ಶಿವಮೊಗ್ಗದ ಲೈವ್.ಕಾಂ | SHIMOGA NEWS | 22 ಡಿಸೆಂಬರ್ 2021
ಬೆಳಗಿನ ಜಾವ ಆಸ್ಪತ್ರೆಗೆ ನಡೆದು ಹೋಗುತ್ತಿದ್ದ ಮಹಿಳೆಯೊಬ್ಬರ ಚಿನ್ನದ ಸರ ಕಳ್ಳತನ ಮಾಡಲಾಗಿದೆ. ಕಳ್ಳರು ಕೊರಳಿಗೆ ಕೈ ಹಾಕುತ್ತಿದ್ದಂತೆ ಎಚ್ಚೆತ್ತುಕೊಂಡ ಮಹಿಳೆ ಸರದ ಒಂದು ಭಾಗವನ್ನ ಹಿಡಿದುಕೊಂಡಿದ್ದಾರೆ. ಹಾಗಾಗಿ ಕಳ್ಳರು ಸರದ ಅರ್ಧ ಭಾಗ, ಮೂರು ಚಿನ್ನದ ಕಾಸನ್ನು ಕದ್ದೊಯ್ದಿದ್ದಾರೆ.
ಹೊನ್ನವಿಲೆ ಗ್ರಾಮದ ಸುನೀತಾ (54) ಎಂಬುವವರ ಸರ ಕಳ್ಳತನ ಮಾಡಲಾಗಿದೆ. ಮೊಮ್ಮಗನೊಂದಿಗೆ ಬೆಳಗಿನ ಜಾವ 4 ಗಂಟೆಗೆ ದುರ್ಗಾ ಕ್ಲಿನಿಕ್’ಗೆ ನಡೆದು ಹೋಗುತ್ತಿದ್ದಾಗ, ದುರ್ಗಿಗುಡಿಯಲ್ಲಿ ಘಟನೆ ಸಂಭವಿಸಿದೆ.
ಆಟೋದಲ್ಲಿ ಬಂದ ಖದೀಮರು
ಸುನೀತಾ ಅವರು ತಮ್ಮ ಸಹೋದರಿಯ ಮನೆಯಿಂದ ಮೊಮ್ಮಗನೊಂದಿಗೆ ಆಸ್ಪತ್ರೆಗೆ ಬರುತ್ತಿದ್ದರು. ಬೆಳಗಿನ ಜಾವ ಯಾವುದೆ ಆಟೋ ಸಿಗದ ಹಿನ್ನೆಲೆ, ಪೇಪರ್ ಹಾಕುವ ಹುಡುಗನೊಬ್ಬನ ನೆರವಿನೊಂದಿಗೆ ಆತನ ಬೈಕಿನಲ್ಲಿ ಸುನೀತಾ ಅವರನ್ನು ಲಕ್ಷ್ಮೀ ಟಾಕೀಸ್’ವರೆಗೆ ಬಂದಿದ್ದಾರೆ. ಅಲ್ಲಿಂದ ನಡೆದುಕೊಂಡು ದುರ್ಗೀಗುಡಿವರೆಗೂ ಸುನೀತಾ ತಮ್ಮ ಮೊಮ್ಮಗನೊಂದಿಗೆ ಬಂದಿದ್ದಾರೆ.
ದುರ್ಗೀಗುಡಿ ಮುಖ್ಯರಸ್ತೆಯಲ್ಲಿ ನಡೆದು ಹೋಗುತ್ತಿದ್ದಾಗ ಸುನೀತಾ ಅವರ ಬಳಿಗೆ ಮೂರು ಮಂದಿ ಆಟೋದಲ್ಲಿ ಬಂದಿದ್ದಾರೆ. ಕೆಳಗಿಳಿದವರೆ ಸುನೀತಾ ಅವರ ಕೊರಳಲ್ಲಿದ್ದ ಚಿನ್ನದ ಸರ ಕಸಿದುಕೊಳ್ಳಲು ಯತ್ನಿಸಿದ್ದಾರೆ. ಈ ಸಂದರ್ಭ, ಎರಡು ಎಳೆಯ ಚಿನ್ನದ ಸರದ ಒಂದು ಭಾಗವನ್ನು ಸುನೀತಾ ಅವರು ಹಿಡಿದುಕೊಂಡು, ರಕ್ಷಣೆಗಾಗಿ ಕೂಗಿಕೊಂಡಿದ್ದಾರೆ. ಮತ್ತೊಂದು ಭಾಗವನ್ನು ಕಸಿದುಕೊಂಡು ಕಳ್ಳರು ಆಟೋದಲ್ಲಿ ಪರಾರಿಯಾಗಿದ್ದಾರೆ.
ಮೂರು ಬಂಗಾರದ ಕಾಸು
ಕಳ್ಳರು ಹಿಡಿದುಕೊಂಡ ಭಾಗದಲ್ಲಿ ಚಿನ್ನದ ಸರದ ಜೊತೆಗೆ ಚಿನ್ನದ ಮೂರು ಕಾಸು ಇತ್ತು ಎಂದು ಸುನೀತಾ ಅವರು ದೂರಿನಲ್ಲಿ ತಿಳಿಸಿದ್ದಾರೆ. ಇದರ ಅಂದಾಜು ಮೌಲ್ಯ 80 ಸಾವಿರ ರೂ. ಎಂದು ಹೇಳಲಾಗುತ್ತಿದೆ.
ಜಯನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸರಗಳ್ಳರ ಪತ್ತೆ ಕಾರ್ಯ ನಡೆಸಲಾಗುತ್ತಿದೆ.
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200