ತುಂಗಾ ನದಿಯಲ್ಲಿ ಸ್ನಾನ ಮುಗಿಸಿ ದಂಡೆಗೆ ಬಂದ ಅಯ್ಯಪ್ಪ ಸ್ವಾಮಿ ಮಾಲಾಧಾರಿಗೆ ಕಾದಿತ್ತು ಶಾಕ್

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS, 15 DECEMBER 2024

Bike Theft

ಉಪಟಳ ನೀಡುತ್ತಿದ್ದವರು ಅರೆಸ್ಟ್‌

FATAFAT - #edeaefಶಿವಮೊಗ್ಗ : ಸಂತೆ ಕಡೂರು ಸಮೀಪ ಸಾರ್ವಜನಿಕರಿಗೆ ಉಪಟಳ ನೀಡುತ್ತಿದ್ದ ಇಬ್ಬರು ಯುವಕರನ್ನು ಪೊಲೀಸರು ಮೆಗ್ಗಾನ್‌ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ಗಾಂಜಾ ಸೇವಿಸಿರುವುದು ದೃಢವಾಗಿದೆ. ಈ ಹಿನ್ನೆಲೆ ಅಮೀರ್‌ ಜಾನ್‌ (27) ಮತ್ತು ಸಾಹಿಲ್‌ ಅಹಮದ್‌ (21) ಎಂಬುವವರನ್ನು ಬಂಧಿಸಿದ್ದಾರೆ. ಅವರ ವಿರುದ್ಧ ತುಂಗಾ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗೋವುಗಳ ಸಾಗಣೆ, ಮೂವರ ವಿರುದ್ಧ ಕೇಸ್‌

FATAFAT - #edeaefಸಾಗರ : ಯಾವುದೇ ಪರವಾನಗಿ ಇಲ್ಲದೆ ಗೋವುಗಳನ್ನು ಕೊಂಡೊಯ್ಯುತ್ತಿದ್ದ ಗೂಡ್ಸ್‌ ವಾಹನ ತಡೆದ ಸ್ಥಳೀಯರು ಪರಿಶೀಲಿಸಿ, ಪೊಲೀಸರಿಗೆ ಒಪ್ಪಿಸಿದ್ದಾರೆ. 2 ದನ, ಒಂದು ಹೋರಿ, ಒಂದು ಕರುವನ್ನು ರಕ್ಷಿಸಲಾಗಿದೆ. ಗೂಡ್ಸ್‌ ವಾಹನವನ್ನು ವಶಕ್ಕೆ ಪಡೆಯಲಾಗಿದೆ. ಗೂಡ್ಸ್‌ ವಾಹನದಲ್ಲಿದ್ದ ಅಬ್ರಾರ್‌, ನಂದನ್‌ ಮತ್ತು ನವೀನ್‌ ಎಂಬುವವರ ವಿರುದ್ಧ ಪ್ರಕರಣ ದಾಖಲಾಗಿದೆ. ಸಾಗರ ಗ್ರಾಮಾಂತರ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ » ಶಿವಮೊಗ್ಗದಲ್ಲಿ ಧೂಳು ಹಿಡಿಯುತ್ತಿದೆ ಮಲ್ಟಿ ಲೆವೆಲ್‌ ಪಾರ್ಕಿಂಗ್‌ ಕಟ್ಟಡ, ಏನೆಲ್ಲ ಸಮಸ್ಯೆ ಆಗ್ತಿದೆ?

ತುಂಗಾ ನದಿ ದಂಡೆ ಮೇಲೆ ಬೈಕ್‌ ಕಳವು

FATAFAT - #edeaefಶಿವಮೊಗ್ಗ : ಅಯ್ಯಪ್ಪ ಸ್ವಾಮಿ ಮಾಲಾಧಾರಿಯೊಬ್ಬರು ತುಂಗಾ ನದಿ ದಂಡೆ ಮೇಲೆ ನಿಲ್ಲಿಸಿದ್ದ ಸ್ಪ್ಲೆಂಡರ್‌ ಬೈಕ್‌ ಕಳ್ಳತನವಾಗಿದೆ. ಅಯ್ಯಪ್ಪ  ಮಾಲಾಧಾರಿ ಗೋಪಿ ಇತರೆ ಮಾಲಾಧಾರಿಗಳ ಜೊತೆಗೆ ಸೀಗೆಹಟ್ಟಿಯ ಅಂತರ ಘಟ್ಟಮ್ಮ ದೇಗುಲದಲ್ಲಿ ಉಳಿದಿದ್ದರು. ಬೆಳಗಿನ ಜಾವ 4 ಗಂಟೆಗೆ ವಾದಿ-ಎ-ಹುದಾ ಬಳಿ ತುಂಗಾ ನದಿಯಲ್ಲಿ ಸ್ನಾನಕ್ಕೆ ತೆರಳಿದ್ದರು. ತಮ್ಮ ಬೈಕ್‌ ಅನ್ನು ನದಿ ದಂಡೆ ಮೇಲೆ ನಿಲ್ಲಿಸಿ ಹೋಗಿದ್ದರು. ಸ್ನಾನ ಮುಗಿಸಿ ಹಿಂತಿರುಗಿದಾಗ ಬೈಕ್‌ ನಾಪತ್ತೆಯಾಗಿತ್ತು. ಘಟನೆ ಸಂಬಂಧ ತುಂಗಾ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ » ಸಾಗರದಲ್ಲಿ ಬೆಳಗ್ಗೆ ಅಂಗಡಿಗೆ ಬಂದ ಮಾಲೀಕನಿಗೆ ಕಾದಿತ್ತು ಶಾಕ್

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment