ಶಿವಮೊಗ್ಗ ಲೈವ್.ಕಾಂ | SHIMOGA NEWS | 17 FEBRUARY 2021
ಸಾಲು ಸಾಲು ಕಾರ್ಯಕ್ರಮಗಳು, ಮೀಟಿಂಗ್ಗಳ ಒತ್ತಡದ ನಡುವೆಯು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ತಮ್ಮಿಷ್ಟದ ಹೊಟೇಲ್ನಲ್ಲಿ ಮಸಾಲೆ ದೋಸೆ, ಉಪ್ಪಿಟ್ಟು ಸವಿದರು.
ಸಂಸದ ಬಿ.ವೈ.ರಾಘವೇಂದ್ರ, ವಿಧಾನ ಪರಿಷತ್ ಸದಸ್ಯೆ ಭಾರತಿ ಶೆಟ್ಟಿ, ಸೂಡಾ ಅಧ್ಯಕ್ಷ ಜ್ಯೋತಿ ಪ್ರಕಾಶ್, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಚನ್ನವೀರಪ್ಪ ಅವರೊಂದಿಗೆ ಮೀನಾಕ್ಷಿ ಭವನ ಹೊಟೇಲ್ಗೆ ತೆರಳಿ ಮಸಾಲೆ ದೋಸೆ, ಉಪ್ಪಿಟ್ಟು ಸವಿದರು.
ಮಾಚೇನಹಳ್ಳಿ ಕೈಗಾರಿಕಾ ಸಂಘದ ಕಾರ್ಯಕ್ರಮ, ಬಿಜೆಪಿ ಕಾರ್ಯಕಾರಿಣಿಯಲ್ಲಿ ಭಾಗವಹಿಸಿ ಮರಳುತ್ತಿದ್ದಾಗ, ಮುಖ್ಯಮಂತ್ರಿ ಯಡಿಯೂರಪ್ಪ ಅವರು ಮೀನಾಕ್ಷಿ ಭವನ ಹೊಟೇಲ್ಗೆ ತೆರಳಿದರು. ತಮ್ಮಿಷ್ಟದ ಮಸಾಸೆ ದೋಸೆ ಆರ್ಡರ್ ಮಾಡಿ, ಸವಿದರು.
ಈ ಹಿಂದೆಯು ಸಿಎಂ ಆಗಿದ್ದಾಗ, ವಿರೋಧ ಪಕ್ಷದ ನಾಯಕರಾಗಿದ್ದಾಗಲು ಯಡಿಯೂರಪ್ಪ ಅವರು ಮೀನಾಕ್ಷಿ ಭವನ ಹೊಟೇಲ್ಗೆ ಭೇಟಿ ನೀಡಿ, ದೋಸೆ ಸವಿದಿದ್ದರು.
ಶಿವಮೊಗ್ಗ ಲೈವ್ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್ನಲ್ಲಿ ಸುದ್ದಿಗಾಗಿ 7411700200
ಶಿವಮೊಗ್ಗ ಲೈವ್ ಈ ಮೇಲ್ [email protected]