ಶಿವಮೊಗ್ಗ ಲೈವ್.ಕಾಂ | SAGARA NEWS | 29 ಆಗಸ್ಟ್ 2021
ಸಾಗರ: ಅರಣ್ಯ ಇಲಾಖೆ ವಾಚರ್ ಕೊಲೆ ಪ್ರಕರಣದ ಉಳಿದ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಸಾಗರ ಪಟ್ಟಣ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮೈಸೂರಿನಲ್ಲಿ ರಿಯಾಜ್ ಪಾಷಾ, ಸೈಯದ್ ಆಬಿದ್ನನ್ನು ಬಂಧಿಸಿದ್ದಾರೆ. ಸಾಗರದ ಅರಣ್ಯ ಇಲಾಖೆಯ ಶ್ರೀಗಂಧ ಕೋಠಿಯ ಕಾವಲು ಕಾಯುತ್ತಿದ್ದ ವಾಚರ್ ನಾಗರಾಜ್ ಅವರನ್ನು ಶೀಗಂಧ ಚೋರರು 2020ರ ಫೆಬವರಿ 7 ರಂದು ಕೊಲೆ ಮಾಡಿ ಶ್ರೀಗಂಧ ದೋಚಿಕೊಂಡು ಪರಾರಿಯಾಗಿದ್ದರು.
ಈ ಪ್ರಕರಣ ತಕ್ಷಣ ಭೇದಿಸಿದ್ದ ಪೊಲೀಸರು ಮೈಸೂರು, ತಮಿಳುನಾಡು ಹಾಗೂ ಬೆಂಗಳೂರು ಮೂಲದ ಒಟ್ಟು ಐವರು ಆರೋಪಿಗಳನ್ನು ಮಾಲು ಸಮೇತ ಬಂಧಿಸಿದ್ದರು. ಇನ್ನುಳಿದ ಆರೋಪಿಗಳು ತಲೆ ಮರೆಸಿಕೊಂಡಿದ್ದರು.
(ಶಿವಮೊಗ್ಗ ಲೈವ್.ಕಾಂ ನಮ್ಮೂರ ನ್ಯೂಸ್ ವಿಭಾಗ – ನಿಮ್ಮೂರ ನ್ಯೂಸ್ಗೆ ನೀವೇ ವರದಿಗಾರರು. ನಿಮ್ಮೂರ ಪ್ರಮುಖ ಘಟನೆಗಳನ್ನು ನೀವೇ ವರದಿ ಮಾಡಬಹುದು. ಫೋಟೊ, ವಿಡಿಯೋ ಸಹಿತ ವರದಿಯನ್ನು ವಾಟ್ಸಪ್ ಅಥವಾ ಈ ಮೇಲ್ ಮಾಡಬಹುದು)
ಶಿವಮೊಗ್ಗ ಲೈವ್ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್ನಲ್ಲಿ ಸುದ್ದಿಗಾಗಿ 7411700200