SHIMOGA, 21 AUGUST 2024 : ಬಸ್ ಹತ್ತುವಾಗ ಮಹಿಳೆಯರ ವ್ಯಾನಿಟಿ ಬ್ಯಾಗ್ನಿಂದ (Vanity Bag) ನಗದು, ಚಿನ್ನಾಭರಣ ಕಳ್ಳತನ ಪ್ರಕರಣಗಳು ಮುಂದುವರೆದಿದೆ. ಶಿವಮೊಗ್ಗ ಕೆಎಸ್ಆರ್ಟಿಸಿ ನಿಲ್ದಾಣದಲ್ಲಿ ಮದಾರಿಪಾಳ್ಯದ ಮೊಹಮ್ಮದ್ ಮುಹೀಬುಲ್ಲಾ ಎಂಬುವವರ ಪತ್ನಿಯ ವ್ಯಾನಿಟಿ ಬ್ಯಾಗ್ನಿಂದ ಚಿನ್ನಾಭರಣ ಕಳ್ಳತನ ಮಾಡಲಾಗಿದೆ.
ಟಿಕೆಟ್ಗಾಗಿ ಹಣ ತೆಗೆಯಲು ಹೋದಾಗ
ಮೊಹಮ್ಮದ್ ಮುಹೀಬುಲ್ಲಾ ತನ್ನ ಪತ್ನಿ ಮತ್ತು ಮಕ್ಕಳ ಜೊತೆಗೆ ಕೆಎಸ್ಆರ್ಟಿಸಿ ಬಸ್ಸಿನಲ್ಲಿ ದಾವಣಗೆರೆಗೆ ಹೊರಟಿದ್ದರು. ಶಿವಮೊಗ್ಗ ನಿಲ್ದಾಣದಿಂದ ಬಸ್ ಹತ್ತಿದ್ದು ಸ್ವಲ್ಪ ದೂರ ಹೋದ ಮೇಲೆ ಮುಹೀಬುಲ್ಲಾ ಟಿಕೆಟ್ ಮಾಡಿಸಲು ಎರಡು ರೂ. ಚಿಲ್ಲರೆಗಾಗಿ ಪತ್ನಿ ಬಳಿ ಕೇಳಿದ್ದಾರೆ. ಅವರ ಪತ್ನಿ ವ್ಯಾನಿಟಿ ಬ್ಯಾಗ್ಗೆ ಗಮನಿಸಿದಾಗ ಜಿಪ್ ತೆಗೆದಿರುವುದು ಗೊತ್ತಾಗಿದೆ.
ವ್ಯಾನಿಟಿ ಬ್ಯಾಗ್ನಲ್ಲಿದ್ದ ಚಿನ್ನದ ಉಂಗುರ, ಕಿವಿಯೋಲೆಗಳು ನಾಪತ್ತೆಯಾಗಿದ್ದವು. ಇವುಗಳ ಮೌಲ್ಯ 53 ಸಾವಿರ ರೂ. ಎಂದು ಅಂದಾಜಿಸಲಾಗಿದೆ. ಬಸ್ ಹತ್ತುವಾಗ ಹೆಚ್ಚು ಜನ ಸಂದಣಿ ಇತ್ತು. ಈ ವೇಳೆ ಕಳ್ಳರು ವ್ಯಾನಿಟಿ ಬ್ಯಾಗ್ನಿಂದ ಆಭರಣ ಕದ್ದಿರಬಹುದು ಎಂದು ಶಂಕಿಸಲಾಗಿದೆ. ದೊಡ್ಡಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ ⇒ SHIMOGA JOBS | ಪ್ರತಿ ತಿಂಗಳು 16 ಸಾವಿರ ರೂ. ಸಂಬಳದ ಕೆಲಸ ಖಾಲಿ ಇದೆ
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200