ಗಾಂಧಿ ಬಜಾರ್‌ ಉದ್ಯಮಿಗೆ ಬೆದರಿಕೆ ಕರೆ, ₹5,00,000 ಹಣಕ್ಕೆ ಡಿಮಾಂಡ್‌, ಏನಿದು ಕೇಸ್‌?

ಶಿವಮೊಗ್ಗ: ನಗರದ ಗಾಂಧಿ ಬಜಾರ್‌ನ ಉದ್ಯಮಿಯೊಬ್ಬರಿಗೆ (businessman) ಐದು ಲಕ್ಷ ರೂಪಾಯಿ ಹಣ ನೀಡುವಂತೆ ಬೆದರಿಕೆ ಹಾಕಿರುವ ಘಟನೆ ಬೆಳಕಿಗೆ ಬಂದಿದೆ. ಹಳೇ ದ್ವೇಷದ ಹಿನ್ನೆಲೆ ಜೈಲಿನಲ್ಲಿರುವ ಆರೋಪಿ ತನ್ನ ಸಹಚರನ ಮೂಲಕ ಈ ಕೃತ್ಯ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ.

ಇದನ್ನೂ ಓದಿ – ರಾತ್ರಿ 11:45ಕ್ಕೆ ಅಮೀರ್‌ ಅಹಮದ್‌ ಸರ್ಕಲ್‌ಗೆ ಬಂದ ವ್ಯಕ್ತಿಗೆ ಕಾದಿತ್ತು ಆಘಾತ, ಆಗಿದ್ದೇನು?

ಆರ್.ಎಂ.ಎಲ್ ನಗರದ ನಿವಾಸಿ ಹಾಗೂ ಚೋರ್ ಬಜಾರ್‌ನ ವ್ಯಾಪಾರಿ ಸೈಯದ್ ನಿಜಾಮುದ್ದೀನ್ ಅವರು ಈ ಸಂಬಂಧ ದೂರು ನೀಡಿದ್ದಾರೆ. ಮಾರ್ಚ್ 19ರಂದು ರಾತ್ರಿ 10:30ರ ಸುಮಾರಿಗೆ ನಿಜಾಮುದ್ದೀನ್ ಅವರು ಗಾಂಧಿ ಬಜಾರ್‌ನಲ್ಲಿದ್ದಾಗ, ಐುವಕನೊಬ್ಬ ಬಂದು ಅಣ್ಣ ಫೋನ್ ಮಾಡುತ್ತಿದ್ದಾರೆ ಮಾತನಾಡಿ ಎಂದು ಮೊಬೈಲ್ ನೀಡಿದ್ದಾನೆ.

Doddapete-Police-Station-Shimoga

ಸೈಯದ್ ನಿಜಾಮುದ್ದೀನ್ ಫೋನ್ ಸ್ವೀಕರಿಸಿದಾಗ ಮಾತನಾಡಿದ ವ್ಯಕ್ತಿ, ನಾಳೆ ಸಂಜೆಯೊಳಗೆ ₹5 ಲಕ್ಷ ಹಣ ಕೊಡಬೇಕು, ಇಲ್ಲದಿದ್ದರೆ ಹೊಡೆಸುತ್ತೇನೆ ಎಂದು ಬೆದರಿಕೆ ಹಾಕಿದ್ದಾನೆ ಎಂದು ಆರೋಪಿಸಲಾಗಿದೆ. ಘಟನೆ ಸಂಬಂಧ ದೊಡ್ಡಪೇಟೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Sunrise Facility Services, Sri sai Trust Shimoga
ಚಿತ್ರದ ವಿವರಣೆ
Shaki Toyota, Shivamogga
ನಿತಿನ್ ಆರ್‌.ಕೈದೊಟ್ಲು
ನಿತಿನ್ ಆರ್‌.ಕೈದೊಟ್ಲು

Published : March 23, 2026 at 3:00 PM IST

JNN College of Engineering Admissions started

© ಶಿವಮೊಗ್ಗ ಲೈವ್‌ : ಮಾರ್ಚ್ 23, 2026

Leave a Comment