SHIVAMOGGA LIVE NEWS | 10 JULY 2024
ಸುದ್ದಿಯ ಮುಂದಿನ ಭಾಗ ಕೆಳಗಿದೆ
BHADRAVATHI : ಮಂಜುನಾಥ ಆಟೊ ಸ್ಪೇರ್ಸ್ ಅಂಗಡಿಯ (SHOP) ರೋಲಿಂಗ್ ಶೆಟರ್ನ ಲಾಕ್ ಮೀಟಿ ಕನ್ನ ಹಾಕಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಭದ್ರಾವತಿಯ ಯಕಿನ್ಸಾ ಕಾಲೋನಿ ನಿವಾಸಿಗಳಾದ ಸೈಯದ್ ಹುಸೇನ್ ಅಲಿಯಾಸ್ ಜಂಗ್ಲಿ (19), ಸೈಯದ್ ಇರ್ಫಾನ್ ಅಲಿಯಾಸ್ ಕಾಲು (21) ಬಂಧಿತರು. ಬಂಧಿತರಿಂದ 40 ಸಾವಿರ ರೂ. ನಗದು ವಶಪಡಿಸಿಕೊಳ್ಳಲಾಗಿದೆ.

ಜೂನ್ 17ರ ರಾತ್ರಿ ಅಂಗಡಿಯ ಬಾಗಿಲು ಮೀಟಿ, ಡ್ರಾನಲ್ಲಿದ್ದ ನಗದು ಕಳವು ಮಾಡಿದ್ದರು. ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡ ಹಳೇನಗರ ಠಾಣೆ ಪೊಲೀಸರು ಕಾರ್ಯಾಚರಣೆ ಕೈಗೊಂಡು ಆರೋಪಿಗಳನ್ನು ಬಂಧಿಸಿದ್ದಾರೆ.
ಇದನ್ನೂ ಓದಿ – ಡೆಂಗ್ಯು ಶಂಕೆ, ಜ್ವರದಿಂದ ಬಳಲುತ್ತಿದ್ದ ರಿಪ್ಪನ್ಪೇಟೆಯ ಮಹಿಳೆ, ಶಿರಾಳಕೊಪ್ಪದ 9 ತಿಂಗಳ ಮಗು ಸಾವು

