SHIVAMOGGA LIVE NEWS | 17 MARCH 2024
SHIMOGA : ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ಮಹಿಳೆಯನ್ನು ತಡೆದು ಪೊಲೀಸ್ ಅಧಿಕಾರಿಗಳಂತೆ ನಟಿಸಿ, ಚಿನ್ನದ ಸರ ಕಳ್ಳತನ ಮಾಡಲಾಗಿದೆ. ಶಿವಮೊಗ್ಗದ ಚಿಕ್ಕಲ್ ಸಮೀಪದ ಸಿದ್ದೇಶ್ವರ ನಗರದಲ್ಲಿ ಘಟನೆ ಸಂಭವಿಸಿದೆ.
ನಾಗರತ್ನ (62) ಎಂಬುವವರು ಅಂಗಡಿಯಿಂದ ಮನೆಗೆ ತೆರಳುತ್ತಿದ್ದರು. ದಾರಿ ಮಧ್ಯೆ ಬೈಕ್ ನಿಲ್ಲಿಸಿಕೊಂಡು ನಿಂತಿದ್ದ ಇಬ್ಬರ ಪೈಕಿ ಒಬ್ಬಾತ ನಾಗರತ್ನ ಅವರ ಬಳಿ ‘ಸಾಹೇಬರು ಕರೆಯುತ್ತಿದ್ದಾರೆ. ಡ್ಯೂಟಿಯಲ್ಲಿದ್ದಾರೆʼ ಎಂದು ತಿಳಿಸಿದ್ದ. ಮತ್ತೊಬ್ಬ ವ್ಯಕ್ತಿ ಬಳಿ ಹೋದಾಗ ‘ಜನ ಚೂರಿ ಹಾಕಿ ಬಂಗಾರ ಕಸಿದುಕೊಂಡು ಹೋಗುತ್ತಾರೆ. ಸರ ಮುಚ್ಚಿಟ್ಟುಕೊಂಡು ಹೋಗಿ’ ಎಂದು ತಿಳಿಸಿದ ಎಂದು ಆರೋಪಿಸಲಾಗಿದೆ. ಅಲ್ಲದೆ ರಸ್ತೆ ಮೇಲೆ ಬಿದ್ದಿದ್ದ ಪೇಪರ್ ತೆಗೆದು, ನಾಗರತ್ನ ಅವರ ಕೊರಳಲ್ಲಿದ್ದ ಚಿನ್ನದ ಸರವನ್ನು ಪಡೆದು ಅದರಲ್ಲಿ ಹಾಕಿ, ಪೊಟ್ಟಣ ಕಟ್ಟಿದರು.
ಇದನ್ನೂ ಓದಿ – ಶಿವಮೊಗ್ಗ ಲೋಕಸಭೆ ಕ್ಷೇತ್ರ, ನಾಮಪತ್ರ ಸಲ್ಲಿಕೆ ಯಾವಾಗ? ಮತದಾನದ ದಿನಾಂಕವೇನು?
ಪೊಟ್ಟಣವನ್ನು ನಾಗರತ್ನ ಅವರ ಸೀರೆ ಸೆರಗಿನ ತುದಿಗೆ ಕಟ್ಟಿದರು. ಮನೆಗೆ ಹೋಗಿ ನಾಗರತ್ನ ಅವರು ಸೆರೆಗಿಗೆ ಕಟ್ಟಿದ್ದ ಪೊಟ್ಟಣ ತೆಗೆದು ನೋಡಿದಾಗ ಚಿಕ್ಕ ಕಲ್ಲುಗಳಿದ್ದವು ಎಂದು ಆರೋಪಿಸಲಾಗಿದೆ. ಘಟನೆ ಸಂಬಂಧ ಶಿವಮೊಗ್ಗ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200