ಜೋಗ ಸಮೀಪ ನೀರಿನಲ್ಲಿ ಮುಳುಗಿ ಕೃಷಿ ಅಧಿಕಾರಿ, ಬ್ಯಾಂಕ್‌ ಉದ್ಯೋಗಿ ಸಾವು

SHIVAMOGGA LIVE NEWS | 24 SEPTEMBER 2023

ಸುದ್ದಿಯ ಮುಂದಿನ ಭಾಗ ಕೆಳಗಿದೆ

SAGARA : ಈಜಲು ತೆರಳಿದ್ದ ಕೃಷಿ ಅಧಿಕಾರಿ ಸೇರಿ ಇಬ್ಬರು ನೀರುಪಾಲಾಗಿದ್ದಾರೆ (Drowned). ಸಾಗರ ತಾಲೂಕು ಜೋಗ ಸಮೀಪ ವಡನ್‌ಬೈಲ್‌ ಸಮೀಪ ಘಟನೆ ಸಂಭವಿಸಿದೆ.

ಕೃಷಿ ಅಧಿಕಾರಿ ಕೃಷ್ಣ ಕುಮಾರ್‌ (36) ಮತ್ತು ಐಡಿಎಫ್‌ಸಿ ಬ್ಯಾಂಕ್‌ ಉದ್ಯೋಗಿ ಅರುಣ್‌ (28) ಮೃತರು. ವಡನ್‌ಬೈಲ್‌ ಸಮೀಪ ದೇವಿಗುಂಡಿಗೆ ಕುಟುಂಬ ಸಹಿತ ಪ್ರವಾಸಕ್ಕೆ ತೆರಳಿದ್ದರು. ಮಧ್ಯಾಹ್ನ ಊಟದ ಬಳಿಕ ದೇವಿಗುಂಡಿಯಲ್ಲಿ ಈಜಲು ತೆರಳಿದ್ದರು. ಈ ವೇಳೆ ನೀರಿನಲ್ಲಿ ಮುಳುಗಿ (Drowned) ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

Nanjappa Hospital Advertisement

ಇದನ್ನೂ ಓದಿ – ಕರೆಂಟ್‌ ಶಾಕ್‌, ಶಿವಮೊಗ್ಗದಲ್ಲಿ ಕಂಬದ ಮೇಲೆ ಲೈನ್‌ ಮ್ಯಾನ್‌ ಸಾವು

ಇಬ್ಬರು ತಕ್ಷಣ ರಕ್ಷಣೆ ಮಾಡಿ ಸಾಗರದ ಉಪ ವಿಭಾಗೀಯ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಇಬ್ಬರು ಮೃತಪಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. ಕಾರ್ಗಲ್‌ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.

📍 ನಿಮ್ಮೂರ ಸುದ್ದಿ
ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ.
Shivamogga Live Promotion

Leave a Comment