ಶಿವಣ್ಣನ ಮನೆ ಅಡ್ರೆಸ್‌ ಕೇಳುತ್ತಲೆ ಮಹಿಳೆ ಕೊರಳಿಗೆ ಕೈ ಹಾಕಿ ಚಿನ್ನದ ಸರ ಕಸಿದು ಪರಾರಿ

ಶಿವಮೊಗ್ಗ: ಬೈಕ್‌ನಲ್ಲಿ ಬಂದ ಇಬ್ಬರು ಯುವಕರು ವಿಳಾಸ ಕೇಳುವ ನೆಪದಲ್ಲಿ ರತ್ನಮ್ಮ ಎಂಬವವರ ಕೊರಳಲ್ಲಿದ್ದ 70 ಗ್ರಾಂ ತೂಕದ ಬಂಗಾರದ ಸರ (Gold Chain) ಕಸಿದು ಪರಾರಿಯಾಗಿದ್ದಾರೆ. ವಿನೋಬನಗರದ ಲಕ್ಷ್ಮೀಪುರ ಬಡಾವಣೆಯಲ್ಲಿ ಘಟನೆ ನಡೆದಿದೆ.➤ ಸುದ್ದಿಯ ಮುಂದಿನ 3 ಪ್ಯಾರಾಗಳು ಕೆಳಗಿವೆ.

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ

ರತ್ನಮ್ಮ ಅವರು ದೇವಸ್ಥಾನದಿಂದ ಹಿಂತಿರುಗಿ ಮನೆಯ ಕಾಂಪೌಂಡ್‌ ಒಳಗೆ ಬಂದು ಗೇಟ್‌ ಹಾಕುತ್ತಿದ್ದಾಗ ಯುವಕನೊಬ್ಬ ವಿಳಾಸ ಕೇಳುವವನಂತೆ ಬಂದಿದ್ದ. ಶಿವಣ್ಣನ ಮನೆ ಎಲ್ಲಿ ಎಂದು ವಿಚಾರಿಸಿದ್ದ. ತಕ್ಷಣ ರತ್ನಮ್ಮ ಅವರ ಕೊರಳಿಗೆ ಕೈ ಹಾಕಿ ₹2.20 ಲಕ್ಷ ಮೌಲ್ಯದ 70 ಗ್ರಾಂ ತೂಕದ ಚಿನ್ನದ ಸರ ಕಸಿದುಕೊಂಡು ಓಡಿದ್ದಾನೆ. ಬೈಕಿನಲ್ಲಿ ಬಂದಿದ್ದ ಮತ್ತೊಬ್ಬ ಯುವಕನೊಂದಿಗೆ ಪರಾರಿಯಾದ ಎಂದು ಆರೋಪಿಸಲಾಗಿದೆ.

ಚಿನ್ನದ ಸರ ಕಸಿದುಕೊಂಡವನು ಅಂದಾಜು 30 ವರ್ಷದವನಿರಬೇಕು ಎಂದು ಆರೋಪಿಸಿ ದೂರು ನೀಡಲಾಗಿದೆ. ವಿನೋಬನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

200123 Police Jeep With Light jpg

ಇದನ್ನೂ ಓದಿ » ಮಹಿಳೆಗೆ ದುರ್ಗಿಗುಡಿಯ ವಶೀಕರಣ ಜ್ಯೋತಿಷಿ ಕೊಟ್ಟ ಮಡಿಕೆ, ಮನೆಯಲ್ಲಿ ತೆಗೆದಾಗ ಕಾದಿತ್ತು ಶಾಕ್‌

Leave a Comment