SHIVAMOGGA LIVE NEWS | THEFT | 30 ಏಪ್ರಿಲ್ 2022
ಗೋಪಾಳದ ಕೊನೇ ಬಸ್ ನಿಲ್ದಾಣ ಸಮೀಪದ ಮನೆಯೊಂದರಲ್ಲಿ ಬಂಗಾರದ ನೆಕ್ಲಸ್ ಮತ್ತು ನಗದು ಹಣ ಕಳವಾಗಿದೆ. ಹೋಟೆಲ್ ಸಪ್ಲೆಯರ್ ಮೇಲೆ ಅನುಮಾನ ವ್ಯಕ್ತವಾಗಿದ್ದು ಮನೆ ಮಾಲೀಕರು ಪೊಲೀಸರಿಗೆ ದೂರು ನೀಡಿದ್ದಾರೆ.
ಗೋಪಾಳದ ಎಲ್.ಮಂಜುನಾಥ ಅವರು ಹೋಟೆಲ್ ನಡೆಸುತ್ತಿದ್ದಾರೆ. ಸೊರಬ ತಾಲೂಕಿನ ಬೆನ್ನೂರು ಗ್ರಾಮದ ಮೂರ್ತಿ ಎಂಬಾತ ಸಪ್ಲೆಯರ್ ಆಗಿದ್ದ. ಆತ ಮಂಜುನಾಥ ಅವರ ಮನೆಯಲ್ಲೇ ವಾಸವಿದ್ದ. ಏ.24ರಂದು ರಾತ್ರಿ ಮಂಜುನಾಥ ಅವರ ಪತ್ನಿ ಬೆಡ್ರೂಮ್ ನಲ್ಲಿದ್ದ ಬೀರುವಿನ ಲಾಕರ್ನಲ್ಲಿ ಬಂಗಾರದ ನೆಕ್ಲಸ್ ಮತ್ತು 19,500 ರೂ. ನಗದು ಇಟ್ಟಿದ್ದರು.
ಮರುದಿನ ಬೆಳಗ್ಗೆ ನೋಡಿದಾಗ ಕಳವು ಆಗಿರುವುದು ಬೆಳಕಿಗೆಬಂದಿದೆ. ಅದೇ ದಿನ ಮೂರ್ತಿ ಮನೆಯವರಿಗೆ ಹುಷಾರಿಲ್ಲ ಎಂದು ಹೇಳಿ ಬೆಳಗ್ಗೆಯೇ ಊರಿಗೆ ತೆರಳಿದ್ದು ವಾಪಸ್ ಬಂದಿಲ್ಲ. ಹಾಗಾಗಿ ಆತನೇ ಕಳವು ಮಾಡಿದ್ದಾನೆಂದು ಮಂಜುನಾಥ ತುಂಗಾನಗರ ಠಾಣೆಗೆ ದೂರು ನೀಡಿದ್ದಾರೆ.
ಇದನ್ನೂ ಓದಿ – ಕರೆಂಟ್ ಶಾಕ್, ನಾಲ್ಕು ವರ್ಷದ ಬಾಲಕಿ ಸಾವು, ಹೇಗಾಯ್ತು ಘಟನೆ?
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200