ಶಿವಮೊಗ್ಗ : ಒಂದು ಲೋಡ್ ಗೋಧಿ (Wheat) ಕಳುಹಿಸುವುದಾಗಿ ನಂಬಿಸಿ ಶಿವಮೊಗ್ಗದ ಉದ್ಯಮಿಯೊಬ್ಬರಿಗೆ ಗುಜರಾತ್ ಮೂಲದ ವ್ಯಕ್ತಿಯೊಬ್ಬ 7 ಲಕ್ಷ ರೂ. ವಂಚಿಸಿದ್ದಾನೆ. ಈ ಸಂಬಂಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಿವಮೊಗ್ಗದ ಮನ್ಸೂರ್ ಎಂಬುವವರು ಭತ್ತ, ಜೋಳ, ಗೋಧಿ (Wheat) ವ್ಯಾಪಾರ ಮಾಡುತ್ತಿದ್ದಾರೆ. ಗುಜರಾತ್ ಮೂಲದ ಶೇಖ್ ಮೊಹಮ್ಮದ್ ಫರೀದ್ ಎಂಬಾತ ಮನ್ಸೂರ್ ಅವರಿಗೆ ಪರಿಚಯವಾಗಿದ್ದು, ಗೋಧಿ ಕೊಡಿಸುವುದಾಗಿ ನಂಬಿಸಿದ್ದ. ಒಮ್ಮೆ ಆತ ಕರೆ ಮಾಡಿ ಒಂದು ಲೋಡ್ ಗೋಧಿ ಕಳುಹಿಸುವುದಾಗಿ ತಿಳಿಸಿ ಮೊದಲಿಗೆ 2.50 ಲಕ್ಷ ರೂ. ಹಣ ಕಳುಹಿಸುವಂತೆ ತಿಳಿಸಿದ್ದ.
ಆತನ ಮಾತು ನಂಬಿ ಉದ್ಯಮಿ ಮನ್ಸೂರ್ ಹಣ ಕಳುಹಿಸಿದ್ದರು. ಪುನಃ ಕರೆ ಮಾಡಿದ್ದ ಶೇಖ್ ಮೊಹಮ್ಮದ್ ಫರೀದ್ 4.50 ಲಕ್ಷ ರೂ. ಹಣ ವರ್ಗಾಯಿಸುವಂತೆ ತಿಳಿಸಿದ್ದ. ಒಟ್ಟು 7 ಲಕ್ಷ ರೂ. ಹಣ ವರ್ಗಾಯಿಸಿದರು ಗೋಧಿ ಲೋಡ್ ಬಾರದಿದ್ದರಿಂದ ಮನ್ಸೂರ್ ಅವರು ಶೇಖ್ ಮೊಹಮ್ಮದ್ಗೆ ಕರೆ ಮಾಡಿದ್ದರು. ಆಗ ‘ಹಣವನ್ನು ಕೊಡುವುದಿಲ್ಲ, ಗೋಧಿಯನ್ನು ಕಳುಹಿಸುವುದಿಲ್ಲʼ ಎಂದು ಆತ ಬೆದರಿಕೆ ಒಡ್ಡಿದ್ದಾನೆ ಎಂದು ಆರೋಪಿಸಲಾಗಿದೆ. ಈ ಹಿನ್ನೆಲೆ ದೂರು ನೀಡಿದ್ದಾರೆ.

ಇದನ್ನೂ ಓದಿ » ಪ್ರತಿದಿನ 7 ರಿಂದ 8 ಸಾವಿರ ರೂ. ಲಾಭ, ಮನೆಯಲ್ಲೆ ಕುಳಿತು ಗಳಿಸಬಹುದು ಹಣ, ಮುಂದೇನಾಯ್ತು?
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200