ಶಿವಮೊಗ್ಗದಲ್ಲಿ ಶೋ ರೂಂ ಮುಂಭಾಗ ನಿಲ್ಲಿಸಿದ್ದ ಕಾರು ರಾತ್ರೋರಾತ್ರಿ ಮಾಯ

ಶಿವಮೊಗ್ಗ: ಶೋ ರೂಂ ಮುಂಭಾಗ ನಿಲ್ಲಸಿದ್ದ ಕಾರು (Car) ಕಳ್ಳತನವಾಗಿದೆ ಎಂದು ಆರೋಪಿಸಿ ಮ್ಯಾನೇಜರ್‌ ದೂರು ನೀಡಿದ್ದಾರೆ. ಶಿವಮೊಗ್ಗದ ಬೈಪಾಸ್‌ ರಸ್ತೆಯ ವಾದಿ-ಎ-ಹುದಾ ಸಮೀಪದ ಶ್ರೀ ಲಕ್ಷ್ಮಿ ಕಾರ್‌ ಶೋ ರೂಂ ಎದುರು ಘಟನೆ ಸಂಭವಿಸಿದೆ.

ಅಂಜನ್‌ ದಾಸ್‌ ಎಂಬುವವರು ತಮ್ಮ ಹಳೆಯ ಮಾರುತಿ 800 ಕಾರನ್ನು ಶ್ರೀ ಲಕ್ಷ್ಮಿ ಕಾರ್‌ ಶೂ ರೂಂನಲ್ಲಿ ಎಕ್ಸ್‌ಚೇಂಜ್‌ ಆಫರ್‌ನಲ್ಲಿ ಮಾರಾಟಕ್ಕೆ ಕೊಟಿದ್ದರು. ಆದರೆ ಪ್ರಧಾನ ಕಚೇರಿಯಿಂದ ಇನ್ನು ಅನುಮತಿ ಸಿಗದ ಹಿನ್ನೆಲೆ ಶೋ ರೂಂನವರು ಮಾರುತಿ 800 ಕಾರನ್ನು ಹೊರಗೆ ನಿಲ್ಲಿಸಿದ್ದರು. ರಾತ್ರೋರಾತ್ರಿ ಕಳ್ಳರು ಗೋಲ್ಡನ್‌ ಬಣ್ಣದ ಮಾರುತಿ 800 ಕಾರನ್ನು ಕಳ್ಳತನ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ಘಟನೆ ಸಂಬಂಧ ಶೋ ರೂಂ ಮ್ಯಾನೇಜರ್‌ ಅವಿನಾಶ್‌ ದೂರು ನೀಡಿದ್ದಾರೆ. ತುಂಗಾ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ » ಸವಳಂಗ ರಸ್ತೆಯಲ್ಲಿ ಕೊಮ್ಮನಾಳು ವ್ಯಕ್ತಿಯ ಬಲಿ ಪಡೆದ ಅಪರಿಚಿತ ವಾಹನ, ಹೇಗಾಯ್ತು ಘಟನೆ?

Car

crime name image

Leave a Comment