕ ಸಂಗತಿಗಳಿವೆ. ಸುಪ್ರೀಂ ಕೋರ್ಟ್ನಲ್ಲಿ ಈ ಸಂಬಂಧ ಆದೇಶವಾಗಬೇಕು. ಇಲ್ಲವೆ ಸಂಸತ್ನಲ್ಲಿ ತೀರ್ಮಾನವಾಗಬೇಕು. ಈ ವಿಚಾರದಲ್ಲಿ ಯಾರಿಗೂ ಅನ್ಯಾಯವಾಗಬಾರದು ಅನ್ನುವುದು ಬಿಜೆಪಿ ಆಶಯ ಎಂದು ಬಿಜೆಪಿ ಎಸ್ಸಿ ಮೋರ್ಚಾ ಅಧ್ಯಕ್ಷ ಛಲವಾದಿ ನಾರಾಯಣಸ್ವಾಮಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಛಲವಾದಿ ನಾರಾಯಣ ಸ್ವಾಮಿ, ಒಳಮೀಸಲಾತಿ ಎನ್ನುವುದು ಕಾನೂನಿನ ವ್ಯಾಪ್ತಿಗೆ ಬರುವ ವಿಷಯವಾಗಿದೆ. ಇದು ರಾಜಕೀಯದ ಕಾಲವಲ್ಲ. ಕಾಂಗ್ರೆಸ್ ಸರ್ಕಾರ ಇದ್ದಾಗಲೇ ಈ ವರದಿ ಬಂದಿತ್ತು. ಆದರೆ ಅದನ್ನು ಏಕೆ ಕಾಂಗ್ರೆಸ್ ಜಾರಿಗೊಳಿಸಲಿಲ್ಲ ಎಂದು ಪ್ರಶ್ನಿಸಿದರು.
ಒಳಮೀಸಲಾತಿಗೆ ಸಂಬಂಧಿಸಿದಂತೆ ಈಗಾಗಲೇ ನ್ಯಾಯಾಲಯದ ವಿವಿಧ ತೀರ್ಪುಗಳು ಹೊರಬರುತ್ತಿವೆ. ಈ ಬಗ್ಗೆ ಪರಿಶಿಷ್ಟರಲ್ಲಿಯೇ ದ್ವಂದ್ವಗಳಿವೆ. ಯಾರಿಗೂ ಅನ್ಯಾಯವಾಗಬಾರದು ಮತ್ತು ಈ ಬಗ್ಗೆ ಚರ್ಚೆ ಮಾಡುವ ಅಗತ್ಯವಿದೆ. ಅಥವಾ ಕಾಯ್ದೆಯಾಗಬೇಕು ಇಲ್ಲವೇ ನ್ಯಾಯಾಲಯದ ಸ್ಪಷ್ಟ ತೀರ್ಪು ಬರಬೇಕು. ಎಲ್ಲರಿಗೂ ನ್ಯಾಯ ದೊರಕಬೇಕು. ಆ ಮೂಲಕ ಸಾಮಾಜಿಕ ನ್ಯಾಯ ಸಿಗಬೇಕು ಎಂಬುದೇ ಬಿಜೆಪಿಯ ಆಶಯವಾಗಿದೆ ಎಂದರು.
ಕಾಂಗ್ರೆಸ್ ಪಕ್ಷ ಓಟ್ ಬ್ಯಾಂಕ್ಗಾಗಿ ಈ ಸಮುದಾಯಕ್ಕೆ ಸುಳ್ಳು ಹೇಳುತ್ತಾ ಇದುವರೆಗೂ ಬಳಸಿಕೊಂಡಿದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಈ ಸಮುದಾಯದ ಪರವಾಗಿ ಬಿಜೆಪಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಇದರಿಂದಾಗಿ ನಮ್ಮ ಪಕ್ಷ ದಲಿತ ವಿರೋಧಿ ಅಲ್ಲ ಎಂಬುದನ್ನು ಸಾಬೀತು ಪಡಿಸಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖ ರಾದ ದೇವರಾಜ್ ಮಂಡೇನಕೊಪ್ಪ, ಕಾಸರವಳ್ಳಿಶ್ರೀನಿವಾಸ್, ಯೋಗೀಶ್ ಮುಂತಾದವರಿದ್ದರು.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]