
ಶಿವಮೊಗ್ಗ: ವಿದ್ಯಾನಗರದಲ್ಲಿರುವ ಎನ್ಸಿಸಿ ಬೆಟಾಲಿಯನ್ ಕಚೇರಿ ಅವರಣದಲ್ಲಿರುವ ಆರ್ಮಿ ಕ್ಯಾಂಟೀನ್ನಲ್ಲಿ (Army Canteen) ಮದ್ಯ ಕಳ್ಳತನಕ್ಕೆ ಯತ್ನ ನಡೆದಿದೆ. ಈ ಸಂಬಂಧ ವ್ಯಕ್ತಿಯೊಬ್ಬನ ವಿರುದ್ಧ ಪ್ರಕರಣ ದಾಖಲಾಗಿದೆ.
ನಿವೃತ್ತ ಸೈನಿಕರಿಗಾಗಿ ಇರುವ ಲಿಕ್ಕರ್ ಕೌಂಟರ್ ಬಳಿ ಬಂದ ದೇವ ಎಂಬುವನು ಶೋಕೇಸ್ನಲ್ಲಿ ಇಟ್ಟಿದ್ದ ₹260 ಮೌಲ್ಯದ ಬಕಾರ್ಡಿ ಮದ್ಯದ ಬಾಟಲಿ ಕಳ್ಳತನ ಮಾಡಲು ಯತ್ನಿಸಿದ್ದಾನೆ. ಇದನ್ನು ಗಮನಿಸಿದ ಹವಾಲ್ದಾರ್ ಚಿರಂಜೀವಿ ಅವರು ಕೂಡಲೇ ಆರೋಪಿಯನ್ನು ಹಿಡಿದು ವಿಚಾರಣೆ ನಡೆಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಘಟನೆ ಸಂಬಂಧ ಕೋಟೆ ಠಾಣೆಗೆ ದೂರು ನೀಡಿದ್ದರು, ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ – ಹೊಂಬುಜದಲ್ಲಿ ವೈಭದ ರಥೋತ್ಸವ, ಹೇಗಿತ್ತು ಪೂಜೆ? ಎಲ್ಲೆಲ್ಲಿಂದ ಬಂದಿದ್ದರು ಭಕ್ತರು?







