ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
ಶಿವಮೊಗ್ಗ : ಮಹಿಳೆಯೊಬ್ಬರು ಫೇಸ್ಬುಕ್ನಲ್ಲಿ ಕಳುಹಿಸಿದ್ದ ಫ್ರೆಂಡ್ ರಿಕ್ವೆಸ್ಟ್ ಶಿವಮೊಗ್ಗ ಜಿಲ್ಲೆಯ ಅರ್ಚಕರೊಬ್ಬರಿಗೆ (Priest) ಸಂಕಷ್ಟ ತಂದೊಡ್ಡಿದೆ. ಲಕ್ಷ ಲಕ್ಷ ರೂ. ಹಣ ಕಳೆದುಕೊಂಡಿರುವ ಅರ್ಚಕ, ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ಮಮತಾ ಕಳಹಿಸಿದ ರಿಕ್ವೆಸ್ಟ್
ಮಮತಾ ಜಾಯ್ ಎಂಬ ಹೆಸರಿನಲ್ಲಿ ಶಿವಮೊಗ್ಗ ಜಿಲ್ಲೆಯ ಅರ್ಚಕರೊಬ್ಬರಿಗೆ (ಹೆಸರು, ಊರು ಗೌಪ್ಯ) ಫೇಸ್ಬುಕ್ನಲ್ಲಿ ರಿಕ್ವೆಸ್ಟ್ ಬಂದಿತ್ತು. ಕೆಲ ಸಮಯದ ನಂತರ ಆಕೆಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದರು. ರಿಪ್ಲೆ ಮಾಡಿದ ಮಮತಾ ಜಾಯ್, ತನ್ನ ವಾಟ್ಸಪ್ ನಂಬರ್ ಹಂಚಿಕೊಂಡು ಚಾಟಿಂಗ್ ಮಾಡಿದ್ದಳು.

ಲಂಡನ್ ಗಿಫ್ಟ್ ಕತೆ ಹೆಣೆದ ಮಮತಾ
ಬಳಿಕ ಲಂಡನ್ನಲ್ಲಿ ಲ್ಯಾಪ್ಟಾಪ್, ಐ – ಫೋನ್, ಶೂ, ಬಟ್ಟೆ, ಬಂಗಾರದ ಸರ ಸೇರಿದಂತೆ ಬೆಲೆ ಬಾಳುವ ಗಿಫ್ಟ್ಗಳನ್ನು ಖರೀದಿಸಿ ಕಳುಹಿಸುತ್ತಿರುವುದಾಗಿ ಮಮತಾ ಜಾಯ್ ತಿಳಿಸಿದ್ದಳು. ಅವುಗಳ ಫೋಟೊ ಸಹಿತ ಮೆಸೇಜ್ ಕಳುಹಿಸಿದ್ದಳು.

ಇದನ್ನೂ ಓದಿ » ಗಾಜನೂರಿನಲ್ಲಿ ನಡುರಾತ್ರಿ ಕೇಳಿತು ಶಬ್ದ, ಹೊರಗೆ ಕಾಣಿಸ್ತು ಸ್ಯಾಂಟ್ರೋ ಕಾರ್, ಮೊಬೈಲ್ನಲ್ಲಿ ದೃಶ್ಯ ಸೆರೆ, ಏನಿದು ಕೇಸ್?
ಕೊರಿಯರ್ ಸೀಸ್ ಆಗಿದೆ..!
ಫೆ.24ರಂದು ದೆಹಲಿಯ ಕೊರಿಯರ್ ಕಚೇರಿಯಿಂದ ಎಂದು ವ್ಯಕ್ತಿಯೊಬ್ಬ ಕರೆ ಮಾಡಿದ್ದ. ಲಕ್ಷಾಂತರ ಮೌಲ್ಯದ ಗಿಫ್ ಸೀಸ್ ಆಗಿದೆ. ಇದಕ್ಕೆ ಕೊರಿಯರ್ ಚಾರ್ಜ್, ಕಸ್ಟಮ್ಸ್ ಚಾರ್ಜ್, ಇನ್ಕಮ್ ಟ್ಯಾಕ್ಸ್ ಸೇರಿದಂತೆ ನಾನಾ ಚಾರ್ಜ್ ಕಟ್ಟಬೇಕು ಎಂದು ನಂಬಿಸಿ ವಿವಿಧ ಹಂತದಲ್ಲಿ ಹಣ ಪಡೆದಿದ್ದಾರೆ ಎಂದು ಆರೋಪಿಸಲಾಗಿದೆ. ಒಟ್ಟು 6.43 ಲಕ್ಷ ರೂ. ಹಣ ಕಳೆದುಕೊಂಡಿರುವುದಾಗಿ ಅರ್ಚಕ (Priest) ದೂರಿನಲ್ಲಿ ಆರೋಪಿಸಿದ್ದಾರೆ. ಸಿ.ಇ.ಎನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗಿಫ್ಟ್ ಹೆಸರಲ್ಲಿ ವಂಚಿಸ್ತಾರೆ
ಸೈಬರ್ ಖದೀಮರು ದಿನಕ್ಕೊಂದು ವರಸೆ ಬದಲಿಸುತ್ತಾರೆ. ವಿದೇಶದಿಂದ ಉಡುಗೊರೆ ಕಳುಹಿಸುವುದಾಗಿ ನಂಬಿಸಿ ಬಳಿಕ ನಾನಾ ವರಸೆ ತೆಗೆದು ಹಣ ಪಡೆಯುತ್ತಾರೆ. ಲಕ್ಷಾಂತರ ರೂ. ಹಣ ವರ್ಗಾಯಿಸಿಕೊಂಡು ವಂಚಿಸುತ್ತಾರೆ. ಕಳೆದ ಎರಡು ತಿಂಗಳಲ್ಲಿ ಇದು ಎರಡನೇ ಪ್ರಕರಣವಾಗಿದೆ. ಆದ್ದರಿಂದ ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾದವರಿಗೆ ಹಣ ವರ್ಗಾಯಿಸುವಾಗ ಎಚ್ಚರವಿರಲಿ.

LATEST NEWS
- ಸಾವಿನಲ್ಲು ಸಾರ್ಥಕತೆ ಮೆರೆದ ಶಿರಾಳಕೊಪ್ಪದ ಯುವಕ, ಬಹು ಅಂಗಾಂಗ ದಾನ, ಆಗಿದ್ದೇನು?

- ಶಿವಮೊಗ್ಗದ ಕರ್ನಾಟಕ ಸಂಘದಲ್ಲಿ ನಟಿ ರಂಜನಿ ರಾಘವನ್ ಉಪನ್ಯಾಸ, ಯಾವಾಗ? ಏನು ವಿಷಯ?

- ‘ಶಾಸಕರಿಗೆ ಹೇಳಿ ನೀನೆ ತಡೆದಿದ್ದೀಯ’ ಎಂದು ಆರೋಪಿಸಿ ವ್ಯಕ್ತಿ ಮೇಲೆ ಚಪ್ಪಲಿಯಿಂದ ಹಲ್ಲೆ, ಏನಿದು ಪ್ರಕರಣ?

- ಶಿವಮೊಗ್ಗದಲ್ಲಿ ರಾಷ್ಟ್ರಮಟ್ಟದ ಬಯಲು ಕುಸ್ತಿ, ಹೇಗಿತ್ತು ಎರಡನೇ ದಿನದ ಕಾದಾಟ? ಯಾರೆಲ್ಲ ಗೆದ್ದರು?

- ತೀರ್ಥಹಳ್ಳಿಯಲ್ಲಿ ಫಾರ್ಚುನರ್ ಕಾರಿನಲ್ಲಿ ಬಂದು ಇಂಜಿನಿಯರ್ಗೆ ಬೆದರಿಸಿ ಹಣ ವಸೂಲಿ, ಏನಿದು ಕೇಸ್?

About The Editor
ನಿತಿನ್ ಆರ್.ಕೈದೊಟ್ಲು





