ಶಿವಮೊಗ್ಗದಲ್ಲಿ ನಾಯಿ ಕದ್ದವರು ಕೆಲವೇ ಗಂಟೆಯಲ್ಲಿ ಅರೆಸ್ಟ್

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

ಶಿವಮೊಗ್ಗ ಲೈವ್.ಕಾಂ | SHIMOGA NEWS | 6 ಡಿಸೆಂಬರ್ 2021

ವೈದ್ಯರೊಬ್ಬರ ಮನೆ ಕಾಂಪೌಂಡ್’ನಲ್ಲಿದ್ದ ನಾಯಿ ಮರಿ ಕಳ್ಳತನ ಮಾಡಿದ್ದವರನ್ನು, ಪೊಲೀಸರು ಬಂಧಿಸಿದ್ದಾರೆ. ನಾಯಿ ಕಳುವಾಗಿ 12 ಗಂಟೆಯೊಳಗೆ ನಾಯಿಯನ್ನು ಪತ್ತೆ ಮಾಡಲಾಗಿದೆ. ನಾಯಿ ಕದ್ದಿದ್ದ ಇಬ್ಬರನ್ನು ಬಂಧಿಸಲಾಗಿದೆ.

AVvXsEilFcZp8bI7xlZkJUEC RhGY9YPoo KIVozz TsmZZ8CfYE KBmsV3EapGIVWPGptCx4fvDDyHwt Atq RxEeboojOdcbentw5qEKhLtIyZ9lm04YwWlk03uhMFSLVhmj85JYdFDhwStydjaW DthQvaicavCzAWTNbnbJfGyATpv

ಏನಿದು ಪ್ರಕರಣ?

ರಾಜೇಂದ್ರ ನಗರದಲ್ಲಿರುವ ಡಾ.ಪರಮೇಶ್ವರ್ ಅವರು ಆರು ತಿಂಗಳ ಹಿಂದೆ ಬೀಗಲ್ ತಳಿಯ ನಾಯಿ ಮರಿ ಖರೀದಿಸಿದ್ದರು. ಭಾನುವಾರ ಮಧ್ಯಾಹ್ನ ಡಾ.ಪರಮೇಶ್ವರ್ ಮತ್ತು ಅವರು ಪತ್ನಿ ಮಲಗಿದ್ದರು. ನಾಯಿ ಮರಿ ಮನೆಯ ಕಾಂಪೌಂಡ್ ಒಳಗೆ ಓಡಾಡುತಿತ್ತು. ಸಂಜೆ ಮನೆಯಿಂದ ಹೊರ ಬಂದ ಡಾ.ಪರಮೇಶ್ವರ್ ಅವರಿಗೆ ನಾಯಿ ಮರಿ ಕಾಣಿಸಲಿಲ್ಲ.

ಸಿಸಿಟಿವಿಯಲ್ಲಿ ಕಳ್ಳತನ ಸೆರೆ

ನಾಯಿ ಕಾಣದಿರುವ ಹಿನ್ನೆಲೆ ಡಾ.ಪರಮೇಶ್ವರ್ ಅವರು ತಮ್ಮ ಮನೆ ಮತ್ತು ಎದುರು ಮನೆಯ ಸಿಸಿಟಿವಿಯಲ್ಲಿ ಪರಿಶೀಲನೆ ನಡೆಸಿದರು. ಬೈಕ್’ನಲ್ಲಿ ಬಂದ ಇಬ್ಬರು ಯುವಕರು ಡಾ. ಪರಮೇಶ್ವರ್ ಅವರ ಮನೆಯಲ್ಲಿದ್ದ ನಾಯಿಯನ್ನು ಕದ್ದೊಯ್ಯುತ್ತಿರುವುದನ್ನು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಹಿನ್ನೆಲೆಯಲ್ಲಿ ಜಯನಗರ ಠಾಣೆಯಲ್ಲಿ ಡಾ. ಪರಮೇಶ್ವರ್ ಅವರು ದೂರು ನೀಡಿದ್ದರು.

ಇದನ್ನೂ ಓದಿ | ನಾಲ್ಕು ಹಸುಗಳ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ ರೈತ, ಕಂಪ್ಲೇಂಟ್’ನಲ್ಲಿ ಏನಿದೆ?

12 ಗಂಟೆಯೊಳಗೆ ಕಳ್ಳರು ಅರೆಸ್ಟ್

ಪ್ರಕರಣ ದಾಖಲು ಮಾಡಿಕೊಂಡ ಪೊಲೀಸರು ಕಾರ್ಯಾಚರಣೆ ನಡೆಸಿ ಕೆಲವೇ ಗಂಟೆಯಲ್ಲಿ ಕಳ್ಳರನ್ನು ಪತ್ತೆ ಹಚ್ಚಿದ್ದಾರೆ. ಇಬ್ಬರನ್ನು ಬಂಧಿಸಲಾಗಿದ್ದು, ನಾಯಿ ಮರಿ ಮತ್ತು ಒಂದು ಬೈಕನ್ನು ವಶಕ್ಕೆ ಪಡೆಯಲಾಗಿದೆ. ನಾಯಿ ಮರಿ ವಾರಸುದಾರರ ಮಡಿಲು ಸೇರಿದೆ.

ಜಯನಗರ ಠಾಣೆ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

shivamogga live subscribe band

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment