SHIVAMOGGA LIVE NEWS | 15 APRIL 2024
SAGARA : ರಾಷ್ಟ್ರಭಕ್ತರ ಬಳಗದ ಸಂಯೋಜನೆಯೊಂದಿಗೆ ಸಾಗರದ ಶ್ರೀ ಲಕ್ಷ್ಮೀ ವೆಂಕಟರಮಣ ದೇಗುಲದಲ್ಲಿ ಸಾರ್ವಜನಿಕರಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು. ಚುನಾವಣ ಅಧಿಕಾರಿಗಳ ಅನುಮತಿ ಪಡೆಯದೆ ಊಟ ಹಂಚಿದ್ದಕ್ಕೆ ಆಯೋಜಕರ ವಿರುದ್ಧ ಪ್ರಕರಣ ದಾಖಲಾಗಿದೆ. ಏ.6ರಂದು ದೇಗುಲದ ಆವರಣದಲ್ಲಿ ಊಟದ ವ್ಯವಸ್ಥೆ ಮಾಡಲಾಗಿತ್ತು. ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಪರಿಶೀಲಿಸಿದ್ದರು. ನೀತಿ ಸಂಹಿತೆ ಉಲ್ಲಂಘನೆ ಹಿನ್ನೆಲೆ ಆಯೋಜಕ ಪ್ರಕಾಶ್ ಎಂಬುವವರ ವಿರುದ್ಧ ಸಾಗರ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ – ತ್ಯಾಗರ್ತಿ ಸಮೀಪ ಬೆಳಗೆದ್ದು ಜಮೀನಿಗೆ ತೆರಳಿದ್ದ ರೈತನಿಗೆ ಕಾದಿತ್ತು ಆಘಾತ